ವಿಜಯನಗರ ಸಾಮ್ರಾಜ್ಯ (ಭಾಗ-2).TET,GPSTR,HSTR,PDO,FDA,SDA All Competative exam notes.

-: ತುಳುವ ವಂಶ(ಸಾ.ಶ 11503-1565):-

* ಸ್ಥಾಪಕ – ವೀರನರಸಿಂಹ.

ಶ್ರೀಕೃಷ್ಣದೇವರಾಯ (ಸಾ.ಶ1509-1529).

* ದಕ್ಷಿಣ ಭಾರತವನ್ನಾಳಿದ ಸರ್ವಶ್ರೇಷ್ಠ ಸಾಮ್ರಾಟರಲ್ಲಿ ಹಾಗೂ ವಿಜಯನಗರದ ಅರಸರಲ್ಲೆ ಶ್ರೀಕೃಷ್ಣದೇವರಾಯ ಶ್ರೇಷ್ಠನು.

  -: ಬಿರುದುಗಳು :-

* ಯವನರಾಜ್ಯ ಪ್ರತಿಷ್ಠಾಪನಾಚಾರ್ಯ, ಆಂಧ್ರಭೋಜಕ, ಕರ್ನಾಟಕ ರಾಜ್ಯರಮಾರಮಣ, ದಕ್ಷಿಣ ಸಮುದ್ರಾಧಿಪತಿ, ಕವಿಪುಂಗವ.

* ರಾಬರ್ಟ್ ಸ್ಯುಯೆಲ್ ಹೇಳುವಂತೆ ಕೃಷ್ಣದೇವರಾಯನು ಅಸಾಮಾನ್ಯ ಪರಾಕ್ರಮಿ. ಚತುರ ಸೇನಾನಿ ಮತ್ತು ರಾಜತಂತ್ರ ನಿಪುಣ.

-: ಸೈನಿಕ ಸಾಧನೆಗಳು :-

1. ಬೀದರ್ ಮತ್ತು ಬಿಜಾಪುರದ ಸುಲ್ತಾನರುಗಳ ವಿರುದ್ಧ ಯುದ್ಧ(1510).

2. ಉಮ್ಮತ್ತೂರಿನ ಪಾಳೆಗಾರರ ದಮನ(1511).

3. ಕಳಿಂಗದ ಮೇಲೆ ದಿಗ್ವಿಜಯ(1513-1518).

ಒಡಿಶಾದ ರಾಜಧಾನಿ ಮೇಲೆ ದಾಳಿ ಮಾಡಿ ಪ್ರತಾಪರುದ್ರದೇವ ಕೃಷ್ಣದೇವರಾಯನಿಗೆ ಶಾಂತಿ ಒಪ್ಪಂದ ಮಾಡಿಕೊಂಡು ತನ್ನ ಮಗಳಾದ ಜಗನ್ಮೋಹಿನಿಯನ್ನು ಕೊಟ್ಟು ವಿವಾಹ ಮಾಡಿದ್ದನು.

4. ಗೋಲ್ಕಂಡ ಮುತ್ತಿಗೆ(1516).

5. ರಾಯಚೂರು ಕಾಳಗ(1520).

6. ಕಲ್ಬುರ್ಗಿ ಮೇಲಿನ ದಾಳಿ

7. ಶ್ರೀಲಂಕಾದ ಮೇಲೆ ದಾಳಿ

-: ಪೋರ್ಚುಗೀಸರೊಡನೆ ಸಂಬಂಧ:-

* ಕೃಷ್ಣದೇವರಾಯ ಪೋರ್ಚುಗೀಸರಿಂದ ಪರ್ಷಿಯನ್ ಮತ್ತು ಅರಬ್ ಕುದುರೆಗಳನ್ನು ಪಡೆಯಲು ಸ್ನೇಹ ಬೆಳೆಸಿದನು.

* ಪೋರ್ಚುಗೀಸರ ವೈಸರಾಯ ಅಲ್ಬುಕರ್ಕ್ ಸಾಮಾನ್ಯ ಶಕ 1510 ರಲ್ಲಿ ಬಿಜಾಪುರ ಸುಲ್ತಾನನಿಂದ ಗೋವಾ ಗೆದ್ದುಕೊಳ್ಳಲು ಕೃಷ್ಣದೇವರಾಯ ಸಹಾಯವನ್ನು ಮಾಡಿದನು.

