ಭಾರತದ ಧಾರ್ಮಿಕ ಸುಧಾರಕರು.( TET,GPSTR,HSTR,PDO,FDA,SDA, All Competative exam notes.)

ಮತಪ್ರವರ್ತಕರು / ಸಿದ್ಧಾಂತ / ಕೃತಿಗಳು.

-: ಶಂಕರಾಚಾರ್ಯರು :-

* ಜನನ – ಕೇರಳದ ಕಾಲಡಿ.

* ತಂದೆ – ಶಿವಗುರು

* ತಾಯಿ – ಆರ್ಯಾಂಬ

* ಸಿದ್ಧಾಂತ – ಅದ್ವೈತ

* ಗುರು – ಗೋವಿಂದ ಭಗವತ್ಪಾದರ ( ಇವರ ಬಳಿ ವೇದ- ಶಾಸ್ತ್ರಗಳ ಅಧ್ಯಯನ ನಡೆಸಿದರು.)

   -: ಕೃತಿಗಳು :-

* ಶಂಕರಭಾಷ್ಯ

* ಆನಂದ ಲಹರಿ

* ಸೌಂದರ್ಯ ಲಹರಿ

* ವಿವೇಕ ಚೂಡಾಮಣಿ

* ಪ್ರಬುದ್ಧ ಸುಧಾಕರ

* ದಕ್ಷಿಣಾಮೂರ್ತಿ ಸ್ತೋತ್ರ

-: ಶಂಕರಾಚಾರ್ಯರು ಸ್ಥಾಪಿಸಿದ ಪೀಠಗಳು :-

* ಬದರಿ – ಜ್ಯೋತಿರ್ ಪೀಠ

* ದ್ವಾರಕಾ – ಕಾಳಿಕಾಪೀಠ

* ಪುರಿ – ಗೋವರ್ಧನ ಪೀಠ

* ಶೃಂಗೇರಿ – ಶಾರದಾ ಪೀಠ

* ಕಂಚಿ – ಕಾಮಕೋಟಿ ಪೀಠ

-: ಶಂಕರಾಚಾರ್ಯ ಬೋಧನೆಗಳು :-

ಆತ್ಮ ಮತ್ತು ಪರಮಾತ್ಮ ಎರಡು ಒಂದೇ, ಜೀವಾತ್ಮನಿಗೆ ಪ್ರತ್ಯೇಕ ಅಸ್ತಿತ್ವ ಇಲ್ಲ, ಸಕಲ ಜೀವರಾಶಿಗಳಲ್ಲಿ ಚೇತನ ಶ್ರೇಷ್ಠವಾದದ್ದು, ಸಮಾನತೆಯ ತತ್ವ.

* ಅತ್ಯಂತ ಜನಪ್ರಿಯ ಸ್ತೋತ್ರ – ಭಜ ಗೋವಿಂದಂ

* ಶಂಕರಾಚಾರ್ಯರು ಕಾಲ್ನಡಿಗೆಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತದಲ್ಲಿ ಸಂಚರಿಸಿ ತಮ್ಮ ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದರು.

-: ರಾಮಾನುಜಾಚಾರ್ಯರು :-

* ಜನನ – ಚೆನ್ನೈ ಸಮೀಪದ ಪೆರಂಬದೂರ್

* ತಂದೆ – ಕೇಶವ ಸೋಮಯಾಜಿ

* ತಾಯಿ – ಕಾಂತಿಮತಿ

* ಗುರುಗಳು – ಯಾದವ ಪ್ರಕಾಶ

* ಸಿದ್ದಾಂತ – ವಿಶಿಷ್ಟಾದ್ವೈತ

 

  -: ಕೃತಿಗಳು :-

* ವೇದಾಂತ ಸಂಗ್ರಹ

* ವೇದಾಂತ ಸಾರ

* ವೇದಾಂತ ದೀಪಿಕ

* ಶ್ರೀ ಭಾಷ್ಯಾ

-: ಪ್ರತಿಪಾದಿಸಿದ ಮತ :-

”   ಶ್ರೀ ವೈಷ್ಣವ ಮತ” ಆದ್ದರಿಂದ ಈ ವರ ಶಿಷ್ಯರನ್ನು ‘ ಶ್ರೀ ವೈಷ್ಣವರು ‘ ಎಂದು ಕರೆಯಲಾಯಿತು .

* ಉತ್ತರದ ಸಂತ ರಮಾನಂದರು, ರಾಯಿದಾಸ ಇವರ ರಾಮಾನುಜರ ಸಿದ್ಧಾಂತದಿಂದ ಪ್ರಭಾವಿತರಾದರು. ಇದರಿಂದಾಗಿ ಉತ್ತರ ಭಾರತದಲ್ಲಿ ಭಕ್ತಿ ಪಂಥ ಬೆಳೆಯಲು ದಾರಿಯಾಯಿತು.

* ವಿಜಯನಗರ ತುಳುವ, ಅರವಿಡು ದೊರೆಗಳು ಶ್ರೀ ವೈಷ್ಣವ ಪಂಥದ ಅನುಯಾಯಿಗಳು.

