ಬಾದಾಮಿ ಚಾಲುಕ್ಯರು ಮತ್ತು ಪಲ್ಲವರು.TET,GPSTR,HSTR,PDO, All Competative exam notes.

ಬಾದಾಮಿ ಚಾಲುಕ್ಯರು ( ಸಾಮಾನ್ಯ ಶಕ 500-757).

* ಕರ್ನಾಟಕದ ಇತಿಹಾಸದಲ್ಲಿ ಪ್ರಬಲವಾಗಿ ಆಡಳಿತ ಮಾಡಿದ ಮನೆತನ.

* ರಾಜಧಾನಿ – ಬಾದಾಮಿ ಅಥವಾ ವಾತಾಪಿ ಈಗಿರುವ ಬಿಜಾಪುರ ಜಿಲ್ಲೆ.

* ಸ್ಥಾಪಕ – ಜಯಸಿಂಹ ಇವನು ಕದಂಬರ ಸಾಮಂತರನಾಗಿದ್ದನು.

* ಲಾಂಛನ – ವರಾಹ

* ಇವರ ಆರಂಭದ ರಾಜಧಾನಿ – ಐಹೊಳೆ.

ಮಂಗಳೇಶ( ಸಾಮಾನ್ಯ ಶಕ 596-609).

* ಮಹಾಕೂಟದಲ್ಲಿ ಮಹಾಕೂಟೇಶ್ವರ ಆಲಯ ಮತ್ತು ಮಹಾಕೂಟ ಸ್ತಂಭ ಶಾಸನ ನಿರ್ಮಿಸಿದನು.

* ಇವನನ್ನು ಚಾಲುಕ್ಯ ಕಲೆಯ ಪಿತಾಮಹ ಎಂದು ಕರೆಯಲಾಗಿದೆ.

* ತನ್ನ ಕೊನೆಯ ದಿನಗಳಲ್ಲಿ ತನ್ನ ಮಗನನ್ನು ಅಧಿಕಾರಕ್ಕೆ ತರುವ ಸಂಚಿನಲ್ಲಿ ಇದ್ದಾಗಲೇ ಕೀರ್ತಿವರ್ಮನ ಮಗನಾದ ಇಮ್ಮಡಿ ಪುಲಕೇಶಿಯಿಂದ ಕೊಲೆಯಾದ .

ಇಮ್ಮಡಿ ಪುಲಕೇಶಿ ( ಸಾಮಾನ್ಯ ಶಕ 610-642).

* ಐಹೊಳೆ ಶಾಸನ ಇವನ ದಿಗ್ವಿಜಯ ಮತ್ತು ಚಾಲುಕ್ಯರ ಸಂತತಿಯ ಪೂರ್ಣ ವಿವರ ತಿಳಿಸಲು ಸಹಕಾರಿಯಾಗಿದೆ.

* ಚಾಲುಕ್ಯರ ಪ್ರಸಿದ್ಧ ದೊರೆ.

* ಇವನ ಆಸ್ಥಾನದ ಕವಿ ರವಿ ಕೀರ್ತಿಯು ಮೇಗುತಿ ದೇವಾಲಯದ ಗೋಡೆ ಮೇಲೆ ಸಂಸ್ಕೃತದಲ್ಲಿ ಶಾಸನವನ್ನು ಕೆತ್ತಿಸಿದನು.

* ಪುಲಿಕೇಶಿ ತನ್ನ ರಾಯಭಾರಿಯನ್ನು ಪರ್ಶಿಯಾದ ದೊರೆ ಎರಡನೇ ಖುಸ್ರುವಿನ ಆಸ್ಥಾನಕ್ಕೆ ಕಳುಹಿಸಿದನು ಹಾಗೆಯೇ ಖುಸ್ರು ತನ್ನ ರಾಯಭಾರಿಯನ್ನು ಎರಡನೇ ಪುಲಿಕೇಶಿ ಆಸ್ಥಾನಕ್ಕೆ ಕಳುಹಿಸಿದನು.ಈ ಮಾಹಿತಿ ಅಜಂತಾದ ಒಂದನೇ ಗುಹೆಯ ಚಿತ್ರಗಳಲ್ಲಿ ಕಾಣಬಹುದು.

