ರಾಷ್ಟಕೂಟರು ( ಸಾಮಾನ್ಯ ಶಕ 753-973).
* ಇವರು 8ನೇ ಶತಮಾನದಿಂದ 10ನೇ ಶತಮಾನದ ವರೆಗೆ ಆಳ್ವಿಕೆ ನಡೆಸಿದರು.
* ರಾಷ್ಟ್ರಕೂಟ ಎಂದರೆ ” ರಾಷ್ಟ್ರದ ಮುಖ್ಯಸ್ಥರು ” ಎಂದರ್ಥ.
* ಸ್ಥಾಪಕ – ದಂತಿದುರ್ಗ ( ಬಾದಾಮಿ ಚಾಲುಕ್ಯರ ದೊರೆ ಎರಡನೇ ಕೀರ್ತಿವರ್ಮನನ್ನು ಸೋಲಿಸಿ ಸಾಮ್ರಾಜ್ಯ ಸ್ಥಾಪನೆ ಮಾಡಿದನು)
* ರಾಜಧಾನಿಗಳು – ಲಟ್ಟಲೂರು ( ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆ ಲಾತೂರ್ ) ಮಾನ್ಯ ಖೇಟ ( ಗುಲ್ಬರ್ಗ ಜಿಲ್ಲೆ )
* ರಾಜ್ಯ ಲಾಂಛನ – ಗರುಡ
ದಂತಿದುರ್ಗ ( ಸಾಮಾನ್ಯ ಶಕ 753-756).
* ಹಿರಣ್ಯಗರ್ಭದಾನ ಯಾಗವನ್ನು ಮಾಡಿದನು.
* ಇವನು ಚಾಲುಕ್ಯ ದೊರೆ ಎರಡನೇ ಕೀರ್ತಿವರ್ಮನನ್ನು ಸೋಲಿಸಿ, ರಾಷ್ಟ್ರಕೂಟ ವಂಶ ಸ್ಥಾಪಿಸಿದನು.
ಒಂದನೇ ಕೃಷ್ಣ ( ಸಾಮಾನ್ಯ ಶಕ 756-774).
* ದಂತಿದುರ್ಗ ಸಂತಾನವಿಲ್ಲದೆ ಮರಣ ಹೊಂದಿದಾಗ ಅವನ ಚಿಕ್ಕಪ್ಪನಾದ ಒಂದನೇ ಕೃಷ್ಣನು ಆಡಳಿತಕ್ಕೆ ಬಂದನು.
* ಎಲ್ಲೋರದಲ್ಲಿ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದನು ಇದು ಏಕಶಿಲೆಯ ನಿರ್ಮಾಣವಾಗಿರುವ ಬೃಹತ್ ದೇವಾಲಯವಾಗಿದೆ. ಇದನ್ನು ಮೇಲಿನಿಂದ ಕೆಳಗೆ ಕೊರೆಯಲಾಗಿದೆ. ಇದನ್ನು ಕಟ್ಟಿದ ಶಿಲ್ಪಿ ” ವಿಶ್ವಕರ್ಮ ”
ಎರಡನೇ ಗೋವಿಂದ ( ಸಾಮಾನ್ಯ ಶಕ 774-780).
* ಇವನು ಗಂಗರ ಶ್ರೀ ಪುರುಷ ಮತ್ತು ವೆಂಗಿಯ ವಿಷ್ಣುವರ್ಧನನ್ನು ಸೋಲಿಸಿದನು.
* ಬಿರುದುಗಳು – ಪ್ರತಾಪವ ಲೋಕ, ಪ್ರಭುತ ವರ್ಷ, ಜಗತ್ತುಂಗ .
ಧ್ರುವ ( ಸಾಮಾನ್ಯ ಶಕ 780-793).
* ಗಂಗಾ ಯಮುನಾ ತೀರದಲ್ಲಿ ಬಂಗಾಲದ ಧರ್ಮ ಪಾಲನನ್ನು ಸೋಲಿಸಿದನು .
* ಕನೌಜಿನ ಇಂದ್ರಾಯುಧ ನನ್ನು ಸೋಲಿಸಿದನು.
