ದೆಹಲಿಯ ಸುಲ್ತಾನರು. TET,GPSTR,HSTR,PDO,FDA,SDA All Competative exam notes.

* ಭಾರತಕ್ಕೆ ಬಂದ ಮೊದಲ ಮುಸ್ಲಿಮರೆಂದರೆ ಅರಬ್ಬರು. ಅನಂತರ ಟರ್ಕರು, ಅಫ್ಘಾನ್ ರು, ಮಂಗೋಲರು ಮತ್ತು ಮೊಘಲರು ಭಾರತದ ಮೇಲೆ ದಾಳಿ ಮಾಡಿದರು.

* ಸಾಮಾನ್ಯ ಶಕ 712 ರಲ್ಲಿ ಅರಬ್ಬರು ಬಸ್ರಾದ ರಾಜ್ಯಪಾಲನಾಗಿದ್ದ ಮಹಮದ್ ಬಿನ್ ಖಾಸಿಂನ ನಾಯಕತ್ವದಲ್ಲಿ ಸಿಂಧ್ ಹಿಂದೂ ದೊರೆಯಾದ ದಾಹಿರ್ ನನ್ನು ರಾವೂರ್ ಕದನದಲ್ಲಿ ಸೋಲಿಸಿ ಸಿಂಧ್ ಪ್ರದೇಶವನ್ನು ಆಕ್ರಮಿಸಿದನು.

* ಭಾರತದ ಮೇಲೆ ದಾಳಿ ಮಾಡಿದ ಪ್ರಥಮ ಮುಸ್ಲಿಂ ದಾಳಿಕೋರ ” ಮಹಮ್ಮದ್ ಬಿನ್ ಖಾಸಿಂ ”

Table of Contents

-: ಮಹಮದ್ ಘಜ್ನಿ ( ಸಾಮಾನ್ಯ ಶಕ 997-1030):-

* ಇವನು ಭಾರತದ ಮೇಲೆ 17 ಬಾರಿ ದಂಡಯಾತ್ರೆ ಮಾಡಿದನು. ( ಸಾಮಾನ್ಯ ಶಕ 1000-1027).

* ಸುಲ್ತಾನ್ ಎಂಬ ಬಿರುದು ಗಳಿಸಿದ ಪ್ರಪಂಚದ ಪ್ರಥಮ ಮುಸ್ಲಿಂ ದೊರೆ.

* ಮಹಮ್ಮದ್ ಘಜ್ನಿ 16ನೇ ದಂಡ ಯಾತ್ರೆ, ಸಾಮಾನ್ಯ ಶಕ 1026 ರಲ್ಲಿ ಗುಜರಾತಿನ ಸೋಮನಾಥ ದೇವಾಲಯವನ್ನು ಲೂಟಿ ಮಾಡಿದನು.

* ಮಹಮ್ಮದ್ ಘಜ್ನಿಯೊಂದಿಗೆ ಭಾರತಕ್ಕೆ ಬಂದಿದ್ದ ಪರ್ಶಿಯಾದ ವಿದ್ವಾಂಸ ಅಲ್ಬೇರೋನಿ.

* ಅಲ್ಬೇರೊನಿ ಕೃತಿ – ಕಿತಾಬ್- ಉಲ್- ಹಿಂದ್

-: ಮಹಮ್ಮದ್ ಘೋರಿ ( ಸಾಮಾನ್ಯ ಶಕ 1149-1206):-

* ಸಾಮಾನ್ಯ ಶಕ 1191ರಲ್ಲಿ ದೆಹಲಿ ಮತ್ತು ಅಜ್ಮೀರ್ ಗಳನ್ನು ಆಳುತ್ತಿದ್ದ ರಜಪೂತ ದೊರೆ ಪೃಥ್ವಿರಾಜ್ ಚೌಹಾಣ್ ನಿಂದ ಮೊದಲ ತರೈನ್ ಕದನದಲ್ಲಿ ಸೋತು ಹೋದನು.

