-: ಭಾರತದ ದಂಗೆಯ ಪ್ರಮುಖ ಸ್ಥಳಗಳು ಮತ್ತು ನಾಯಕರುಗಳು :-
* ದೆಹಲಿ – ಸೇನಾಪತಿ ಬಖತ್ ಖಾನ್
* ಕಾನ್ಪುರ್ – ನಾನಾ ಸಾಹೇಬ್ ಮತ್ತು ತಾತ್ಯಾ ಟೋಪಿ
* ಲಕ್ನೋ – ಬೇಗಂ ಹಜರತ್ ಮಹಲ್
* ಝಾನ್ಸಿ – ರಾಣಿ ಲಕ್ಷ್ಮೀ ಬಾಯಿ
* ಬಿಹಾರ – ಕುಂವರ್ ಸಿಂಗ್
-: ಕರ್ನಾಟಕದಲ್ಲಿ ದಂಗೆಯ ಪ್ರಮುಖ ಸ್ಥಳಗಳು ಮತ್ತು ನಾಯಕರು :-
* ಮುಂಡರಗಿ – ಭೀಮರಾವ್
* ಹಲಗಲಿ – ಬೇಡರು
* ಸುರಪುರ – ನಾಲ್ಕನೇ ವೆಂಕಟಪ್ಪ ನಾಯಕ
* ನರಗುಂದ – ಬಾಬಾಸಾಹೇಬ್
ಸಾಮಾನ್ಯ ಶಕ 1858 ರಲ್ಲಿ ಬ್ರಿಟನ್ನಿನ ರಾಣಿ ವಿಕ್ಟೋರಿಯಾ ಒಂದು ಘೋಷಣೆಯನ್ನು ಹೊರಡಿಸಿದಳು. ಈ ಘೋಷಣೆಯು ಭಾರತೀಯರ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿತು. ಈ ಹೋರಾಟವು ಆಧುನಿಕ ರಾಷ್ಟ್ರೀಯ ಚಳುವಳಿಯ ಉದಯಕ್ಕೆ ನಾಂದಿ ಹಾಡಿತು. ಮುಂದಿನ ಸ್ವಾತಂತ್ರ್ಯ ಹೋರಾಟಕ್ಕೆ ನಿರಂತರ ಸ್ಫೂರ್ತಿಯಾಗಿ ಪರಿಣಮಿಸಿತು.
-: ಮಹಾದಂಗೆಯ ಸ್ವರೂಪ:-
* ಸಿಪಾಯಿ ದಂಗೆ – ಬ್ರಿಟಿಷರು
* ಜನತೆಯ ಮಹಾನ್ ಬಂಡಾಯ/ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ – ಭಾರತದ ರಾಷ್ಟ್ರೀಯ ಇತಿಹಾಸಕಾರರು
* ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಪ್ರಥಮ ಯುದ್ಧ – ವಿನಾಯಕ್ ದಾಮೋದರ್ ಸಾವರ್ಕರ್
* ಭಾರತದ ಮೊದಲ ಸ್ವಾತಂತ್ರ್ಯ ಸಮರ – ಪಟ್ಟಾಭಿ ಸೀತಾರಾಮಯ್ಯ
-: ಸ್ವಾತಂತ್ರ್ಯ ಚಳುವಳಿ (1885-1919) :-
* 19ನೇ ಶತಮಾನದಲ್ಲಿ ರಾಷ್ಟ್ರೀಯತೆ ಬೆಳವಣಿಗೆಯಾಯಿತು.
* ರಾಷ್ಟ್ರೀಯತೆ ಎಂದರೆ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದ ಜನರ ಮನದಲ್ಲಿ ಮೂಡುವ ನಾವೆಲ್ಲರೂ ಒಂದೇ ಎಂಬ ಏಕತೆಯ ಭಾವನೆಯಾಗಿದೆ.
* ರಾಷ್ಟ್ರೀಯತೆ ಬೆಳವಣಿಗೆಗೆ ಹಲವು ಅಂಶಗಳು ಪ್ರೇರಣೆ ನೀಡಿದವು ಅವುಗಳೆಂದರೆ
* ಪಾಶ್ಚಿಮಾತ್ಯ ಶಿಕ್ಷಣ ಮತ್ತು ಆಧುನಿಕ ಜ್ಞಾನ ವಿಜ್ಞಾನದ ಪರಿಚಯ.