* ಇವರು ಹೊಯ್ಸಳ ರಾಜಧಾನಿ ಹಳೇಬೀಡಿನಲ್ಲಿ ಧ್ರುವ ಸಮುದ್ರ ಎಂಬ ಕೆರೆಯನ್ನು ನಿರ್ಮಿಸಿದನು. ಆದ್ದರಿಂದ ಅದಕ್ಕೆ ದ್ವಾರಸಮುದ್ರ ಎಂಬ ಹೆಸರು ಬಂದಿದೆ.
* ಇವರು ಧಾರಾವರ್ಷ , ಶ್ರೀ ವಲ್ಲಭ, ಕಲಿವಲ್ಲಭ ಎಂಬ ಬಿರುದುಗಳನ್ನು ಹೊಂದಿದನು.
ಮೂರನೇ ಗೋವಿಂದ ( ಸಾಮಾನ್ಯ ಶಕ 793-814).
ಒಂದನೇ ಅಮೋಘವರ್ಷ ನೃಪತುಂಗ ( ಸಾಮಾನ್ಯ ಶಕ 814-878).
* ರಾಷ್ಟ್ರಕೂಟರಲ್ಲಿಯೇ ಪ್ರಸಿದ್ಧನಾದ ಅರಸ.
* ಇವನ ಸೇನಾನಿ ಬಂಕೇಶ – ಬಂಕಾಪುರ ಎಂಬ ನಗರವನ್ನು ನಿರ್ಮಿಸಿದನು.
* ವೆಂಗಿಯ ಎರಡನೇ ವಿಕ್ರಮಾದಿತ್ಯನನ್ನು ವಿಂಗವಳ್ಳಿ ಕದನದಲ್ಲಿ ಸೋಲಿಸಿದನು.
* ಕಲಾ ಪ್ರಿಯನಾದ ಈತ ಮಾನ್ಯಖೇಟ ಎಂಬ ಹೊಸ ರಾಜಧಾನಿಯನ್ನು ನಿರ್ಮಿಸಿದನು.
* ಸಾಮಾನ್ಯ ಶಕ 851 ರಲ್ಲಿ ಹರ ಪ್ರವಾಸಿಗ ಸುಲೈಮಾನ್ ನೃಪತುಂಗನ ಆಸ್ಥಾನಕ್ಕೆ ಭೇಟಿ ನೀಡಿ ಅವನ ಸಾಮ್ರಾಜ್ಯವು ಅಂಜನ ಪ್ರಪಂಚದ ನಾಲ್ಕು ಖ್ಯಾತ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು ಎಂದು ಬಣ್ಣಿಸಿದ್ದಾನೆ.
* ಇವನ ಆಸ್ಥಾನ ಕವಿ ಶ್ರೀವಿಜಯ ಕವಿರಾಜಮಾರ್ಗ ಎಂಬ ಕನ್ನಡದ ಮೊಟ್ಟ ಮೊದಲ ಉಪಲಬ್ದ ಕೃತಿಯನ್ನು ರಚಿಸಿದನು.
* ಕವಿರಾಜ ಮಾರ್ಗದಲ್ಲಿ ಕರ್ನಾಟಕದ ವ್ಯಾಪ್ತಿಯನ್ನು ಕಾವೇರಿಯಿಂದ ಗೋದಾವರಿ ಪರಮಿರ್ಪ ನಾಡದಾ ಕದನದೋಳ್ ಜನಪದ ಎಂದು ವರ್ಣಿಸಿದೆ.
ಎರಡನೇ ಕೃಷ್ಣ ( ಸಾಮಾನ್ಯ ಶಕ 880-914).
* ಗೂರ್ಜರ ಪ್ರತಿಹಾರರ ಅರಸನಾದ ಭೋಜರಾಜನನ್ನು ಸೋಲಿಸಿದನು.
ಮೂರನೇ ಇಂದ್ರ ( ಸಾಮಾನ್ಯ ಶಕ 914-928).
* ರಾಷ್ಟ್ರಕೂಟರ ಸಾರ್ವಭೌಮತ್ವವನ್ನು ಉತ್ತರ ಭಾರತದಲ್ಲಿ ಪುನಃ ಸ್ಥಾಪಿಸಿದನು.