* ಈತನ ಆಸ್ಥಾನಕ್ಕೆ ಚೀನಾದ ಯಾತ್ರಿಕ ಹ್ಯೂಯೆನ್ ತ್ಸಾಂಗ್ ಭೇಟಿ ನೀಡಿದನು .

ನರ್ಮದಾ ನದಿ ಕದನ ( ಸಾಮಾನ್ಯ ಶಕ 630-631).

* ಉತ್ತರಪಥೇಶ್ವರನಾದ ಹರ್ಷವರ್ಧನ ಮತ್ತು ದಕ್ಷಿಣ ಪಥೇಶ್ವರನಾದ ಇಮ್ಮಡಿ ಪುಲಕೇಶಿ ನಡುವೆ ನರ್ಮದಾ ನದಿ ದಂಡೆ ಮೇಲೆ ನಡೆದ ಈ ಕದನದಲ್ಲಿ ಇಮ್ಮಡಿ ಪುಲಕೇಶಿ ಜಯವಾಯಿತು ಎಂದು ತಿಳಿಸುವ ಶಾಸನ ಐಹೊಳೆ ಶಾಸನ ಇದನ್ನು ಹೊರಡಿಸಿದವರು ರವಿ ಕೀರ್ತಿ.

* ಈ ಕದನದಲ್ಲಿ ಗೆದ್ದಂತಹ ಪುಲಕೇಶಿ ಪರಮೇಶ್ವರ ಎಂಬ ಬಿರುದು ಧರಿಸಿದನು.

* ಕೌಮುದಿ ಮಹೋತ್ಸವ ಕೃತಿ ಬರೆದಿರುವ ವಿಜಯ ಭಟ್ಟಾರಿಕೆ ಪುಲಕೇಶಿಯ ಚಂದ್ರಾದಿತ್ಯನ ರಾಣಿಯಾಗಿದ್ದಳು.

* ಪುಲಕೇಶಿಯನ್ನು ಶಾಸನಗಳಲ್ಲಿ ಎದೆಯ, ಎರೆಯಮ್ಮ, ಎರೆಯತೀಡಗಳು ಎಂದು ಕರೆಯಲಾಗಿದೆ.ಇವು ಆತನ ಮೂಲ ಹೆಸರಾಗಿವೆ.

ಒಂದನೇ ವಿಕ್ರಮಾದಿತ್ಯ (ಸಾಮಾನ್ಯ ಶಕ 655-681).

* ಪಲ್ಲವರ ಅರಸ ಒಂದನೇ ನರಸಿಂಹವರ್ಮನನ್ನು ಕೊಲೆ ಮಾಡಿ ಬಾದಾಮಿಯನ್ನು ಪಡೆದುಕೊಂಡಿದ್ದಕ್ಕಾಗಿ ಇವನನ್ನು ಬಾದಾಮಿ ಚಾಲುಕ್ಯರ ಪುನರ್ ಸ್ಥಾಪಕ ಎನ್ನುವರು.

ವಿನಯಾದಿತ್ಯ ( ಸಾಮಾನ್ಯ ಶಕ 689-696).

* ಒಂದನೇ ವಿಕ್ರಮಾದಿತ್ಯನ ಮಗನಾದ ಇವನು ಕನೋಜದ ಯಶೋವರ್ಮನನ್ನು ಸೋಲಿಸಿದನು.

* ರನ್ನನು ವಿನಯಾದಿತ್ಯ ನನ್ನು ತನ್ನ ಕೃತಿಯಲ್ಲಿ ದುರ್ಧರ ಮಲ್ಲ ಎಂದು ಕರೆದಿದ್ದಾರೆ.

* ಇವನು ತನ್ನ ರಾಯಭಾರಿಯನ್ನು ಚೈನಾಗಿ ಕಳುಹಿಸಿದನು.

