ಹೊಸ ಧರ್ಮಗಳ ಉದಯಕ್ಕೆ ಕಾರಣಗಳು.
* ವೈಧಿಕ ಧರ್ಮದಲ್ಲಿನ ಗೊಂದಲಗಳು
* ಪುರೋಹಿತ ವರ್ಗದ ಪರಮಾಧಿಕಾರ
* ಪ್ರಾಣಿಬಲಿ
* ಮಂತ್ರಗಳ ಪಠಣ
* ಜಾತಿ ಪದ್ಧತಿ
* ಮಹಾನ್ ವ್ಯಕ್ತಿಗಳ ಜನನ
-: ಜೈನ ಧರ್ಮ :-
* ಸ್ಥಾಪಕ – ವೃಷಭನಾಥ ಅಥವಾ ಆದಿನಾಥ
* 23 ನೇ ತೀರ್ಥಂಕ – ಪಾರ್ಶ್ವನಾಥ
* 24 ನೇ ತೀರ್ಥಂಕ – ವರ್ಧಮಾನ ಮಹಾವೀರ
-: ಪಾರ್ಶ್ವನಾಥ :-
* ಪ್ರೋ. ಜಾಕೊಬಿ ರವರ ಪ್ರಕಾರ ಪಾರ್ಶ್ವನಾಥ ಜೈನ ಧರ್ಮದ ನಿಜವಾದ ಸ್ಥಾಪಕ.
ಬೋಧನೆಗಳು
* ಅಹಿಂಸೆ, ಸತ್ಯ, ಆಸ್ತೆಯ ( ಕದಿಯದಿರುವುದು )
* ಅಪರಿಗ್ರಹ ( ಸಂಪತ್ತಿನ ವ್ಯಾಮೋಹ ಇಲ್ಲದಿರೂವುದು ಅವಶ್ಯಕತೆಗಿಂತ ಹೆಚ್ಚು ಸಂಪತ್ತನ್ನು ಸಂಗ್ರಹಿಸಬಾರದು)
-: ವರ್ಧಮಾನ ಮಹಾವೀರ ( ಸಾ.ಶ.ಪೂ 599 – 527 ).
* ಜನನ – ವೈಶಾಲಿ ಸಮೀಪದ ಕುಂದ ಗ್ರಾಮ ಸಾ.ಶ.ಪೂ 599.
* ತಂದೆ – ಸಿದ್ಧಾರ್ಥ, ತಾಯಿ – ತ್ರಿಶಲಾದೇವಿ
* ಪತ್ನಿ – ಯಶೋಧರೆ
* ಮಗಳು – ಅನೋಹಜ ( ಪ್ರಿಯದರ್ಶಿನಿ)
* ಜ್ಞಾನೋದಯ – ಜೃಂಬಿಕ ಗ್ರಾಮದ ಸಾಲುಮರದಡಿಯಲ್ಲಿ
* ಕೇವಲಿನ್ ಜ್ಞಾನ ( ಸರ್ವಜ್ಞ) ಪಡೆದು ಜಿನ ( ಇಂದ್ರಿಯ ನಿಗ್ರಹ) – ಪ್ರಾಪಂಚಿಕ ಸುಖ ದುಃಖಗಳನ್ನು ಹತ್ತಿಕ್ಕಿದವನು/ ರಾಗ ದ್ವೇಷಗಳನ್ನು ಗೆದ್ದವನು ಎಂದರ್ಥ.
* ಮರಣ – ಬಿಹಾರದ ರಾಜಗ್ರಹ ಸಮೀಪದ ಪಾವಪುರಿ ಸಾ.ಶ.ಪೂ 527.