* ಇವನ ಆಸ್ಥಾನದಲ್ಲಿದ್ದ ತ್ರಿವಿಕ್ರಮ ನಳಚಂಪು ಕೃತಿಯನ್ನು ರಚಿಸಿದನು. ಇದು ಪ್ರಥಮ ಸಂಸ್ಕೃತದ ಚಂಪು ಕಾವ್ಯ.
ಮೂರನೇ ಕೃಷ್ಣ ( ಸಾಮಾನ್ಯ ಶಕ 939-967).
* ಸಾಮಾನ್ಯ ಶೇಕು 949ರಲ್ಲಿ ನಡೆದ ತಕ್ಕೊಳಂ ಕದನದಲ್ಲಿ ಚೋಳರ ಅರಸನಾದ ಒಂದನೇ ಪರಾಂತಕ ಚೋಳನನ್ನು ಸೋಲಿಸಿದನು.
* ಇವನ ಆಸ್ಥಾನ ಕವಿ ಉಭಯ ಕವಿ ಚಕ್ರವರ್ತಿ ಎಂಬ ಬಿರುದು ಹೊಂದಿದ್ದ ಪೊನ್ನ ಶಾಂತಿಪುರಾಣ,ಭುವನೈಕ ರಾಮಾಭ್ಯುದಯ ಎಂಬ ಕೃತಿ ರಚಿಸಿದನು.
-: ಆಡಳಿತ :-
* ರಾಷ್ಟ್ರವೆಂಬುದು ಭಾರತದ ಪ್ರಮುಖ ಘಟಕವಾಗಿದ್ದು, ಸಾಮ್ರಾಜ್ಯವನ್ನು ಅನೇಕ ವಿಭಾಗಗಳಾಗಿ ವಿಂಗಡಿಸಿದ್ದಾರೆ.
* ರಾಷ್ಟ್ರ , ವಿಷಯ, ನಾಡು, ಭುಕ್ತಿ ಎಂದು ವಿಭಾಗಿಸಲಾಗಿತ್ತು.
* ಕಳಸ, ಇಂಡಿ, ಸಾಲೋಟಗಿ ಅಂದಿನ ಪ್ರಮುಖ ಶಿಕ್ಷಣ ಕೇಂದ್ರಗಳಾಗಿದ್ದವು.
-: ಸಾಹಿತ್ಯ :-
* ಹಲಾಯುಧ – ಕವಿರಹಸ್ಯ ಮತ್ತು ಮಿತ್ರ ಸಂಜೀವಿನಿ
* ಶಿವಕೋಟ್ಯಾಚಾರ್ಯ – ವಡ್ಡಾರಾಧನೆ
* ತ್ರಿವಿಕ್ರಮ – ನಳಚಂಪೂ, ಮದಲಸ ಚಂಪು
* ಮಹಾವೀರಚಾರ್ಯ – ಗಣಿತ ಸಾರಸಂಗ್ರಹ
* ಜಿನಸೇನಾಚಾರ್ಯ – ಹರಿವಂಶ
* ಪೊನ್ನ – ಶಾಂತಿಪುರಾಣ
* ಶ್ರೀ ವಿಜಯ – ಕವಿರಾಜಮಾರ್ಗ
-: ಕಲೆ ಮತ್ತು ವಾಸ್ತು ಶಿಲ್ಪ :-
* ಎಲ್ಲೋರ ( ದಿ ವರ್ಲ್ಡ್ ಹೆರಿಟೇಜ್ ಸೈಟ್ ).
* ಈ ಸ್ಥಳ 1983 ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿತು.
* 16ನೇ ಗುಹೆ ಕೈಲಾಸನಾಥ ದೇವಾಲಯ ಬರುವ ಗುರಿಯಾಗಿದೆ ಇದನ್ನು ಒಂದನೇ ಕೃಷ್ಣ ನಿರ್ಮಿಸಿದನು.
* ಇವರ ಕಾಲದ ಪ್ರಮುಖ ಶಿಕ್ಷಣ ಕೇಂದ್ರಗಳು ಬಿಜಾಪುರದ ಇಂಡಿಯಾ, ಸಾಲೋಟಗಿ ಗ್ರಾಮ , ಹಾವೇರಿಯ ಕಳಸಾ, ಶಿವಮೊಗ್ಗದ ಬಳ್ಳಿಗಾವೆ .