ಎರಡನೇ ವಿಕ್ರಮಾದಿತ್ಯ ( ಸಾಮಾನ್ಯ ಶಕ 734-744).

* ಆಡಳಿತ.

* ಶಾಸನಗಳಲ್ಲಿ ದೊರೆಯುವಂತೆ ಸಾಮ್ರಾಜ್ಯವನ್ನು ಮಂಡಲ, ವಿಷಯ, ನಾಡು, ಕಂಪಣ, ಗ್ರಾಮಗಳಾಗಿ ವಿಭಾಗಿಸಲಾಗಿತ್ತು.

* ಚಾಲುಕ್ಯರ ಸೈನ್ಯವನ್ನು” ಕರ್ನಾಟಕ ಬಲ ” ಎನ್ನುತ್ತಿದ್ದರು .

* ಪ್ರಾಂತ್ಯಗಳಿಗೆ ಪ್ರಾಂತ್ಯಾಧಿಕಾರಿ ನಾಡುಗಳಿಗೆ ನಾಡಗಾವುಂಡ ಗ್ರಾಮಗಳಿಗೆ ಗೌಂಡ ಮುಖ್ಯಸ್ಥರಾಗಿದ್ದರು.

 -: ಆರ್ಥಿಕ ಸ್ಥಿತಿ :-

* ಭೂ ಕಂದಾಯ 1/6 ರಷ್ಟು ಇದನ್ನು ಸಿದ್ದಿಯ ಎನ್ನುತ್ತಿದ್ದರು.

* ಹೆರ್ಜೆಂಕ ಪೇರುಗಳ ಮೇಲಿನ ತೆರಿಗೆ .

* ಪನ್ನೆಯ – ವಿಳೆದೆಲೆ ಮೇಲಿನ ತೆರಿಗೆ.

* ಇವನ ಕಾಲದ ನಾಣ್ಯಗಳು ವರಹ, ಗದ್ಯಾಣ .

* ವಿಜ್ಜಿಕೆ ಅಥವಾ ವಿಜಯ ಭಟ್ಟಾರಿಗೆ – ಕೌಮುದಿ ಮಹೋತ್ಸವ.

* ಶಿವ ಭಟ್ಟಾರಕರ – ಹರಪಾರ್ವತಿಯ.

 -: ಕಲೆ ಮತ್ತು ವಾಸ್ತು ಶಿಲ್ಪ :-

* ಇದರ ಪ್ರಮುಖ ಲಕ್ಷಣ ಎಂದರೆ ಎತ್ತರದ ಜಗುಲಿಯ ಮೇಲೆ ಕಟ್ಟಡ ನಿರ್ಮಾಣ.

* ದೇವಾಲಯಗಳ ಸುತ್ತ ಪ್ರದಕ್ಷಿಣೆ ಹಾಕುವ ಅವಕಾಶ, ಚೌಕಾಕಾರದ ಗರ್ಭಗುಡಿ ಮತ್ತು ಶಿಖರ, ಕೆಲವು ದೇವಾಲಯಗಳು ಲಾಳಾಕಾರದ ತಳ ವಿನ್ಯಾಸ ಹೊಂದಿವೆ. ( ಮುಖ ಮಂಟಪ, ಸುಖ ನಾಸಿನಿ ಬಂದಿದ್ದವು).

* ದೇವಾಲಯಗಳ ಸುತ್ತ ರಾಮಾಯಣ ಮತ್ತು ಮಹಾಭಾರತಗಳ ಕೆತ್ತನೆ.

  -: ಬಾದಾಮಿ :-

* ಒಂದನೇ ಗುಹೆ ಶೈವ ಗುಹೆ.

* ಎರಡನೇ ಮತ್ತು ಮೂರನೇ ಗುಹೆಗಳು ವೈಷ್ಣವ ಗುಹೆಗಳು.

* ನಾಲ್ಕನೇ ಗುಹೆ ಜೈನ ಗುಹೆ.