-:ವರ್ಧಮಾನ ಮಹಾವೀರ ಬೋಧನೆಗಳು :-
* ಸತ್ಯ
* ಅಹಿಂಸೆ
* ಆಸ್ತೆಯ
* ಅಪರಿಗ್ರಹ
* ಬ್ರಹಚರ್ಯ ( ಪಾವಿತ್ರ್ಯತೆ )
-: ತ್ರಿರತ್ನಗಳು :-
* ಸಮ್ಯಕ್ ಜ್ಞಾನ
* ಸಮ್ಯಕ್ ನಂಬಿಕೆ
* ಸಮ್ಯಕ್ ನಡತೆ
=> 11 ಜನ ಶಿಷ್ಯರು – ಗಣಾಧರರು
-: ಜೈನ ಧರ್ಮದ ಪ್ರಸಾರ :-
1. ಮೊದಲ ಸಭೆ ಸಾ.ಶ.ಪೂ 300 ರಲ್ಲಿ ಪಾಟಲಿಪುತ್ರ – ಜೈನ ಧರ್ಮದ ಪವಿತ್ರ ಗ್ರಂಥಗಳ ಸಂಗ್ರಹ
2. ಎರಡನೆಯ ಸಭೆ ಸಾ.ಶ. 512 ಗುಜರಾತಿನ ವಲ್ಲಬಿ – ಜೈನ ತತ್ವಗಳ ಸಂಗ್ರಹ
-: ಜೈನ ಧರ್ಮದ ಪಂಗಡಗಳು :-
* ಶ್ವೇತಾಂಬರ
* ದಿಗಂಬರರು
ಜೈನ ಧರ್ಮದ ಪವಿತ್ರ ಗ್ರಂಥ.
=> ಆಗಮ ಸಿದ್ಧಾಂತ
-: ಬೌದ್ಧ ಧರ್ಮ :-
ಗೌತಮ ಬುದ್ಧ ( ಸಾ.ಶ.ಪೂ 563 ರಿಂದ 483 ).
* ಬೌದ್ಧ ಧರ್ಮದ ಸ್ಥಾಪಕ.
* ಜನನ ಸಾ.ಶ.ಪೂ 563 ನೇಪಾಳದ ಲುಂಬಿನಿ ವನ , ತಂದೆ- ಶುದ್ಧೋದನ, ತಾಯಿ – ಮಾಯಾದೇವಿ , ಚಿಕ್ಕಮ್ಮ – ಮಹಾ ಪ್ರಜಾಪತಿ ಗೌತಮಿ, ಪತ್ನಿ – ಯಶೋಧರೆ , ಮಗ – ರಾಹುಲ್
-: ಮಹಾಪರಿತ್ಯಾಗ :-
* ರೋಗಿ
* ವೃದ್ಧ
* ಶವ
* ಸನ್ಯಾಸಿ
-: ಸತ್ಯಾನ್ವೇಷಣೆ :-
* ಗಯಾದ ಅರಳಿ ವೃಕ್ಷದ ಕೆಳಗೆ 47 ದಿನಗಳ ತಪಸ್ಸಿನ ನಂತರ ( 35 ನೇ ವಯಸ್ಸಿನಲ್ಲಿ ) ಜ್ಞಾನೋದಯವಾಯಿತು.
-: ಬೌದ್ಧ ಧರ್ಮದ ಪ್ರಸಾರ :-
* ಬುದ್ಧ ತನ್ನ ಮೊದಲ ಪ್ರವಚನವನ್ನು ಸಾರಾನಾಥದ ಜಿಂಕೆ ವನದಿಂದ ಆರಂಭಿಸಿದನು ಇದನ್ನು ಧರ್ಮಚಕ್ರ ಪ್ರವರ್ತನ ಎನ್ನುವರು.
* ನಿರ್ವಾಣ ಸಾ.ಶ.ಪೂ 487 ಪೌರ್ಣಿಮೆ.
-: ಬುದ್ಧನ ಬೋಧನೆಗಳು :-
1. ವಿನಯ ಪೀಟಕ – ಇದರಲ್ಲಿ ಬೌದ್ಧ ಬಿಕ್ಷುಗಳು ಅನುಸರಿಸಬೇಕಾದ ಶಿಸ್ತು ಬದ್ಧ ನಿಯಮಗಳಿವೆ.