* ಪಂಪನು ರಾಷ್ಟ್ರಕೂಟರ ಸಾಮಂತರವಾದ ವೇಮಲವಾಡ ಚಾಲುಕ್ಯರ ಎರಡನೇ ಅರಿಕೇಸರಿ ಆಸ್ಥಾನದಲ್ಲಿ ಇದ್ದನು.
ಕಲ್ಯಾಣದ ಚಾಲುಕ್ಯರು.
* ರಾಷ್ಟ್ರಕೂಟರ ಅವನತಿಯ ನಂತರ ಮಾನ್ಯಖೇಟವನ್ನು( ಎಲ್ಲೋರಾ) ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದರು.
* ರಾಜಧಾನಿ ಬೀದರ್ ಜಿಲ್ಲೆಯ ಬಸವಕಲ್ಯಾಣ
* ಸ್ಥಾಪಕ – ಎರಡನೇ ತೈಲಪ ಅಥವಾ ಇಮ್ಮಡಿ ತೈಲಪ
* ಲಾಂಛನ – ವರಾಹ
ಎರಡನೇ ತೈಲಪ ( ಸಾಮಾನ್ಯ ಶಕ 973-997).
* ಇಮ್ಮಡಿ ತೈಲಪ ಕಲ್ಯಾಣ ಚಾಲುಕ್ಯ ವಂಶದ ಸ್ಥಾಪಕ.
* ಇವನು ಬಾದಾಮಿ ಚಾಲುಕ್ಯರ ನಾಲ್ಕನೇ ವಿಕ್ರಮಾದಿತ್ಯನ ಮಗ.
ಸತ್ಯಶ್ರಯ ( ಸಾಮಾನ್ಯ ಶಕ 997-1008).
* ಇವನು ಚೋಳರನ್ನು ಹಿಮ್ಮೆಟ್ಟಿಸಿ ಇರಿವೆ ಬೆಡಂಗ ಎಂಬ ಬಿರುದು ಪಡೆದ.
* ಕನ್ನಡದ ಖ್ಯಾತ ಕವಿಯಾದ ರನ್ನನಿಗೆ ಆಶ್ರಯದಾತನಾಗಿದ್ದ.
* ರನ್ನನು ಸತ್ಯ ಆಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿದ್ದಾನೆ.
ಇಮ್ಮಡಿ ಜಯಸಿಂಹ ( ಸಾಮಾನ್ಯ ಶಕ 1015-1043).
* ಜಯಸಿಂಹನ ಆಸ್ಥಾನದಲ್ಲಿದ್ದ ದುರ್ಗಸಿಂಹನ ಪಂಚತಂತ್ರ ಎಂಬ ಕೃತಿಯನ್ನು ಕನ್ನಡದಲ್ಲಿ ರಚಿಸಿದ್ದಾನೆ.
* ಈತನ ಆಸ್ಥಾನದ ಕವಿ ವಾದಿರಾಜ ಸಂಸ್ಕೃತದಲ್ಲಿ ಪಾರ್ಶ್ವನಾಥ ಚರಿತೆ, ವಾದಿರಾಜ ಚರಿತೆ ಎಂಬ ಕೃತಿಯನ್ನು ರಚಿಸಿದನು.
ಒಂದನೇ ಸೋಮೇಶ್ವರ ( ಸಾಮಾನ್ಯ ಶಕ 1043-1068).
* ಇವನು ಹೊಸ ರಾಜಧಾನಿ ಕಲ್ಯಾಣವನ್ನು ಕಟ್ಟಿದ ಇದು ಪ್ರಸ್ತುತ ಬೀದರ್ ಜಿಲ್ಲೆಯಲ್ಲಿದೆ.
ಆರನೇ ವಿಕ್ರಮಾದಿತ್ಯ ( ಸಾಮಾನ್ಯ ಶಕ 1076-1127).
* ಕಲ್ಯಾಣ ಚಾಲುಕ್ಯರ ಮನೆತನದ ಪ್ರಸಿದ್ಧ ಅರಸ.