    -: ಐಹೊಳೆ :-

* ಇದನ್ನು ವಾಸ್ತುಶಿಲ್ಪದ ಬಯಲು ಪ್ರದೇಶನ ಶಾಲೆ ಮತ್ತು ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ಎನ್ನುವರು.

* ಇಲ್ಲಿ ಲಡಾಖಾನ್ ದೇವಾಲಯ, ದುರ್ಗ ದೇವಾಲಯ ( ಭಾರತ ಸಂಸತ್ ಮಾದರಿಯಲ್ಲಿದೆ) ಮೇಗುತಿ ದೇವಾಲಯ ( ಪೂರ್ವ ಗೋಡೆಯ ಮೇಲೆ ಐಹೊಳೆ ಶಾಸನವಿದೆ.)

   -: ಪಟ್ಟದಕಲ್ಲು :-

* ಸಾಮಾನ್ಯ ಶಕ 1987 ರಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿತು.

* ಲೋಕ ಮಹಾದೇವಿ ನಿರ್ಮಿಸಿದ ವಿರೂಪಾಕ್ಷ ದೇವಾಲಯವಿದೆ. ಇದನ್ನು ಮಲ್ಲಿಕಾರ್ಜುನ ದೇವಾಲಯ ಎನ್ನುವರು. ಇದನ್ನು ಪರ್ಸಿ ಬ್ರೌನರು ದ್ರಾವಿಡ ವಾಸ್ತು ಶಿಲ್ಪದ ಅತ್ಯುತ್ತಮ ಕೃತಿ ಎಂದಿದ್ದಾರೆ.

    -: ಪಲ್ಲವರು :-

* ಇವರು ತಮಿಳುನಾಡಿನ ಪ್ರಪ್ರಥಮ ರಾಜರುಗಳು.

* ಇವರು ಶಾತವಾಹನರ ಸಮಾಂತರವಾಗಿದ್ದರು.

* ಸ್ಥಾಪಕ – ಶಿವಸ್ಕಂದವರ್ಮ ( ಈ ಸಂತತಿಯ ಮೊದಲ ದೊರೆ).

* ರಾಜಧಾನಿ – ಕಂಚಿ.

ಒಂದನೇ ಮಹೇಂದ್ರವರ್ಮ.

* ಇಮ್ಮಡಿ ಪುಲಕೇಶಿ ಸೋಲಿಸಿದನು.

* ಈತನು ಮತ್ತವಿಲಾಸ, ಪ್ರಹಸನ, ಭಾಗವದ್ದಜುಕ ಎಂಬ ಗ್ರಂಥಗಳನ್ನು ರಚಿಸಿದನು.

ಒಂದನೇ ನರಸಿಂಹವರ್ಮ.

* ಪಲ್ಲವರ ಶ್ರೇಷ್ಠ ಅರಸ.

* ಕನ್ನಡ ಇಮ್ಮಡಿ ಪುಲಕೇಶಿ ಸೋಲಿಸಿ ವಾತಾಪಿಕೊಂಡ ಮತ್ತು ಮಹಾಯುದ್ಧ ಬಿರುದುಗಳನ್ನು ಪಡೆದನು.

* ಇವನ ಆಳ್ವಿಕೆ ಅವಧಿಯಲ್ಲಿ ಹ್ಯೂಯೆನ್ ತ್ಸಾಂಗ್ ಕಂಚಿಯನ್ನು ಸಂದರ್ಶಿಸಿದನು.

* ಕಂಚಿ ಬಳಿಯ ಸಮುದ್ರದ ತೀರದಲ್ಲಿ ಒಂದು ನಗರವನ್ನು ನಿರ್ಮಿಸಿ ಅದಕ್ಕೆ ಮಹಾಬಲಿಪುರಂ ಎಂಬ ಹೆಸರು ಇಟ್ಟನು.

* ಅನೇಕ ಏಕಶಿಲಾ ದೇವಾಲಯಗಳು ಇವನಿಂದ ನಿರ್ಮಿಸಲ್ಪಟ್ಟವು.