-: ಸಾಂಸ್ಕೃತಿಕ ಸಾಧನೆಗಳು:-

* 1510ರಲ್ಲಿ ವಿವಾಹ ತೆರಿಗೆ ರದ್ದುಗೊಳಿಸಿದನು.

* ಅಮುಕ್ತ ಮೌಲ್ಯದ ಕೃತಿಯನ್ನು ತೆಲುಗು ಭಾಷೆಯಲ್ಲಿ ರಚಿಸಿದರು.

* ಜಾಂಬವತಿ ಕಲ್ಯಾಣ ಎಂಬ ಸಂಸ್ಕೃತ ನಾಟಕವನ್ನು ರಚಿಸಿದರು.

-: ಈತನ ಆಸ್ಥಾನದಲ್ಲಿದ್ದ ಅಷ್ಟದಿಗ್ಗಜರು :-

1. ಅಲ್ಲಸಾನಿ ಪೆದ್ದಣ್ಣ – ಮನುಚರಿತಂ

2. ನಂದಿ ತಿಮ್ಮಣ – ಪಾರಿಜಾತಹರಣಂ

3. ದೂರ್ಜಟಿ- ಕೃಷ್ಣರಾಜ ವಿಜಯ, ಕಾಳಹಸ್ತಿ ಶತಕ

4. ಮಾದಯ್ಯಗಾರಿ ಮಲ್ಲಣ್ಣ – ರಾಜಶೇಖರ ಚರಿತಂ

5. ರಾಮರಾಜ ಭೂಷಣ – ವಸುಚರಿತಂ

6. ಪಿಂಗಳಿ ಸುರಣ್ಣ – ಕಲಾಪೂರ್ಣ ವಿಜಯಂ

7. ಅಮ್ಯಾಲು ರಾಜರಾಮಭದ್ರ- ರಾಧಮಾಧವ

8. ತೆನಾಲಿ ರಾಮಕೃಷ್ಣ- ಪಾಂಡುರಂಗ ಮಹಾತ್ಮೆ, ಹರಿಭಕ್ತಿಸಾರ

-: ಇವನ ಕಾಲದ ಇತರ ಕವಿಗಳು ಮತ್ತು ಅವರ ಕೃತಿಗಳು :-

* ಕುಮಾರವ್ಯಾಸ – ಗದುಗಿನ ಭಾರತ ಅಥವಾ ಕರ್ನಾಟಕ ಕಥಾಮಂಜರಿ

* ರತ್ನಾಕರವರ್ಣಿ – ಭರತೇಶ ವೈಭವ

* ನಂಜುಂಡ ಕವಿ- ಕುಮಾರರಾಮನ ಕಥೆ

* ವಿರೂಪ ರಾಜ- ತ್ರಿಭುವನ ತಿಲಕ

* ಹರಿದಾಸ- ಇರು ಸಮಯ ವಿಳಕ್ಕಂ

* ದಾಸಸಾಹಿತ್ಯ – ಕನಕದಾಸರ ನಳಚರಿತ್ರೆ, ಮೋಹನ ತರಂಗಿಣಿ ಮತ್ತು ರಾಮಧಾನ್ಯಚರಿತೆ.

* ಹೊನ್ನಮ್ಮ ಎಂಬುವವಳು ಎರಡನೇ ದೇವರಾಯನ ಆಸ್ಥಾನದಲ್ಲಿ ವರದಿಗಾರರಾಗಿದ್ದಳು.

* ವಿಜಯನಗರ ಕಾಲದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ ಕುಸ್ತಿ.

* ಹರಿಯಕ್ಕ ಎಂಬುವವಳು ಆ ಕಾಲದ ಖ್ಯಾತ ಮಹಿಳಾ ಕುಸ್ತಿಪಟು.

* ಅನಂತಪುರ ಜಿಲ್ಲೆಯ ಗುತ್ತಿ ಸಮೀಪದ ವಜ್ರ ಕರೂರು ವಜ್ರದ ಕೇಂದ್ರವಾಗಿತ್ತು.

* ಕ್ಯಾಲಿಕಟ್ ನಲ್ಲಿ ನೀಲಗಳು ಹೇರಳವಾಗಿ ದೊರೆಯುತ್ತಿದ್ದವು.

* ಭಟ್ಕಳವು ಕಬ್ಬಿಣದ ಅದಿರಿನ ಕೇಂದ್ರವಾಗಿತ್ತು.