* ಸಾಮಾನ್ಯ ಶಕ 1192 ರಲ್ಲಿ ಎರಡನೇ ತರೈನ್ ಕದನದಲ್ಲಿ ಪೃಥ್ವಿರಾಜ್ ಚೌಹಾಣನನ್ನು ಸೋಲಿಸಿ ಹಾಗೂ ಮತ್ತು ಅಜ್ಮೀರ್ ಗಳನ್ನು ವಶಪಡಿಸಿಕೊಂಡು ಮುಸ್ಲಿಮರ ಆಳ್ವಿಕೆ ಸ್ಥಾಪಿಸಿದನು.

* ಅವನು ಹೆಚ್ಚು ಕಾಲ ಭಾರತದಲ್ಲಿ ನಿಲ್ಲಲಾಗದೆ ಭಾರತದಲ್ಲಿ ಗೆದ್ದ ಪ್ರದೇಶಗಳನ್ನು ತನ್ನ ಪ್ರೀತಿಯ ಗುಲಾಮನಿಗೆ ಒಪ್ಪಿಸಿ ಮಹಮದ್ ಘೋರಿ ಹಿಂದಿರುಗಿದನು.

-: ದೆಹಲಿಯನ್ನು ಕೆಳಕಂಡ ಐದು ಸುಲ್ತಾನ್ ಸಂತತಿಗಳು ಆಳಿದವು.:-

1. ಗುಲಾಮಿ ಸಂತತಿ(ಸಾಮಾನ್ಯ ಶಕ1206-1290).

2. ಖಿಲ್ಜಿ ಸಂತತಿ(ಸಾಮಾನ್ಯ ಶಕ1290-1320).

3. ತುಘುಲಕ್ ಸಂತತಿ(ಸಾಮಾನ್ಯ ಶಕ1320-1414).

4. ಸೈಯದ್ ಸಂತತಿ(ಸಾಮಾನ್ಯ ಶಕ1414-1451).

5. ಲೋದಿ ಸಂತತಿ(ಸಾಮಾನ್ಯ ಶಕ1451-1526).

ಗುಲಾಮಿ ಸಂತತಿ( ಸಾಮಾನ್ಯ ಶಕ1206-1290).

* ಕುತುಬುದ್ದಿನ್ ಐಬಕ್ ಗುಲಾಮಿ ಸಂತತಿಯ ಸ್ಥಾಪಿಸಿದನು.

* ಉದಾರವಾಗಿ ದಾನ ಮಾಡಿ ” ಲಾಖ್ ಭಕ್ಷ ” ಅಂದರೆ ಲಕ್ಷಗಳ ದಾನಿ ಎಂಬ ಬಿರುದು ಗಳಿಸಿದನು.

* ದೆಹಲಿಯ ಕುತುಬ್ ಮಿನಾರ್ ಸ್ತಂಭವನ್ನು ಕಟ್ಟಲು ಪ್ರಾರಂಭಿಸಿದನು.

* ಅಜ್ಮೀರದಲ್ಲಿ ಅಡ್ಡಾ- ಈ-ದಿನ್ ಕಾ ಜೋಂಪ್ರಾ ಎಂಬ ಮಸೀದಿಯನ್ನು ನಿರ್ಮಿಸಿದನು.ಅಜ್ಮೀರ್ ಅನ್ನು ಮಸೀದಿಗಳ ನಗರ ಎನ್ನುವರು.

* ಕುತ್ಬುದ್ದಿನ ಐಬಕ್ ಸಾಮಾನ್ಯ ಶಕ 1210 ರಲ್ಲಿ ಪೋಲೋ ಆಟವಾಡುತ್ತಿದ್ದಾಗ ಕುದುರೆ ಮೇಲಿದ್ದ ಬಿದ್ದು ಮೃತನಾದನು.

       -: ಇಲ್ತಮಶ್:-

* ಕುತುಬ್ ಮಿನಾರ್ ಕಟ್ಟಡವನ್ನು ಪೂರ್ಣಗೊಳಿಸಿದನು. ಇದು ದೆಹಲಿಯಲ್ಲಿದೆ.

* ಸುಲ್ತಾನ್ ಎಂಬ ಬಿರುದು ಧರಿಸಿದ ಮೊದಲ ಭಾರತೀಯ ಮುಸಲ್ಮಾನ್ ದೊರೆ.

* ರಾಜಧಾನಿಯನ್ನು ಲಾಹೋರ್ ನಿಂದ ದೆಹಲಿಗೆ ವರ್ಗಾಯಿಸಿದನು.