ಪಲ್ಲವರ ಸಾಮ್ರಾಜ್ಯವು ಚೋಳರ ಆದಿತ್ಯನಿಂದ ಕೊನೆಗೊಂಡಿತು.

 -: ಪಲ್ಲವರ ಕೊಡುಗೆಗಳು :-

* ರಾಜ್ಯವನ್ನು ಮಂಡಲ, ನಾಡು ಮತ್ತು ಗ್ರಾಮಗಳಾಗಿ ವಿಭಾಗಿಸಿದ್ದರು.

* ಗ್ರಾಮ ಸಭೆಯು ಗ್ರಾಮದ ಸಮಸ್ಯೆಗಳನ್ನು ನೋಡಿಕೊಳ್ಳುತ್ತಿತ್ತು.

* ಗ್ರಾಮಭೋಜಕ ಗ್ರಾಮದ ಆಡಳಿತ ನೋಡಿಕೊಳ್ಳುತ್ತಿದ್ದನು.

* ಪಲ್ಲವರು ಒಳ್ಳೆಯ ನೌಕಾಬಲವನ್ನು ಹೊಂದಿದ್ದರು.

* ಇಲ್ಲಿನ ವರ್ತಕರು ಮಲಯ, ಇಂಡೋನೇಷಿಯಾ ಹಾಗೂ ಇತರೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಜೊತೆ ವಾಣಿಜ್ಯ ಸಂಬಂಧವನ್ನು ಹೊಂದಿದ್ದರು.

   -: ಸಾಹಿತ್ಯ :-

* ಭಾರವಿ – ಕಿರಾತಾರ್ಜುನೀಯ

* ದಂಡಿ – ದಶಕುಮಾರ ಚರಿತೆ

* ರಾಜ ಮಹೇಂದ್ರವರ್ಮ – ಮತ್ತ ವಿಲಾಸ ಪ್ರಹಸನ, ಭಾಗವದುಜ್ಜುಕ

  -: ಕಲೆ ಮತ್ತು ವಾಸ್ತು ಶಿಲ್ಪ :-

* ಒಂದನೇ ನರಸಿಂಹವರ್ಮ ನಿರ್ಮಿಸಿದ ಕಂಚಿಯನ್ನು ಪಲ್ಲವರ ವಾಸ್ತುಶಿಲ್ಪದ ತವರು ಮನೆ ಎನ್ನುತ್ತಾರೆ.

* ಏಕಶಿಲೆಗಳಲ್ಲಿ ಅದ್ಭುತ ವಿಗ್ರಹಗಳನ್ನು ಕೆತ್ತಿ ಬಿಡಿಸಲಾಗಿದೆ ಇವುಗಳು ಮಹಾಭಾರತದ ಹಾಗೂ ಭಾಗವತದ ಕಥೆಗಳನ್ನು ಹೊಂದಿವೆ.

* ಇಲ್ಲಿನ ಪಂಚ ರಥಗಳು ಸುಪ್ರಸಿದ್ಧ ಏಕಶಿಲಾ ದೇವಾಲಯಗಳು.

* ಅರ್ಜುನನ ತಪಸ್ಸು ಎನ್ನುವ ಕೆತ್ತನೆ ದೃಶ್ಯವೂ ಅತ್ಯುತ್ತಮ ಕಲಾಕೃತಿಯಾಗಿದೆ.

* ಕಂಚಿಯಲ್ಲಿ ಕೈಲಾಸನಾಥ, ಏಕಾಂಬರನಾಥ ಮತ್ತು ವೈಕುಂಠ ಪೆರುಮಾಳರ ದೇವಾಲಯಗಳು, ಮಹಾಬಲಿಪುರದ ಕಡಲ ದಂಡೆಯ ದೇವಾಲಯ ಪ್ರಾಚೀನ ಭಾರತದ ವಾಸ್ತುಶಿಲ್ಪದ ಅತ್ಯುತ್ತಮ ನಿದರ್ಶನಗಳು.

 

WhatsApp Group Join Now
Telegram Group Join Now