* ಏಕರೂಪದ ಆಡಳಿತಾತ್ಮಕ ವ್ಯವಸ್ಥೆ.
-: ಆರ್ಥಿಕ ಶೋಷಣೆ :-
* ದಾದಾಬಾಯಿ ನವರೋಜಿ ಅವರು ಭಾರತದ ಸಂಪತ್ತನ್ನು ಬ್ರಿಟಿಷರು ದೋಚುತಿದ್ದ ಕ್ರಮವನ್ನು ” ಸಂಪತ್ತಿನ ಸೋರಿಕೆ ಸಿದ್ಧಾಂತ ” ಮೂಲಕ ಪ್ರತಿಪಾದಿಸಿದ್ದಾರೆ.
-: ಭಾರತದ ರಾಷ್ಟ್ರೀಯ ಕಾಂಗ್ರೆಸ್ ( 1885):-
* ಸ್ಥಾಪಕ – ಎಲನ್ ಆಕ್ಟೇವಿಯನ್ ಹ್ಯೂಮ್
* ಅಧ್ಯಕ್ಷರು – ಉಮೇಶ್ ಚಂದ್ರ ಬ್ಯಾನರ್ಜಿ
* ಸ್ಥಳ – ಮುಂಬೈ
-: ಮಂದಗಾಮಿಗಳ ಯುಗ ( 1885- 1905 ) :-
* ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಆರಂಭಿಕ ನಾಯಕರನ್ನು ಮಂದಗಾಮಿಗಳು ಅಥವಾ ಸೌಮ್ಯವಾದಿಗಳು ಎಂದು ಕರೆಯುತ್ತಾರೆ.
* ಇವರು ಬ್ರಿಟಿಷರ ಆಳ್ವಿಕೆಗೆ ನಿಷ್ಠಾವಂತರಾದ ಪ್ರಾರ್ಥನೆ ಚಿನ್ನಹ ಮತ್ತು ಪ್ರತಿಭಟನೆಯ ನೀತಿಯನ್ನು ಅನುಸರಿಸಿದರು.
* ಮಂದಗಾಮಿಗಳಲ್ಲಿ ಪ್ರಮುಖ ನಾಯಕರುಗಳೆಂದರೆ.
* ದಾದಾಬಾಯಿ ನವರೋಜಿ, ಸುರೇಂದ್ರನಾಥ್ ಬ್ಯಾನರ್ಜಿ, ಗೋಪಾಲಕೃಷ್ಣ ಗೋಖಲೆ, ಮಹಾದೇವ ಗೋವಿಂದ ರಾನಡೆ.
-: ಮಂದಗಾಮಿಗಳ ಪ್ರಮುಖ ಬೇಡಿಕೆಗಳು :-
* ವಾಕ್ ಮತ್ತು ಮುದ್ರಣ ಸ್ವಾತಂತ್ರ .
* ಕಾರ್ಯಾಂಗದಿಂದ ನ್ಯಾಯಾಂಗದ ಬೇರ್ಪಡೆ.
* ಸೈನಿಕ ವೆಚ್ಚದ ಕಡಿತ.
* ಪ್ರಾಥಮಿಕ ಪ್ರೌಢ ಮತ್ತು ತಾಂತ್ರಿಕ ಶಿಕ್ಷಣದ ಅನುಷ್ಠಾನ.
* ಶಸ್ತ್ರಾಸ್ತ್ರ ನಿಷೇಧ ಕಾಯ್ದೆ ರದ್ದತಿ.
* ಬ್ಯಾಂಕಿಂಗ್ ನೀರಾವರಿ ವೈದ್ಯಕೀಯ ಮತ್ತು ಆರೋಗ್ಯ ಸೌಲಭ್ಯಗಳು.
* ಉಪ್ಪಿನ ಸುಂಕದ ಸಂಪೂರ್ಣ ರದ್ದತಿ.