-: ವಿದೇಶಿ ಪ್ರವಾಸಿಗರ ಭೇಟಿ :-

* ಬಾರ್ಬೋಸಾ – ಕ್ರೈಸ್ತನೇ, ಯಹೂದಿಯೇ, ಮಹಮ್ಮದಿಯನೇ ಅಥವಾ ಹಿಂದೂವೇ ಯಾರಾದರೂ ನಿರಾತಂಕವಾಗಿ ಈ ರಾಜ್ಯದಲ್ಲಿ ಬಾಳಬಹುದು.

* ಪೇಸ್ – ದಿನಕ್ಕೊಂದು ಸಂತೆ ನಡೆಯುತ್ತಿತ್ತು.

-: ತಾಳಿಕೋಟೆ ಕದನ( ಸಾಮಾನ್ಯ ಶಕ1565).

* ತಾಳಿಕೋಟೆ ಸಮೀಪದ ರಕ್ಕಸಗಿ ಮತ್ತು ತಂಗಡಗಿ ಗ್ರಾಮಗಳ ಮಧ್ಯದಲ್ಲಿ ಈ ಕದನ ನಡೆಯಿತು.

-: ಸಾಂಸ್ಕೃತಿಕ ಕೊಡುಗೆಗಳು:-

   ಆಡಳಿತ

* ಕೃಷ್ಣದೇವರಾಯನ ಅಮುಕ್ತ ಮೌಲ್ಯ ಕೃತಿಯಲ್ಲಿ ” ಕಿರೀಟ ಹೊತ್ತ ರಾಜನ ಸದಾ ಧರ್ಮದ ಮೇಲೆ ಕಣ್ಣಿಟ್ಟು ಆಳಬೇಕು” ಎಂದಿದ್ದಾನೆ.

    ಮಂತ್ರಿಮಂಡಲ

ಅಬ್ದುಲ್ ರಜಾಕ್ ಮತ್ತು ನ್ಯೂನಿಜ್ ರಾಜಧಾನಿಯಲ್ಲಿ ಒಂದು ಕೇಂದ್ರಾಡಳಿತ ಕಚೇರಿ ಇತ್ತು ಎಂದಿದ್ದಾರೆ. ರಜಾಕ್ ಇದನ್ನು ದಿವಾನಖಾನೆ ಎಂದು ಕರೆದಿದ್ದಾನೆ.

* ಸಚಿವಾಲಯದ ಕಾರ್ಯದರ್ಶಿಯನ್ನು ರಾಯಸಂ, ಮುಖ್ಯ ಕಾರ್ಯದರ್ಶಿಯನ್ನು ರಾಯಸ ಸ್ವಾಮಿ ಎಂದು ಕರೆಯುತ್ತಿದ್ದರು, ಅಲ್ಲದೆ ಕಾರ್ಯಕರ್ತ ಎಂಬ ಪ್ರಮುಖ ಅಧಿಕಾರಿಯ ಉಲ್ಲೇಖವಿದೆ.

* ರಾಜನ ಆಜ್ಞೆಗಳನ್ನು ಜಾರಿಗೆ ತರುವ ಅಧಿಕಾರಿಯನ್ನು ಶಾಸನಚಾರ್ಯ ಎಂತಲೂ, ಸ್ವಧರ್ಮ ರಕ್ಷಣೆಗೆ ನೇಮಿಸಲ್ಪಟ್ಟ ಅಧಿಕಾರಿಗಳನ್ನು ಸಮಾಯಾಚಾರ್ಯ ಎಂತಲೂ ಕರೆಯುತ್ತಿದ್ದರು.

* ಅಪರಾಧಿಗಳಿಗೆ ಮರಣದಂಡನೆ, ಸೆರೆವಾಸ ಮತ್ತು ದಂಡವನ್ನು ಶಿಕ್ಷೆಗಳಾಗಿ ವಿಧಿಸಲಾಗುತ್ತಿತ್ತು. ಕೆಲವೊಂದು ಸಂದರ್ಭಗಳಲ್ಲಿ ಅಪರಾಧಿಗಳನ್ನು ಆನೆ ಕಾಲಿನಿಂದ ತುಳಸಿ ಸಾಯಿಸುವ ಶಿಕ್ಷೆ ಕೊಡಲಾಗುತ್ತಿತ್ತು.