* ಸಾಮಾನ್ಯ ಶಕ 1076 ರಲ್ಲಿ ಎರಡನೇ ಸೋಮೇಶ್ವರನನ್ನು ಸೋಲಿಸಿ ಅಧಿಕಾರಕ್ಕೆ ಬಂದ ಈತ ಚಾಲುಕ್ಯ ವಿಕ್ರಮ ಶಕೆಯನ್ನು ಆರಂಭಿಸಿದನು.
* ಇವನ ಪ್ರಸಿದ್ಧ ದಂಡ ನಾಯಕ ದಂಡಾಧೀಶ.
ಸೈನಿಕ ಸಾಧನೆಗಳು.
* ಸಹೋದರ ನಾಲ್ಕನೇ ಜಯಸಿಂಹ ದಂಗೆ ಎದ್ದನು ಈ ದಂಗೆಯನ್ನು ಯಶಸ್ವಿಯಾಗಿ ಹತ್ತಿಕ್ಕಿ ಆತನನ್ನು ಕ್ಷಮಿಸಿ, ಬನವಾಸಿಯ ಪ್ರಾಂತ್ಯಾಧಿಕಾರಿಯಾಗಿ ಮಾಡಿದನು.
* ಜಗ ದೇವನ ಪರವಾಗಿ ಮತ್ತೊಮ್ಮೆ ಧಾರಾ ನಗರದ ಮೇಲೆ ದಾಳಿ ಮಾಡಿ ಜಗದೇವನಿಗೆ ಸಾಮ್ರಾಜ್ಯ ದೊರಕಿಸಿ ಕೊಟ್ಟರು.
* ಇವನ ದಂಡ ನಾಯಕ ದಂಡಾದೀನು( ಮಹಾದೇವ) ಇಟಗಿಯಲ್ಲಿ ಮಹಾದೇವ ದೇವಾಲಯ ನಿರ್ಮಿಸಿದನು ಇದನ್ನು “ದೇವಾಲಯಗಳ ಚಕ್ರವರ್ತಿ ” ಎಂದು ಕರೆಯಲಾಗಿದೆ.
* ಇವನ ಹೆಂಡತಿ ಚಂದ್ರಲೇಖ ನೃತ್ಯ- ಸಂಗೀತ ಪ್ರವೀಣೆಯಾಗಿದ್ದು ಅಭಿನವ ಸರಸ್ವತಿ ಎಂಬ ಬಿರುದು ಪಡೆದಿದ್ದಳು.
* ಈತನ ಆಸ್ಥಾನದಲ್ಲಿದ್ದ ಬಿಲ್ಹಣ ವಿಕ್ರಮಾಂಕ ದೇವ ಚರಿತಂ, ವಿಜ್ಞಾನೇಶ್ವರನ ಮಿತಾಕ್ಷರ ಸಂಹಿತೆ ಕೃತಿಯನ್ನು ರಚಿಸಿದನು.
* ವಿಜ್ಞಾನೇಶ್ವರನು – ತನ್ನ ಮಿತಾಕ್ಷರ ಸಂಹಿತೆ ಕೃತಿಯಲ್ಲಿ ” ಜಗತ್ತಿನಲ್ಲಿ ಕಲ್ಯಾಣದಂತಹ ನಗರವು ಹಿಂದಿರಲಿಲ್ಲ, ಮುಂದಿರಲಾರದು. ವಿಕ್ರಮಾದಿತ್ಯ ನಂತರ ರಾಜನನ್ನು ಕಂಡಿಲ್ಲ ಕೇಳಿಲ್ಲ” ಎಂದಿದ್ದಾನೆ.
ಮೂರನೇ ಸೋಮೇಶ್ವರ ( ಸಾಮಾನ್ಯ ಶಕ 1127-1137).
* ಈ ಮನೆತನದ ಶಾಂತಿ ಪ್ರಿಯ ಅರಸ.
* ಸ್ವತಃ ಸಾಹಿತಿಯಾಗಿದ್ದ ಈತ ಸಂಸ್ಕೃತದ ವಿಶ್ವಕೋಶ ಎಂದೇ ಕರೆಯಲ್ಪಡುವ ” ಮಾನಸೋಲ್ಲಾಸ ” ಅಥವಾ ” ಅಭಿಲಾಷಿತಾರ್ಥ ಚಿಂತಾಮಣಿ ” ಎಂಬ ಕೃತಿಯನ್ನು ರಚಿಸಿದನು.