* ಸುಪ್ರಸಿದ್ಧ ತುರ್ಕಿ ನೋಬಲರ 40 ರ ತಂಡವಾದ ಚಹಲ್ ಗನಿ ರಚಿಸಿದನು .

* ಆಡಳಿತದಲ್ಲಿ ದಕ್ಷತೆ ತರಲು ತನ್ನ ಸಾಮ್ರಾಜ್ಯವನ್ನು ಇಕ್ತಾಗಳಾಗಿ ವಿಭಾಗಿಸಿದನು.

    -: ರಜಿಯಾ ಸುಲ್ತಾನಾ:-

* ಇಲ್ತಮಶನ ಮಗಳಾದ ಈಕೆ ದೆಹಲಿ ಸಿಂಹಾಸನ ಆಳಿದ ಮೊದಲ ರಾಣಿ.

-: ಘಿಯಾಸುದ್ದೀನ್ ಬಲ್ಬನ್ :-

* ಗುಲಾಮಿ ಸಂತತಿಯ ಅತ್ಯಂತ ಪ್ರಸಿದ್ಧ ಸುಲ್ತಾನ

* ರಕ್ತ ಮತ್ತು ಕಬ್ಬಿಣ ನೀತಿ ಅನುಸರಿಸಿ ಸುಲ್ತಾನನ ಪ್ರತಿಷ್ಠೆಯನ್ನು ಹೆಚ್ಚಿಸಿದನು.

* ನಲವತ್ತರ ತುರ್ಕಿ ಸರ್ದಾರರ ತಂಡ ಅಂದರೆ ಚಹಲ್ಗಾನಿಯನ್ನು ವಿಸರ್ಜಿಸಿದನು.

* ಭಾರತದ ಗಿಳಿ ಎಂದು ಕರೆದಿರುವ ಕವಿ ಅಮೀರ್ ಖುಸ್ರು ಗೆ ಆಶ್ರಯ ನೀಡಿದನು.

* ಇವನು ಸಿಜದಾ ಪದ್ಧತಿ ಮತ್ತು ಪೈ ಬೋಸ್ ಪದ್ಧತಿಗಳನ್ನು ಜಾರಿಗೆ ತಂದನ.

* ಸೈನ್ಯದ ಮೇಲ್ವಿಚಾರಣೆ ಮಾಡಲು ದಿವಾನ್- ಇ- ಅರಿಜ್ ( ಅರಿಜ್- ಈ-ಮಾಮೂಲಿಕ್) ಎಂಬ ಇಲಾಖೆಯನ್ನು ಸ್ಥಾಪಿಸಿ ಇಮ್ಮಾದ್ -ಉಲ್-ಮುಲ್ಕ್ ನನ್ನು ನೇಮಿಸಿದನು.

-: ಖಿಲ್ಜಿ ಸಂತತಿ ( ಸಾಮಾನ್ಯ ಶಕ1290-1320):-

* ಜಲಾಲುದ್ದೀನ್ ಫಿರೋಜ್ ಖಿಲ್ಜಿ ಸಂತತಿಯ ಸ್ಥಾಪಕ.

-: ಅಲ್ಲಾವುದ್ದೀನ್ ಖಿಲ್ಜಿ:-

* ಇವನನ್ನು ದ್ವಿತೀಯ ಅಲೆಕ್ಸಾಂಡರ್ ಮತ್ತು ಎರಡನೇ ಸಿಕಂದರ್ ಎಂದು ಕರೆಯುತ್ತಾರೆ.

* ದಕ್ಷಿಣ ಭಾರತದ ಮೇಲೆ ದಾಳಿ ಮಾಡಿದ ಮೊದಲ ಮುಸ್ಲಿಂ ದೊರೆ.

ಅಲ್ಲಾವುದ್ದೀನ್ ಖಿಲ್ಜಿಯ ಸಾಧನೆಗಳು.

ಉತ್ತರ ಭಾರತದ ದಿಗ್ವಿಜಯಗಳು.

1. ಗುಜರಾತ್ ಆಕ್ರಮಣ(ಸಾಮಾನ್ಯ ಶಕ 1297)- ರಜಪೂತ ದೊರೆ ಕರ್ಣದೇವನು ಗುಜರಾತ್ ಅನ್ನು ಆಳುತ್ತಿದ್ದನು.