-: ಈ ಕಾಲದ ಪ್ರಮುಖ ಅಧಿಕಾರಿಗಳೆಂದರೆ :-

* ಸಭಾ ನಾಯಕ( ಶರೀಯತ್ ನ ಮುಖ್ಯಸ್ಥ)

* ಮಹಾಸಂಧಿ ವಿಗ್ರಹಿ( ವಿದೇಶಾಂಗ ವ್ಯವಹಾರ)

  ಪ್ರಾಂತೀಯ ಆಡಳಿತ

* ಕ್ರಾಂತಿಯ ಆಡಳಿತವನ್ನು ನಾಯಂಕರ ಪದ್ಧತಿಯೆಂದು ಕರೆಯುತ್ತಿದ್ದರು.

* ರಾಜ್ಯಗಳನ್ನು ವಿಷಯ ಅಥವಾ ವೆಲಾಡಿ ಅಂತಲೂ, ವಿಷಯವನ್ನು ನಾಡು ಅಥವಾ ಸೀಮೆ ಅಂತಲೂ ವಿಭಾಗಿಸಲಾಗಿತ್ತು ಆಡಳಿತದ ಕೊನೆಯ ಘಟಕ ಗ್ರಾಮವಾಗಿತ್ತು.

     ಗ್ರಾಮ ಆಡಳಿತ

* ಗೌಡ ಎಂಬ ಅಧಿಕಾರಿ ಗ್ರಾಮದ ಮುಖಂಡನಾಗಿದ್ದನು.

* ಶಾನುಭೋಗ ಗ್ರಾಮದ ಕರಣಿಕನಾಗಿದ್ದನು.

* ಕೇಂದ್ರ ಸರ್ಕಾರ ಮತ್ತು ಗ್ರಾಮದ ಕೊಂಡಿಯಾಗಿ ಗ್ರಾಮ ಸಮಸ್ಯೆ ಬಗೆಹರಿಸುತ್ತಿದ್ದ ಅಧಿಕಾರಿ ಮಹಾನಕ ಚಾರ್ಯ.

* ಗ್ರಾಮ ಸೇವಕನನ್ನು ಆಯಗಾರ ಎಂತಲು, ಗ್ರಾಮಪೀಸರನ್ನು ತಳಾರಿ ಅಂತಲೂ ಕರೆಯುತ್ತಿದ್ದರು.

   ಆರ್ಥಿಕ ಜೀವನ

* ಭೂ ಕಂದಾಯ ರಾಜ್ಯದ ಆದಾಯದ ಪ್ರಮುಖ ಮೂಲವಾಗಿತ್ತು.

* ಕೃಷಿ  ಅರ್ಥವ್ಯವಸ್ಥೆಯ ಬೆನ್ನೆಲುಬಾಗಿತ್ತು.ವಿಜಯನಗರ ಸಾಮ್ರಾಜ್ಯದ ಕಾಲವೂ ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಿತ್ತು.

* ಬಟ್ಟೆ ನೆಯ್ಗೆ ಮುಖ್ಯ ಕೈಗಾರಿಕೆ ಆಗಿತ್ತು.

   ಸಾಮಾಜಿಕ ಜೀವನ

* ಸಮಾಜವು ಚಾತುರ್ವರ್ಣ ವ್ಯವಸ್ಥೆ ಮೇಲೆ ರೂಪಗೊಂಡಿತ್ತು.

* ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ ಮತ್ತು ದೇವದಾಸಿ ಪದ್ಧತಿಗಳು ಅಸ್ತಿತ್ವದಲ್ಲಿದ್ದವು.

    ಧಾರ್ಮಿಕ ವ್ಯವಸ್ಥೆ

* ವಿಜಯನಗರ ಎಲ್ಲ ಮತಗಳಿಗೂ ಪ್ರೋತ್ಸಾಹ ನೀಡಿದ ಕೀರ್ತಿಗೆ ಪಾತ್ರವಾಗಿದೆ.

* ಶ್ರೀ ವೈಷ್ಣವ ಮತ್ತು ಜೈನ ಮತಾವಲಂಬಿಗಳು ತಮ್ಮ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಪರಸ್ಪರ ಗೌರವದಿಂದ ಬಾಳುವಂತ ವಾತಾವರಣ ನಿರ್ಮಾಣವಾಗಿತ್ತು.

* ವಿಜಯನಗರದಲ್ಲಿ ಮುಸ್ಲಿಮರಿಗೆ ಮಸೀದಿಗಳನ್ನು ಕಟ್ಟಿಸಲಾಯಿತು.

    ಶಿಕ್ಷಣ ಮತ್ತು ಸಾಹಿತ್ಯ.