* ಇಂಗ್ಲೆಂಡ್ ಮತ್ತು ಇಂಡಿಯಾದಲ್ಲಿ ಏಕಕಾಲದಲ್ಲಿ ಐಸಿಎಸ್ ಪರೀಕ್ಷೆಯನ್ನು ನಡೆಸುವುದು.
* ಕೇಂದ್ರ ಹಾಗೂ ಪ್ರಾಂತೀಯ ಶಾಸನಸಭೆಗಳಲ್ಲಿ ಭಾರತೀಯರಿಗೆ ಪ್ರಾತಿನಿಧ್ಯ ನೀಡುವುದು.
* ಉನ್ನತ ಹುದ್ದೆಗಳಿಗೆ ಭಾರತೀಯರನ್ನು ನೇಮಿಸುವುದು.
-: ತೀವ್ರಗಾಮಿಗಳ ಯುಗ (1905-1919):-
* ಇವರು ಮಂಡ್ಯಗಾಮಿಗಳ ನೀತಿಯನ್ನು ತಿರುಪೆಯ ನೀತಿ ( ಪಾಲಿಸಿ ಆಫ್ ಮೆಂಡಿಕೆನ್ಸಿ ) ಎಂದು ವ್ಯಂಗ್ಯವಾಡಿದರು.
-: ತೀವ್ರಗಾಮಿಗಳ ಪ್ರಮುಖ ನಾಯಕರು :-
* ಲಾಲಾ ಲಜಪತ್ ರಾಯ್ , ಬಾಲಗಂಗಾಧರ್ ತಿಲಕ್, ಬಿಪಿನ್ ಚಂದ್ರ ಪಾಲ್.
* ಈ ಮೂವರನ್ನು ಲಾಲ್- ಬಾಲ್ – ಪಾಲ್ ಎಂದು ಕರೆಯುತ್ತಾರೆ.
* ಬಾಲಗಂಗಾಧರ್ ತಿಲಕ್ :- ” ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ನಾನು ಅದನ್ನು ಪಡೆದೆ ತೀರುತ್ತೇನೆ” .
* ತಿಲಕರು ಗಣೇಶ ಮತ್ತು ಶಿವಾಜಿ ಉತ್ಸವಗಳನ್ನು ಪರಿಚಯಿಸಿದರು.
* ಬಾಲಗಂಗಾಧರ್ ತಿಲಕರು ಇಂಗ್ಲೀಷ್ ಭಾಷೆಯಲ್ಲಿ ‘ ಮರಾಠ’ ಮತ್ತು ಮರಾಠಿ ಭಾಷೆಯಲ್ಲಿ ‘ ಕೇಸರಿ ‘ ಎಂಬ ಪತ್ರಿಕೆಗಳನ್ನು ಪ್ರಕಟಿಸಿದರು.
* ಬಿಪಿನ್ ಚಂದ್ರ ಪಾಲರು ‘ ನ್ಯೂ ಇಂಡಿಯಾ ‘ ಮತ್ತು ಅರವಿಂದರು ‘ ವಂದೇ ಮಾತರಂ’ ಪತ್ರಿಕೆಗಳನ್ನು ಪ್ರಾರಂಭಿಸಿದರು.
* ಲಾಲಾ ಲಜಪತ್ ರಾಯ್ ಅವರನ್ನು ‘ ಪಂಜಾಬಿನ ಸಿಂಹ ‘ ಎಂದು ಕರೆಯುತ್ತಾರೆ.
* ಲಾಲಾ ಲಜಪತ್ ರಾಯ್ ಅವರು ” ನಾವು ಸ್ವರಾಜ್ಯವನ್ನು ಹಕ್ಕಿನ ರೂಪದಲ್ಲಿ ಪಡೆಯುತ್ತೇವೆ, ಹೊರತು ಭಿಕ್ಷಾ ರೂಪದಲ್ಲಿ ಅಲ್ಲ” ಎಂದು ಹೇಳಿದರು.
* ತೀವ್ರವಾದವನ್ನು ಪ್ರತಿನಿಧಿಸಿದ ಮತ್ತೊಬ್ಬ ನಾಯಕರಲ್ಲಿ ” ಅರವಿಂದ್ ಘೋಷ್ ” ಕೂಡ ಒಬ್ಬರು.