ಭಕ್ತಿ ಚಳುವಳಿ ಮತ್ತು ಸೂಫಿ ಪರಂಪರೆ. TET,GPSTR,HSTR,PDO,FDA,SDA All Competative exam notes.

-: ಭಕ್ತಿ ಸಂತರು ಮತ್ತು ಪ್ರತಿಪಾದನೆಗಳು :-

* ಭಕ್ತಿಯೆಂದರೆ ದೇವರಲ್ಲಿ ಶುದ್ಧ ನಂಬಿಕೆಯನ್ನು ಇಡುವುದು.

* ಭಕ್ತಿಪಂಥದ ಸಾರ – ಭೇದಭಾವದ ಖಂಡನೆ, ಕಂದಾಚಾರದ ವಿರೋಧ, ಜನರ ಹೃದಯ ಬೆಸೆಯುವಿಕೆ, ಪ್ರೇಮ ಹಾಗೂ ಮಾನವ ಸೇವೆ.

    -: ರಮಾನಂದರು :-

* ಜನನ – ರಮಾನಂದರು ” ಪ್ರಯಾಗದ” ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು.

* ರಾಮಾನುಜರ ತತ್ವದ ಅನುಯಾಯಿಗಳಾಗಿದ್ದರು.

  -: ಪ್ರತಿಪಾದನೆಗಳು :-

ಜಾತಿ ಪದ್ಧತಿಯ ಖಂಡನೆ , ರಾಮ – ಸೀತೆಯರ ಪೂಜೆಯ ಭಕ್ತಿ ಆರಾಧನಾ ಸಿದ್ಧಾಂತದ ಪ್ರತಿಪಾದನೆ, ಭಕ್ತಿ ಮತ್ತು ಪ್ರೀತಿಗಳ ಆಧಾರದ ಮೇಲೆ ವೈಷ್ಣವ ಧರ್ಮದ ಶಾಲೆಯ ಪ್ರಾರಂಭ.

   -: ಕಬೀರ್ ( 1440-1510).:-

* ರಮಾನಂದರ ಶಿಷ್ಯರು.

 -: ಪ್ರತಿಪಾದನೆಗಳು :-

ಜಾತಿ ವ್ಯವಸ್ಥೆ ಮತ್ತು ಬಹುಮೂರ್ತಿಗಳ ಪೂಜೆಯ ಖಂಡನೆ, ದೇವರು ಒಬ್ಬನೇ, ಇಂದು ಮತ್ತು ಮುಸಲ್ಮಾನರಿಗೆ ಆ ಒಬ್ಬ ದೇವರೇ ಹೊರತು, ಬೇರೆ ಬೇರೆ ದೇವರಿಲ್ಲ.

* ಈ ಎರಡು ಮತಿಯರಲ್ಲೂ ಸೌಹಾರ್ದ ಮತ್ತು ಸಹಿಷ್ಣುತೆಯನ್ನು ಬೆಳೆಸಲು ಯತ್ನಿಸಿದರು.

* ಕಬೀರರು ” ದೋಹಗಳೆಂಬ” ಪದ್ಯಗಳನ್ನು ರಚಿಸಿದರು.

-: ಚೈತನ್ಯ (1486-1533).:-

* ಜನನ – ಬಂಗಾಳದ ನಾಡಿಯದಲ್ಲಿ ಜನಿಸಿದರು.

* ಬ್ರಾಹ್ಮಣ ಕುಟುಂಬ.

* ಕೃಷ್ಣನ ಆರಾಧನೆ ಮಾಡಿದರು.

*   ಜಾತಿ ಪದ್ಧತಿಯ ವಿರೋಧ, ಬಾತೃತ್ವ ಭಾವನೆಯ ಪ್ರತಿಪಾದನೆ, ಚೈತನ್ಯರ ಆಧ್ಯಾತ್ಮಿಕ ಚಿಂತನೆಯ ಬೋಧನೆಗಳನ್ನು ” ಚೈತನ್ಯ ಚರಿತಾಮೃತ” ಎಂಬುದರಲ್ಲೇ ಸಂಗ್ರಹಿಸಲಾಗಿದೆ.

 -: ಗುರುನಾನಕ್(1469-1539) :-

* ಜನನ – ಪಾಕಿಸ್ತಾನದ ತಳವಂಡಿ.

* ಲಂಗರ್ ಎನ್ನುವ ಭೋಜನ ಶಾಲೆಯನ್ನು ಪ್ರಾರಂಭಿಸಿದರು.

* ಸಿಖ್ಖರ ಪವಿತ್ರ ಗ್ರಂಥ ” ಗುರು ಗ್ರಂಥ ಸಾಹಿಬ್ ”

-: ಪ್ರತಿಪಾದನೆಗಳು :-

ಮೂರ್ತಿ ಪೂಜೆಯ ಖಂಡನೆ, ಸತ್ಕಾರ್ಯ ಮತ್ತು ಪರಿಶುದ್ಧ ಹಾಗೂ ನೀತಿಯುಕ್ತ ಜೀವನಕ್ಕೆ ಹೆಚ್ಚಿನ ಮಹತ್ವ.

