ಭಾರತದ ಸಂವಿಧಾನ ( ಭಾಗ-02). TET, GPSTR, HSTR, PDO, FDA, SDA All Competative exam notes.

 -: ಸಂವಿಧಾನದ ಇತ್ತೀಚಿನ ತಿದ್ದುಪಡಿಗಳು :-

* 105 ನೇ ತಿದ್ದುಪಡಿ -2021

* 100 ನೇ ತಿದ್ದುಪಡಿ ಕಾಯ್ದೆ – 2015

ದಿನಾಂಕ – 2015 ಮೇ 6 ಮತ್ತು 7

* 119 ನೇ ತಿದ್ದುಪಡಿ ಮಸೂದೆ 100ನೇ ತಿದ್ದುಪಡಿ ಕಾಯ್ದೆಯಾಯಿತು.

ವಿಷಯ :- ಲ್ಯಾಂಡ್ ಬೌಂಡರಿ ಒಪ್ಪಂದವನ್ನು ಅನುಷ್ಠಾನಕ್ಕೆ ತರಲು ಸಂವಿಧಾನದ ಮೊದಲ ಸೂಚಿಯನ್ನು ತಿದ್ದುಪಡಿ ಮಾಡಲಾಯಿತು. ಇದರ ಪ್ರಕಾರ ಬಾಂಗ್ಲಾದೇಶದಲ್ಲಿ ಇದ್ದ ಭಾರತದ 111 ಸುತ್ತುವರಿದ ಪ್ರದೇಶಗಳನ್ನು ಮತ್ತು ಭಾರತದಲ್ಲಿದ್ದ 51 ಸುತ್ತುವರಿದ ಪ್ರದೇಶಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು.

* 101 ನೇ ತಿದ್ದುಪಡಿ ಕಾಯ್ದೆ – 2017

ದಿನಾಂಕ-2017 ಜುಲೈ 1

ಇದು 122 ನೇ ಸಂವಿಧಾನ ತಿದ್ದುಪಡಿ ಮಸೂದೆ ಆಗಿದೆ. ಈ ಮಸೂದೆ 2017 ಏಪ್ರಿಲ್ ಒಂದರಿಂದ 101ನೇ ತಿದ್ದುಪಡಿ ಕಾಯ್ದೆಯಾಗಿ ಜಾರಿಗೆ ಬಂದಿದೆ.

ವಿಷಯ :- ಸಂಸತ್ತಿನ ಉಭಯ ಸದನಗಳು  2016ರಲ್ಲಿ ಸರಕು ಮತ್ತು ಸೇವೆಗಳ ತೆರಿಗೆ ಮಸೂದೆ ಅಂದರೆ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ಗೆ ಅನುಮೋದನೆ ನೀಡಿವೆ.

* 102ನೇ ಸಂವಿಧಾನ ತಿದ್ದುಪಡಿ ಕಾಯ್ದೆ -2018.

ದಿನಾಂಕ – 2018 ಆಗಸ್ಟ್ 11

ವಿಷಯ:- ಈ ಕಾಯ್ದೆಯ 1993ರಲ್ಲಿ ಸಂಸತ್ತಿನ ಕಾಯ್ದೆ ಅಡಿಯಲ್ಲಿ ಸ್ಥಾಪನೆಯಾದ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನಮಾನ ನೀಡಿದೆ. ಈ ಕಾಯ್ದೆಯು ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ನಿರ್ವಹಿಸಬೇಕಾದ ಕಾರ್ಯಗಳಿಂದ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವನ್ನು ಮುಕ್ತಗೊಳಿಸಿದೆ. ಈ ಕಾಯ್ದೆಯ ರಾಜ್ಯತ್ವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ನಿರ್ದಿಷ್ಟ ಪಡಿಸುವ ಅಧಿಕಾರವನ್ನು ರಾಶ್ಯಾಧ್ಯಕ್ಷರಿಗೆ ನೀಡಿದೆ.

* 103 ನೇ ಸಂವಿಧಾನ ತಿದ್ದುಪಡಿಗೆ ಕಾಯ್ದೆ- 2019

ದಿನಾಂಕ – 2019 ಜನವರಿ 12

ವಿಷಯ :- ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗಗಳಲ್ಲಿ ಶೇಕಡಾ 10 ರಷ್ಟು ಸ್ಥಾನಗಳನ್ನು ಮೀಸಲಿಡಲು ಅವಕಾಶ ಕಲ್ಪಿಸಿದೆ.