2. ರಣತಂಬೋರ್ ಆಕ್ರಮಣ(ಸಾಮಾನ್ಯ ಶಕ1301)- ರಾಜ ಹಮ್ಮೀರ ದೇವನು ರಣತಂಬೂರನ್ನು ಆಳುತ್ತಿದ್ದನು.

3. ಮೇವಾರ್ ಅಥವಾ ಚಿತ್ತೂರು ಅಕ್ರಮಣ(ಸಾಮಾನ್ಯ ಶಕ1303)- ರಾಣಾ ರತನ್ ಸಿಂಗನ ಸುಂದರ ಪತ್ನಿ ಪದ್ಮಿನಿಯನ್ನು ಒತ್ತೊಯ್ಯಬೇಕೆಂಬ ಅಲ್ಲಾವುದ್ದೀನ್ ಖಿಲ್ಜಿಯ ಬಲವಾದ ಇಚ್ಛೆ ಇದಕ್ಕೆ ಕಾರಣ.

4. ಇತರೆ ಆಕ್ರಮಣಗಳು :- ಮಾಳ್ವ, ಉಜ್ಜೈನ್, ಮಂಡು, ದಾರ್, ಚಾಂದೇರಿ ಮತ್ತು ಜೋಲೂರ್ ರಾಜ್ಯಗಳನ್ನು ಗೆಲ್ಲುವುದರೊಂದಿಗೆ ಸಾಮಾನ್ಯ ಶಕ 1305 ರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಉತ್ತರ ಭಾರತದ ದಿಗ್ವಿಜಯಗಳನ್ನು ಪೂರ್ಣಗೊಳಿಸಿದನು.

ದಕ್ಷಿಣ ಭಾರತದ ದಂಡಯಾತ್ರೆಗಳು.

* ಇವನು ತನ್ನ ಸಮರ್ಥ ಸೇನಾನಿಯಾಗಿದ್ದ ಮಲ್ಲಿಕಾಫರ್ನನ್ನು ದಕ್ಷಿಣ ಭಾರತದ ದಂಡಯಾತ್ರೆಗೆ ನಿಯೋಜಿಸಿದನು.

1. ದೇವಗಿರಿಯ ಮೇಲೆ ಆಕ್ರಮಣ(ಸಾಮಾನ್ಯ ಶಕ1307)- ದೇವಗಿರಿಯ ರಾಜ ರಾಮಚಂದ್ರದೇವನು ಕರುಣದೇವ ಮತ್ತು ಅವನ ಮಗಳು ದೇವಲ ದೇವಿಯರಿಗೆ ಆಶ್ರಯ ನೀಡಿದ್ದು ಮೂರು ವರ್ಷಗಳಿಂದಲೂ ಕಪ್ಪ ಕಾಣಿಕೆ ಕೊಟ್ಟಿಲ್ಲ ಈ ಕಾರಣದಿಂದಾಗಿ ಅಲ್ಲಾವುದ್ದೀನ್ ಖಿಲ್ಜಿ 30,000 ಸೈನಿಕರೊಂದಿಗೆ ಮಲ್ಲಿಕಾಫನನ್ನು ದೇವಗಿರಿಗೆ ಕಳುಹಿಸಿದನು.

2. ವಾರಂಗಲ್ ನಲ್ಲಿ ದಂಡ ಯಾತ್ರೆ(ಸಾಮಾನ್ಯ ಶಕ1309).

* ರಾಜ ಪ್ರತಾಪ ರುದ್ರನು ಇಲ್ಲಿ ಆಳುತ್ತಿದ್ದ ಅವನನ್ನು ಸೋಲಿಸಿ ಶಾಂತಿ ಒಪ್ಪಂದ ಮಾಡಿಕೊಂಡನು.

* ಯುದ್ಧದಲ್ಲಿ ಕೊಳ್ಳೆ ಹೊಡೆದ ಸಂಪತ್ತನ್ನು ಮಲ್ಲಿಕಾಪರ್ ನ್ನು ಸಾವಿರ ಒಂಟೆಗಳ ಮೇಲೆ ದೆಹಲಿಗೆ ಸಾಗಿಸುವಾಗ ಅವು ಭಾರದಿಂದ ನರಳಿದವು ಎಂದು ಅಮೀರ್ ಖಸ್ರೋ ಹೇಳಿದ್ದಾನೆ.