2. ಸುತ್ತ ಪೀಟಕ – ಇದು ಬುದ್ಧನ ಜೀವನ ಚರಿತ್ರೆ ಹಾಗೂ ಬೋಧನೆಗಳನ್ನು ಒಳಗೊಂಡಿದೆ ಇದರಲ್ಲಿ ತಿಳಿಸುವ ಜಾತಕ ಕಥೆಗಳಿವೆ ( 548).
3. ಅಬಿದಮ್ಮ ಪೀಟಕ – ಇದು ದರ್ಶನನ ಜ್ಞಾನವನ್ನು ಹೊಂದಿದೆ.
-: ನಾಲ್ಕು ಮೂಲ ತತ್ವಗಳು :-
1. ಸತ್ಯ ನುಡಿಯುವಿಕೆ
2. ಅಹಿಂಸೆ
3. ಕಳ್ಳತನ ಮಾಡದಿರುವುದು
4. ಪವಿತ್ರತೆ
-: ನಾಲ್ಕು ಆರ್ಯ ಸತ್ಯಗಳು :-
1. ಪ್ರಾಪಂಚಿಕ ಜೀವನವು ದುಃಖಮಯವಾಗಿದೆ.
2. ಆಸೆಯೇ ದುಃಖಕ್ಕೆ ಮೂಲ ಕಾರಣ.
3. ಆಸೆಯನ್ನು ನಿದ್ರಿಸುವುದರಿಂದ ಪುನರ್ಜನ್ಮವನ್ನು ಕೊನೆಗಾಣಿಸುವುದು.
4. ಆಸೆಯನ್ನು ಕೊನೆಗಾಣಿಸಲು ಅಷ್ಟಾಂಗ ಮಾರ್ಗವನ್ನು ಅನುಸರಿಸಬೇಕು.
-: ಅಷ್ಟಾಂಗ ಮಾರ್ಗಗಳು :-
* ನಂಬಿಕೆ
* ಆಲೋಚನೆ
* ಮಾತು
* ನಡತೆ
* ಪ್ರಯತ್ನ
* ಧ್ಯಾನ
* ವಿಚಾರ
* ಜೀವನೋಪಾಯ
=> ಬುದ್ಧನು ಏಷ್ಯಾದ ಬೆಳಕು – ಎಡ್ಮಿನ್ ಅರ್ನಾಲ್ಡ್
-: ಬೌದ್ಧ ಧರ್ಮದ ಸಮ್ಮೇಳನಗಳು :-
ಸಮ್ಮೇಳನಗಳು ಮತ್ತು ವಿಶೇಷತೆಗಳು.
1. ಒಂದನೇ ಸಮ್ಮೇಳನ – ಸಾ.ಶ.ಪೂ 483 ರಾಜಗೃಹ , ಅಧ್ಯಕ್ಷತೆ ಮಹಾಕಶ್ಯಪ.
2. ಎರಡನೇ ಸಮ್ಮೇಳನ – ಸಾ.ಶ.ಪೂ 383 ವೈಶಾಲಿ, ಪೋಷಣೆ – ಕಾಲಾಶೋಕ, ಅಧ್ಯಕ್ಷ – ಸಭಾಕಾಮಿ.
3. ಮೂರನೇ ಸಮ್ಮೇಳನ – ಸಾ.ಶ.ಪೂ 250 ಪಾಟಲಿಪುತ್ರ, ಪೋಷಣೆ – ಅಶೋಕ, ಅಧ್ಯಕ್ಷತೆ – ಮುಗಲಿಪುತ್ರ.
4. ನಾಲ್ಕನೇ ಸಮ್ಮೇಳನ – ಸಾ.ಶ. 100 ಕುಂಡಲಿವನ( ಕಾಶ್ಮೀರ), ಪೋಷಣೆ – ಕನಿಷ್ಕ, ಅಧ್ಯಕ್ಷತೆ – ವಸುಮಿತ್ರ.
5. ಐದನೇ ಸಮ್ಮೇಳನ – ಸಾ.ಶ. 643, ಪೋಷಣೆ – ಹರ್ಷವರ್ಧನ, ಅಧ್ಯಕ್ಷತೆ – ಹ್ಯೂಯೆನ್ ತ್ಸಾಂಗ್.