* ಧೂಳಾಕ್ಷರ ಎಂಬುದು ಒಂದು ಶಿಕ್ಷಣ ಪದ್ಧತಿಯಾಗಿದ್ದು ಅದು ಕನಕದಾಸರ ಮೋಹನ ತರಂಗಿಣಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಇದು ಮರಳಿನ ಮೇಲೆ ಬರೆಯುವ, ಕಲಿಕೆಯ ಪದ್ಧತಿಯಾಗಿತ್ತು.

* ಪ್ರಾಥಮಿಕ ಶಿಕ್ಷಣವನ್ನು ” ಬಾಲ ಭೋದೆ” ಎಂದು ಕರೆಯಲಾಗುತ್ತಿತ್ತು.

* ಹಂಪಿ, ಕೋಡಿಮಠ, ಶೃಂಗೇರಿ, ಯಡಿಯೂರು ಹಾಗೂ ಕುಣಿಗಲ್ ಕಾಲದ ಪ್ರಮುಖವಾದ ಶಿಕ್ಷಣ ಕೇಂದ್ರಗಳಾಗಿದ್ದವು.

-: ವಿಜಯನಗರ ಕಾಲದ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯ :-

* ಮಾಧವ – ಸಾಯಣ- ಪರಾಸರ ಮಾಧವಿಯ

* ಗಂಗಾದೇವಿ – ಮಧುರ ವಿಜಯಂ

* ತಿರುಮಲಾಂಬ- ವರದಾಂಬಿಕೆ ಪರಿಣಯಂ

* ಗುರುವಿದ್ಯಾರಣ್ಯ – ರಾಜಕಾಲನಿರ್ಣಯ, ಶಂಕರ ವಿಜಯ, ಸರ್ವದರ್ಶನ ಸಂಗ್ರಹ

* ಕೃಷ್ಣದೇವರಾಯ – ಜಾಂಬವತಿ ಕಲ್ಯಾಣ, ಉಷಾ ಪರಿಣಯಂ

   ಕನ್ನಡ ಸಾಹಿತ್ಯ

* ಕುಮಾರವ್ಯಾಸ – ಕರ್ನಾಟಕ ಕಥಾಮಂಜರಿ

* ರತ್ನಾಕರವರ್ಣಿ – ಭರತೇಶ ವೈಭವ

* ಭೀಮಕವಿ – ಬಸವ ಪುರಾಣ

* ಚಾಮರಸ – ಪ್ರಭುಲಿಂಗ ಲೀಲೆ

* ವಿರುಪಾಕ್ಷ ಪಂಡಿತ – ಚನ್ನಬಸವ ಪುರಾಣ

* ಕನಕದಾಸ – ಮೋಹನ ತರಂಗಿಣಿ, ನಳ ಚರಿತೆ, ಹರಿಭಕ್ತಸಾರ, ರಾಮಧ್ಯಾನ ಚರಿತೆ.

* ನರಹರಿ – ತೊರವೆ ರಾಮಾಯಣ

* ಶ್ರೀನಾಥ – ಕಾಶಿ ಕಂದ

* ಕೃಷ್ಣದೇವರಾಯ – ಅಮುಕ್ತ ಮೌಲ್ಯದ

* ಅಲ್ಲಸಾನಿ ಪೆದ್ದಣ್- ಮನುಚರಿತಂ ( ಆಂಧ್ರ ಕವಿ ಪಿತಾಮಹ)

  ಕಲೆ ಮತ್ತು ವಾಸ್ತು ಶಿಲ್ಪ

* ಪರ್ಷಿ ಬ್ರೌನರು ವಿಜಯನಗರದ ವಾಸ್ತುಶಿಲ್ಪ ಶೈಲಿಯನ್ನು ದ್ರಾವಿಡ ಶೈಲಿಯ ಶ್ರೇಷ್ಠ ವಿಕಸಿತ ರೂಪ ಎಂದು ವರ್ಣಿಸಿದ್ದಾನೆ.

* ಇವರು ದ್ರಾವಿಡ ಶೈಲಿಯನ್ನು . ನಂತರ ಕೆಲವೊಂದು ವಿಶಿಷ್ಟವಾದ ಲಕ್ಷಣಗಳನ್ನು ಸೇರಿಸಿದರು.

* ಲೇಪಾಕ್ಷಿಯನ್ನು ಶೈವರ ಅಜಂತಾ ಎಂದು ಕರೆಯಲಾಗಿದೆ.

 

WhatsApp Group Join Now
Telegram Group Join Now