3. ದ್ವಾರಸಮುದ್ರದ ಮೇಲೆ ದಾಳಿ(ಸಾಮಾನ್ಯ ಶಕ1310).

* ಹೊಯ್ಸಳ ರಾಜ ಮೂರನೇ ವೀರಬಲ್ಲಾಳ ದ್ವಾರಸಮುದ್ರ ಆಳುತ್ತಿದ್ದನು.

* ವೀರ ಬಲ್ಲಾಳನು ಸೋಲಿಸಿ ವಾರ್ಷಿಕ ಕಪ್ಪ ಕಾಣಿಕೆ ನೀಡಲು ಒಪ್ಪಿಸಲಾಯಿತು.

4. ಮಧುರೈ ಆಕ್ರಮಣ(ಸಾಮಾನ್ಯ ಶಕ1311).

* ಮಧುರೈ ನಲ್ಲಿ ಸುಂದರಪಾಂಡೆ ಮತ್ತು ವೀರಪಾಂಡೆ ಎಂಬ ಇಬ್ಬರು ಸಹೋದರರ ಮಧ್ಯೆ ಕಲಹ ಏರ್ಪಟ್ಟಿತ್ತು.

5. ದೇವಗಿರಿಯ ಮೇಲೆ ಎರಡನೇ ಆಕ್ರಮಣ(ಸಾಮಾನ್ಯ ಶಕ1312).

* ಶಂಕರದೇವನು ಈ ಸಂದರ್ಭದಲ್ಲಿ ಆಳುತ್ತಿದ್ದನು ಕಪ್ಪ ಕಾಣಿಕೆಯನ್ನು ನೀಡದೆ ಇರುವುದರಿಂದ ಮಲ್ಲಿಕಾಫರ್ ಮತ್ತೊಮ್ಮೆ ಆಕ್ರಮಣ ಮಾಡಿ ಅವನನ್ನು ಸೋಲಿಸಿ ಸಾಯಿಸಿದನು.

-: ಅಲ್ಲಾವುದ್ದೀನ್ ಖಿಲ್ಜಿಯ ಸುಧಾರಣೆಗಳು :-

* ಅಲ್ಲಾವುದ್ದೀನ್ ಖಿಲ್ಜಿ ತನ್ನನ್ನು ತಾನು ” ಭೂಮಿಯ ಮೇಲೆ ದೇವರ ಪ್ರತಿನಿಧಿ ಅಥವಾ ದೇವರ ನೆರಳು” ಎಂದು ಹೇಳಿದನು.

* ಕುದುರೆಗಳಿಗೆ ಮುದ್ರೆ ಹಾಕುವ ಪದ್ಧತಿಯನ್ನು ಜಾರಿಗೊಳಿಸಿದನು. ಇದನ್ನು ” ದಾಘ” ಎನ್ನುವರು.

* ಸೈನಿಕರ ಚಹರೆಗಳನ್ನು ಗುರುತಿಸಿ ದಾಖಲು ಮಾಡಿಕೊಳ್ಳುವ ಪದ್ಧತಿ ” ಚಹರ/ಹುಲಿಯ” ಜಾರಿಗೊಳಿಸಿದನು.

* ರೈತರಿಂದ ಭೂ ಕಂದಾಯವನ್ನು ಸಂಗ್ರಹಿಸಲು ” ಮುಸ್ತ ಕರಾಜ” ಎಂಬ ವಿಶೇಷ ಅಧಿಕಾರಿಯ ಹುದ್ದೆಯನ್ನು ಸೃಷ್ಟಿಸಿದನು.

* ಮಾರುಕಟ್ಟೆಗಳನ್ನು ನಿಯಂತ್ರಿಸಲು ” ಸಹನಾ- ಇ- ಮಂಡಿ ” ಎಂಬ ಉನ್ನತ ಅಧಿಕಾರಿಯನ್ನು ನೇಮಕ ಮಾಡಿದನು.

* ” ದಿವಾನಿ ರಿಯಾಸತ್” ಎಂಬ ಇಲಾಖೆಯು ಮಾರುಕಟ್ಟೆ ನಿಯಂತ್ರಣದ ಮೇಲ್ವಿಚಾರಣೆ ಮಾಡುತ್ತಿತ್ತು.