ಮೂರನೇ ತೈಲಪ ( ಸಾಮಾನ್ಯ ಶಕ 1149-1162).
* ಈತನ ಕಾಲದಲ್ಲಿ ಎಂದರೆ ಸಾಮಾನ್ಯ ಶಕ 1157 ರಲ್ಲಿ ಕಲ್ಯಾಣವನ್ನು ಕಲಚೂರಿ ಮನೆತನದ ಅರಸನಾದ ಬಿಜ್ಜಳನು ಪಡೆದುಕೊಂಡಿದ್ದಕ್ಕಾಗಿ ಇವನ ಅವನತಿಯಾಯಿತು.
ನಾಲ್ಕನೇ ಸೋಮೇಶ್ವರ ( ಸಾಮಾನ್ಯ ಶಕ 1183-1189).
* ಕಲ್ಯಾಣ ಚಾಲುಕ್ಯರ ಕೊನೆಯ ದೊರೆ.
-: ಆಡಳಿತ :-
* ಕಲ್ಯಾಣಿ ಚಾಲುಕ್ಯರು ಬಾದಾಮಿ ಚಾಲುಕ್ಯರ ಆಡಳಿತ ವ್ಯವಸ್ಥೆಯನ್ನು ಹೋಲುವಂತಹ ಆಡಳಿತ ಪದ್ಧತಿಯನ್ನು ರೂಪಿಸಿದರು.
* ದಾಸಿವೇರ್ಗಡೆ – ಅರಮನೆಯ ಪಾರುಪತ್ಯಗಾರ
* ಖಾನಸವೇರ್ಗಡೆ – ಉಗ್ರಾಣ ಪಾರುಪತ್ಯಗಾರ
* ಅಂತಃಪುರಾಧ್ಯಕ್ಷ – ಅಂತಪುರದ ಮೇಲ್ವಿಚಾರಕ
-: ಆಡಳಿತ ವಿಂಗಡನೆ :-
* ರಾಷ್ಟ್ರ ರಾಷ್ಟ್ರಪತಿ, ವಿಷಯ ವಿಷಯ ಪತಿ, ನಾಡು ನಾಡ ರಸ, ಧಾನ ಗ್ರಾಮ ಕೂಟ.
-: ಕಲ್ಯಾಣಿ ಚಾಲುಕ್ಯರ ಸಾಂಸ್ಕೃತಿಕ ಕೊಡುಗೆಗಳು :-
* ಬಿಲ್ಹಣ – ವಿಕ್ರಮಂಕದೇವಚರಿತಂ
* ವಾದಿರಾಜ – ಪಾರ್ಶ್ವನಾಥ ಚರಿತೆ, ಯಶೋಧರ ಚರಿತೆ.
* ಬಸವಣ್ಣ ವಚನಗಳು
* ನಾಗಚಂದ್ರ – ಮಲ್ಲಿನಾಥ ಪುರಾಣ, ರಾಮಚಂದ್ರಚರಿತಪುರಾಣ
* ರನ್ನ – ಅಜಿತಪುರಾಣ, ಸಾಹಸಭೀಮ ವಿಜಯ ಅಥವಾ ಗದಾಯುದ್ಧ , ಪರಶುರಾಮ ಚರಿತೆ, ಚಕ್ರೇಶ್ವರ ಚರಿತೆ, ರನ್ನ ಕಂದ
* ಒಂದನೇ ನಾಗವರ್ಮ – ಕರ್ನಾಟಕ ಕಾದಂಬರಿ, ಛಂದೋಬುಧಿ
* ಎರಡನೇ ಚಾವುಂಡರಾಯ – ಲೋಕೋಪಕಾರಿ
* ಶ್ರೀಧರಾಚಾರ್ಯ – ಜಾತಕ ತಿಲಕ
* ಎರಡನೇ ನಾಗವರ್ಮ – ಕಾವ್ಯಾವಲೋಕನ ಭಾಷ ಭೂಷಣ ಅಭಿದಾನಿವಸ್ತುಕೋಶ
* ದುರ್ಗಸಿಂಹ – ಪಂಚತಂತ್ರ
* ನಯಸೇನಾ – ಧರ್ಮಾಮೃತ