-: ಶ್ರೀಮಂತ ಶಂಕರ ದೇವ ಹಾಗೂ ಮಾಧವ ದೇವ :-

* ಅಸ್ಸಾಂನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಇತಿಹಾಸದಲ್ಲಿ ಶ್ರೀಮಂತ ಶಂಕರ್ ದೇವನ ಪಾತ್ರ ಪ್ರಮುಖವಾದದ್ದು.

* ಶಂಕರದೇವನ ಭಾಗವತವು ಸಂಸ್ಕೃತ, ಅಸ್ಸಾಮಿ ಮತ್ತು ಬೃಜಾವಲಿ ಭಾಷೆಗಳಲ್ಲಿದೆ.

* ಶಂಕರದೇವ ಅಸ್ಸಾಂನಲ್ಲಿ ಪ್ರಾರಂಭ ಮಾಡಿದ ಭಕ್ತಿ ಚಳುವಳಿಯನ್ನು ” ಏಕಸರಣ ಧರ್ಮ ವೈಷ್ಣವ ಚಳವಳಿ ” ಎಂದು ಕರೆಯುತ್ತಾರೆ.

* ಇವರ ತಮ್ಮ ಪಂಥದಲ್ಲಿ ” ಸರಣಿಯ ” ಎಂಬ ಪದ್ಧತಿಯನ್ನು ಪ್ರಾರಂಭಿಸಿದರು.

* ಇವರ ಶಿಷ್ಯರಾದ ಮಾಧವ ದೇವರು ಶಾಕ್ತರ ಗುಂಪಿಗೆ ಸೇರಿರುತ್ತಾರೆ. ಬಹುಮುಖ ಪ್ರತಿಭೆ ಹೊಂದಿದ ಮಾಧವ ದೇವರು ಭಕ್ತಿ ಚಳುವಳಿಯಲ್ಲಿ ಅತ್ಯಂತ ಪ್ರಖ್ಯಾತಿಗಳಿಸಿದರು.

  -: ಮೀರಾಬಾಯಿ :-

* ಮೇವಾಡದ ರಾಜಕುಮಾರಿ.

* ಗುರು – ರಾಯಿ ದಾಸ್

* ಕಲಿಯುಗದ ರಾಧೆ

* ಶ್ರೀ ಕೃಷ್ಣನ ಆರಾಧನೆಗೆ ತನ್ನ ಬದುಕನ್ನು ಮೀಸಲಿಟ್ಟು ಕೀರ್ತನೆಗಳನ್ನು ರಚಿಸಿದರು.

* ಜಾತಿ ಶ್ರೇಷ್ಠತೆಯ ಮನೋ ಧರ್ಮವನ್ನು ವಿಡಂಬಿಸಿದಳು.

* ಕೃಷ್ಣನನ್ನು ಕುರಿತು ಭಕ್ತಿ ಪುರತವಾದ ಕೀರ್ತನೆಗಳನ್ನು ಬರೆದು ಈ ಕೀರ್ತನೆಗಳನ್ನು ” ಭಜನೆಗಳು” ಎಂದು ಜನಪ್ರಿಯವಾದವು.

  -: ಆಂಡಾಳ್ :-

* ಪೆರಿಯಾಳ್ವರ್

* ಗ್ರಂಥ – ತಿರುಪ್ಪಾಮೈ

* ಮೂಲ ಹೆಸರು – ಗೋದಾದೇವಿ

 -: ಸೂಫಿ ಸಂತರು :-

* ಪರ್ಶಿಯಾದಿಂದ ಭಾರತಕ್ಕೆ ಬಂದು ನೆಲೆಸಿದರು.

* ಇವರನ್ನು ” ಪೀರ( ಗುರು )” ಎಂದು ಕರೆಯುತ್ತಿದ್ದರು.

* ಸೂಫ್ ಎಂಬ ಸಾದಾ ಉಣ್ಣೆಯ ಅಂಗಿ ತೊಡುತ್ತಿದ್ದರಿಂದ ಮುಸ್ಲಿಂ ಸಂತರನ್ನು ಸೂಫಿ ಎಂದು ಕರೆದರು.

  -: ಬೋಧನೆಗಳು :-

ಪ್ರೇಮ ಮತ್ತು ಭಕ್ತಿಯಿಂದ ಪರಮಾತ್ಮನನ್ನು ಅಥವಾ ಅಲ್ಲಾನನ್ನು ಸೇರಲು ಸಾಧ್ಯ, ಭಕ್ತಿಯಿಂದ ಕೂಡಿದ ನರ್ತನ ಮತ್ತು ಸಂಗೀತವು ನಮ್ಮನ್ನು ದೇವರ ಕಡೆ ಕೊಂಡೊಯ್ಯುತ್ತದೆ.