-: ಸೈನಿಕ ಸುಧಾರಣೆಗಳು :-

* ತನ್ನ ಸಾಮ್ರಾಜ್ಯ ರಕ್ಷಿಸಿಕೊಳ್ಳಲು ಅಲ್ಲಾವುದ್ದೀನ್ ಖಿಲ್ಜಿ, ಪ್ರಬಲ ಮತ್ತು ಬೃಹತ್ ಸರ್ವಸನ್ನದ್ಧ ಸೈನ್ಯವನ್ನು ಇಟ್ಟುಕೊಂಡಿದ್ದನು.

* ಕುದುರೆಗಳಿಗೆ ಮುದ್ರೆ ಹಾಕುವ ಪದ್ಧತಿ, ಜಾರಿಗೊಳಿಸಿದನು ಸೈನಿಕರ ನಕಲಿ ಹಾಜರಾತಿಯನ್ನು ಮತ್ತು ಭ್ರಷ್ಟಾಚಾರವನ್ನು ತಡೆಯಲು ಅವರ ವಿವರ್ಣಾತ್ಮಕ ದಾಖಲೆಗಳ ನಿರ್ವಹಣೆಯನ್ನು ಜಾರಿಗೊಳಿಸಿದನು.

* ಅವನು ” ಜಾಗಿರ್ ಪದ್ಧತಿಯನ್ನು ” ರದ್ದುಪಡಿಸಿ ನಗದು ರೂಪದಲ್ಲಿ ವೇತನ ನೀಡಲಾರಂಬಿಸಿದನು.

* ಸೈನಿಕರಿಗೆ ವಾರ್ಷಿಕ 234 ಟಂಕಗಳ ವೇತನ ನಿಗದಿಗೊಳಿಸಿದನು ಅಲ್ಲದೆ ಎರಡು ಕುದುರೆಗಳನ್ನು ನಿರ್ವಹಿಸುತ್ತಿದ್ದ ಸೈನಿಕನಿಗೆ 78 ಟಂಕಗಳ ಹೆಚ್ಚುವರಿ ವೇತನ ನೀಡಲಾಗುತ್ತಿತ್ತು.

* ಅರೀಜ್-ಇ-ಮುಮಾಲಿಕ್ ಎಂಬ ಅಧಿಕಾರಿಯು ಸೈನಿಕರ ನೇಮಕಾತಿ ಅಧಿಕಾರವನ್ನು ಹೊಂದಿದ್ದನು.

-: ಕಂದಾಯ ಸುಧಾರಣೆಗಳು :-

* ವೈಜ್ಞಾನಿಕ ತಳಹದಿಯ ಮೇಲೆ ಭೂಮಾಪನ ಪದ್ದತಿಯನ್ನು ಆರಂಭಿಸಿ, ಭೂ ಕಂದಾಯವನ್ನು ನಿಗದಿಗೊಳಿಸಿದ.

* ಸರ್ದಾರರು, ಜಾಗೀರ್ ದಾರರು ಮತ್ತು ಒಲೆಮಾರ ಮೇಲೆ ಅವನು ಹೆಚ್ಚಿನ ತೆರಿಗೆಗಳನ್ನು ಹೇರಿದನು.

* ಮುಸ್ಲಿಮೇತರರ ಮೇಲೆ ” ಜೆಜಿಯಾ” ತಲೆ ಕಂದಾಯವನ್ನು ವಿಧಿಸಿದನು. ಅವರು ಯಾತ್ರಾತೆರಿಗೆ, ಸರಕು ತೆರಿಗೆ ಮುಂತಾದವುಗಳೊಂದಿಗೆ ಇದನ್ನು ಕೊಡಬೇಕಾಗಿತ್ತು.

* ಕಂದಾಯ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಲಂಚಗುಳಿತನವನ್ನು ತಡೆಯುವ ಉದ್ದೇಶದಿಂದ ಅವರು ವೇತನಗಳನ್ನು ಹೆಚ್ಚಿಸಿದನು.