ಸಂವಿಧಾನಗಳ 15ನೇ ವಿಧಿಗೆ (6) ನೀ ಉಪವಿಧಿಯನ್ನು ಸೇರ್ಪಡೆ ಮಾಡಿ ಸಾರ್ವಜನಿಕ ಮತ್ತು ಖಾಸಗಿ ಅನುದಾನಿತ ಸಂಸ್ಥೆಗಳಲ್ಲಿ ( ಅಲ್ಪಸಂಖ್ಯಾತ ಸಂಸ್ಥೆಗಳನ್ನು ಹೊರತುಪಡಿಸಿ) ಶೇಕಡ 10 ಸ್ಥಾನಗಳನ್ನು ಮೀಸಲಿಡಲಾಗಿದೆ.

16ನೇ ವಿಧಿಗೆ (6) ನೆ ಉಪ ವಿಧಿಯನ್ನು ಸೇರ್ಪಡೆ ಮಾಡಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡ 10 ಸ್ಥಾನಗಳನ್ನು ಮೀಸಲಿಡಲು ಅವಕಾಶ ಕಲ್ಪಿಸಲಾಗಿದೆ.

* 104ನೇ ಸಂವಿಧಾನ ತಿದ್ದುಪಡಿ ಕಾಯ್ದೆ -2020

ದಿನಾಂಕ – 2020 ಜನವರಿ 25

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಯಲ್ಲಿ ಮೀಸಲಾತಿಯನ್ನು 2030 ರ ವರೆಗೆ ಮುಂದುವರಿಸಲಾಗಿದೆ. ಅದೇ ರೀತಿಯಾಗಿ ಆನ್ಲೈನ್ ನಲ್ಲಿ ಇರುವ ಮೀಸಲಾತಿಯನ್ನು ರದ್ದು ಪಡಿಸಲಾಗಿದೆ.

-: ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ :-

ಡಿಸೆಂಬರ್ 9 – 1946 ( ಅಧ್ಯಕ್ಷರು- ಡಾ. ಬಾಬು ರಾಜೇಂದ್ರ ಪ್ರಸಾದ್, ಹಂಗಾಮಿ ಅಧ್ಯಕ್ಷರು – ಸಚ್ಚಿದಾನಂದ ಸಿನ್ಹಾ, ಖಾಯಂ ಉಪಾಧ್ಯಕ್ಷರು – ಟಿ.ಟಿ. ಕೃಷ್ಣಮಾಚಾರಿ.

-: ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರು :-

ಡಾಕ್ಟರ್ ಬಿ ಆರ್ ಅಂಬೇಡ್ಕರ್ ( ಸಂವಿಧಾನ ಶಿಲ್ಪಿ ) ರಚನಾ ಅವಧಿ ಎರಡು ವರ್ಷ, 11 ತಿಂಗಳು, 18 ದಿನಗಳು.

-: ಧ್ಯೇಯಗಳ ನಿರ್ಣಯವನ್ನು ಮಂಡಿಸಿದ್ದು :-

ಡಿಸೆಂಬರ್ 13- 1946 ಅಂಗೀಕರಿಸಿದ್ದು 22 ಜನವರಿ 1947.

-: ಸಂವಿಧಾನದ ಪ್ರಸ್ತಾವನೆ:-

ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣರಾಜ್ಯ ( ಕ್ರಮವಾಗಿ).

* ಪ್ರಸ್ತಾವನೆ ರಾಜಕೀಯ ಜಾತಕ – ಕೆ.ಎಂ. ಮುನ್ಷಿ

-: ಭಾರತದ ಸಂವಿಧಾನದ ಲಕ್ಷಣಗಳು :-

* ಲಿಖಿತ ಮತ್ತು ಬೃಹತ್ ಸಂವಿಧಾನ.

* ನಮ್ಯ ಮತ್ತು ಅನಮ್ಯ ಸಂವಿಧಾನ.

* ಸಂಸದೀಯ ಸರ್ಕಾರ ಪದ್ಧತಿ.

* ಗಣತಂತ್ರ ವ್ಯವಸ್ಥೆ.

* ಸಂಯುಕ್ತ ಪದ್ಧತಿ.

* ಮೂಲಭೂತ ಹಕ್ಕುಗಳು.

* ಮೂಲಭೂತ ಕರ್ತವ್ಯಗಳು.

* ರಾಜ್ಯ ನಿರ್ದೇಶಕ ತತ್ವಗಳು.

* ಸ್ವತಂತ್ರ ಮತ್ತು ಏಕಿ ಕೃತ ನ್ಯಾಯಾಂಗ ವ್ಯವಸ್ಥೆ.

* ಏಕ ಪೌರತ್ವ .

* ವಯಸ್ಕರ ಮತದಾನ ಪದ್ಧತಿ.

* ದ್ವಿ ಸದನ ಶಾಸಕಾಂಗ.

* ಪಕ್ಷ ಪದ್ದತಿ.

WhatsApp Group Join Now
Telegram Group Join Now