 -: ಪ್ರಮುಖ ಸೂಫಿ ಸಂತರು :-

* ಮೋಯಿನ್- ಉದ್-ದಿನ್-ಚಿಸ್ತಿ

* ಬಾಬಾ ಪರೀದ್

* ನಿಜಾಮ್-ಉದ್-ದೀನ್ ಔಲಿಯ

* ಮಲಿಕ್ ಮಹಮ್ಮದ್

* ಖ್ವಾಜ್ ಬಂದೇ ನವಾಜ್

  -: ಪ್ರಮುಖ ಕೃತಿಗಳು :-

* ಕುತುಬನ್ – ಮೃಗಾವತಿ

* ಮಲ್ಲಿಕ್ ಮೊಹಮ್ಮದ್ ಜಾಯಿಸಿ – ಪದ್ಮಾವತ್

 -: ಶಿಶುನಾಳ ಶರೀಫ(1819-1889):-

* ಶರಿಫ್ ಪಾರ್ಸಿ ಶಬ್ದ, ಉದಾತ್ತ ದೇಹಗಳ ಅಥವಾ ಉತ್ತಮ ಶೀಲ ಸ್ವಭಾವ ಹೊಂದಿದ ವ್ಯಕ್ತಿ ಎಂದರ್ಥ.

* ರಿವಾಯತ ಸಾಹಿತ್ಯದ ಹರಿಕಾರರು.

* ಬಿರುದು – ಕರ್ನಾಟಕದ ಕಬೀರ

 -: ಪುರಂದರದಾಸರು (1484-1564):-

* ಆತ್ಮ ಶೋಧನೆಗೆ ಪ್ರಾಮುಖ್ಯತೆ, ಅಂತರಂಗಶುದ್ಧಿಗೆ ಮಹತ್ವ, ಡಾಂಬಿಕ ಭಕ್ತಿಯ ವಿಡಂಬನೆ.

* ಈಸಬೇಕು ಇದ್ದು ಜೈಸಬೇಕು.

* ” ಮಾನವ ಜನ್ಮ ದೊಡ್ಡದು ಇದನ್ನು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ ”

* ಗುರುಗಳಿಂದ ” ದಾಸರೆಂದರೆ ಪುರಂದರದಾಸಯ್ಯ ” ಎಂದು ಹೊಗಳಿಕೆ ಪಡೆದರು.

* ಬಿರುದು – ಕರ್ನಾಟಕ ಸಂಗೀತ ಪಿತಾಮಹ

* ಅಂಕಿತನಾಮ – ಪುರಂದರವಿಠಲ

  -: ಕನಕದಾಸರು :-

* ಜನನ – ಹಾವೇರಿ ಜಿಲ್ಲೆಯ ಬಾಡ

* ಡಾಂಬಿಕ ಭಕ್ತಿಯ ತೆಗಳಿಕೆ, ಸಮಾಜದಲ್ಲಿದ್ದ ಮೇಲು-ಕೀಳು, ಉಚ್ಚ-ನೀಚ ಪರಿಭಾವನೆಯ ವಿಡಂಬನೆ, ಭಕ್ತಿಮಾರ್ಗದ ಬೋಧನೆ.

* ಅಂಕಿತನಾಮ – ಕಾಗಿನೆಲೆ ಆದಿಕೇಶವ

     -: ಕೃತಿಗಳು :-

* ಮೋಹನ ತರಂಗಿಣಿ

* ನಳಚರಿತ್ರೆ

* ರಾಮಧ್ಯಾನ ಚರಿತೆ

* ಹರಿಭಕ್ತಿಸಾರ

-: ಭಕ್ತಿ ಚಳವಳಿಯ ಪರಿಣಾಮ :-

ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮೌಢ್ಯಾಚರಣೆಗಳ ಅರ್ಥಹೀನತೆಯನ್ನು ಸಾರಿತು, ಇಬ್ಬರಲೂ ಸೌಹಾರ್ದಯುತ ಭಾವನೆ ಮೂಡಿತು, ಭಾರತದ ಪ್ರಾದೇಶಿಕ ಭಾಷೆಗಳು ವಿಕಾಸಗೊಂಡವು.

  -: ಪ್ರಮುಖ ಕೃತಿಗಳು :-

* ಸೂರದಾಸ – ಸೂರ್ ಸಾಗರ್

* ತುಳಸೀದಾಸ್ – ರಾಮಚರಿತಮಾನಸ

* ಜ್ಞಾನದೇವರ – ಜ್ಞಾನೇಶ್ವರಿ

 

 

 

 

 

WhatsApp Group Join Now
Telegram Group Join Now