* ರೈತರಿಂದ ಭೂ ಕಂದಾಯವನ್ನು ಸಂಗ್ರಹಿಸಲು ” ಮುಸ್ತಕ ರಾಜ್ ” ಎಂಬ ವಿಶೇಷ ಅಧಿಕಾರಿಯ ಹುದ್ದೆಯನ್ನು ಸೃಷ್ಟಿಸಿದನು.

-: ತುಘುಲಕ್ ಸಂತತಿ( ಸಾಮಾನ್ಯ ಶಕ1320-1414).:-

* ಘಿಯಾಸುದ್ದಿನ್ ತುಘುಲಕ್ ಈ ವಂಶದ ಸ್ಥಾಪಕ.

* ಘಿಯಾಸುದ್ದಿನ್ ತುಘುಲಕ್ ಕೃಷಿಗಾಗಿ ನೀರಾವರಿ ಕಾಲುವೆಗಳ ನಿರ್ಮಾಣ ಆರಂಭಿಸಿದ ಮೊದಲ ದೊರೆ.

* ಪ್ರಥಮ ಬಾರಿಗೆ ದೆಹಲಿಯಲ್ಲಿ ಅಂಚೆ ವ್ಯವಸ್ಥೆಯನ್ನು ಜಾರಿಗೆ ತಂದನು ಇದಕ್ಕಾಗಿ ಕುದುರೆಗಳನ್ನು ಬಳಸಿಕೊಂಡನು.

-: ಮಹಮ್ಮದ್ ಬಿನ್ ತುಘುಲಕ್ :-

* ಈತನನ್ನು ಪ್ರಪಂಚದ ಆಶ್ಚರ್ಯಕರ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

* ವಿ.ಎ ಸ್ಮಿತ್ ಎಂಬ ಇತಿಹಾಸಕಾರರ ಪ್ರಕಾರ ಈತ ಪರಸ್ಪರ ವಿರುದ್ಧ ಗುಣಗಳ ಮಿಶ್ರಣ.

ಆಡಳಿತಾತ್ಮಕ ಪ್ರಯೋಗಗಳು.

1. ಗಂಗಾ ಮತ್ತು ಯಮುನಾ ತೆರಿಗೆಗಳ ಹೆಚ್ಚಳ.

2. ರಾಜಧಾನಿ ವರ್ಗಾವಣೆ1327(ದೆಹಲಿ- ದೇವಗಿರಿ).

3. ಸಾಂಕೇತಿಕ ನಾಣ್ಯ ಪ್ರಯೋಗ.

4. ದಿವಾನ್-ಇ-ಕೋಹಿ ಎಂಬ ಹೊಸ ಕೃಷಿ ಇಲಾಖೆಯನ್ನು ಸ್ಥಾಪಿಸಿದನು.

-: ಫಿರೋಜ್ ಷಾ ತುಘುಲಕ್ :-

* ಇವನನ್ನು ಲೋಕೋಪಯೋಗಿ ಇಲಾಖೆಯ ಸುಲ್ತಾನ ಎಂದು ಕರೆಯುತ್ತಾರೆ.

-: ಸಯ್ಯದ್ ಸಂತತಿ( ಸಾಮಾನ್ಯ ಶಕ1414-1451):-

* ಖಿಜರ್ ಖಾನ್ ಈ ಸಂತತಿಯ ಸ್ಥಾಪಕ.

* ಈ ವಂಶದ ಕೊನೆಯ ದೊರೆ ಅಲ್ಲಾವುದ್ದೀನ್ ಆಲಂ ಷಾ

-: ಲೋದಿ ಸಂತತಿ ( ಸಾಮಾನ್ಯ ಶಕ1451-1526):-

* ಇಬ್ರಾಹಿಂ ಲೋದಿ ದೆಹಲಿ ಮತ್ತು ಲೋದಿ ಮನೆತನದ ಕೊನೆಯ ದೊರೆ.

* ಮೊದಲ ಪಾಣಿಪತ್ ಕದನ 1526 ರಲ್ಲಿ ಬಾಬರ್ ಮತ್ತು ಇಬ್ರಾಹಿಂ ಲೋದಿಯ ಮಧ್ಯ ಜರುಗಿತು.

* ಈ ಕದನದಲ್ಲಿ ಇಬ್ರಾಹಿಂ ಲೋದಿ ಮರಣ ಹೊಂದಿದನು.

 

 

 

WhatsApp Group Join Now
Telegram Group Join Now