-: ದಕ್ಷಿಣ ಭಾರತದಲ್ಲಿನ ಕೆಲವು ಪ್ರಮುಖ ಶ್ರೀ ವೈಷ್ಣವ ಮಠಗಳು :-

* ಯತಿರಾಜ ಮಠ – ಮೇಲುಕೋಟೆ ಮತ್ತು ಶ್ರೀ ಪೇರಂಬದೂರು

* ಪರಕಾಲ ( ಬ್ರಹ್ಮತಂತ್ರ ಮಠ ) – ಮೈಸೂರು

* ಅಹೋಬಲ ಮಠ – ಅಹೋಬಲ ( ಗುಂಟೂರು , ಆಂಧ್ರ ಪ್ರದೇಶ)

* ಅಂಡವನ್ ಮಠ – ಶ್ರೀರಂಗಂ

* ವಾಮೈಮಲೈ ಮಠ – ಸುಚೀಂದ್ರ

-: ರಾಮಾನುಜಾಚಾರ್ಯರ ಬೋಧನೆಗಳು :-

ಆತ್ಮ ಮತ್ತು ಪರಮಾತ್ಮ ಒಂದಾಗಲು ಸಾಧ್ಯವಿಲ್ಲ, ಮುಕ್ತಿ ಸಾಧನೆಗೆ ಭಕ್ತಿ ಮಾರ್ಗ ಮುಖ್ಯ, ಆಸೆಗಳಿಂದ ದೂರವಾಗಿ ಆತ್ಮ ಪರಿಶುದ್ಧತೆಯಿಂದ ಭಗವಂತನಿಗೆ ಶರಣಾಗಬೇಕು.

-: ಮಧ್ವಾಚಾರ್ಯರು :-

* ಜನನ – ಉಡುಪಿಯ ಪಾಜಕ

* ತಂದೆ – ಮದ್ವಗೇಹ ಭಟ್ಟ

* ತಾಯಿ – ವೇದಾವತಿ

* ಗುರುಗಳು – ಅಚ್ಯುತಪ್ರೇಕ್ಷಕ

* ಸಿದ್ಧಾಂತ – ದ್ವೈತ ಸಿದ್ದಾಂತ

* ಹಡಗಿನಲ್ಲಿ ಗೋಪಿಚಂದನವೆಂಬ ಮಣ್ಣಿನ ಗುಡ್ಡೆಯಲ್ಲಿದ್ದ ಶ್ರೀ ಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು.

-: ಮಧ್ವಾಚಾರ್ಯರ ಕೃತಿಗಳು :-

* ಗೀತಾ ಭಾಷ್ಯಾ

* ಗೀತಾ  ತಾತ್ಪರ್ಯ ನಿರ್ಣಯ

* ಮಹಾಭಾರತ ತಾತ್ಪರ್ಯ ನಿರ್ಣಯ

* ಭಾಗವತ ತಾತ್ಪರ್ಯ

* ವಿಷ್ಣು ತಾತ್ಪರ್ಯ

* ಸೂತ್ರಭಾಷ್ಯ

-: ಮಧ್ವಾಚಾರ್ಯರ ಅಷ್ಟಮಠಗಳು :-

1. ಪಲಿಮಾರು

2. ಅದಮಾರು

3. ಕೃಷ್ಣಾಪುರ

4. ಪುತ್ತಿಗೆ

5. ಶಿರೂರು

6. ಸೋದೆ ಮಠ

7. ಕಾಣಿಯೂರು

8. ಪೇಜಾವರ

-: ಮಧ್ವಾಚಾರ್ಯರ ಬೋಧನೆಗಳು :-

ಜಗತ್ತು ಮಾಯೆಯಲ್ಲ, ಪರಮಾತ್ಮನಿಗೂ ಮತ್ತು ಜೀವಗಳಿಗೂ ಸ್ವಾಮಿ ಸೇವಕ ಸಂಬಂಧವಿದೆ, ವಿಷ್ಣುವನ್ನು ಭಕ್ತಿಯಿಂದ ಪೂಜಿಸುವುದರಿಂದ ಮುಕ್ತಿ ಸಾಧ್ಯ .

-: ಬಸವಣ್ಣನವರು :-

* ಜನನ – ಇಂಗಳೇಶ್ವರ  (ಬಸವನ ಬಾಗೇವಾಡಿ)

* ತಂದೆ – ಮಾದರಸ

* ತಾಯಿ – ಮಾದಲಾಂಬಿಕೆ

* ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗ ದೀಕ್ಷೆ ಪಡೆದರು.

* ಸಿದ್ದಾಂತ – ಶಕ್ತಿ ವಿಶಿಷ್ಟಾದ್ವೈತ

-: ಬಸವಣ್ಣನವರ ಕೃತಿಗಳು :-

* ವಚನ ಸಾಹಿತ್ಯ

* ವೀರಶೈವ ಮತವನ್ನು ಪ್ರಚಾರಪಡಿಸಿದರು

* ತಮ್ಮ ಕಾರ್ಯ ದಕ್ಷತೆಯಿಂದ ಕಲಚೂರಿ ಅರಸ ಬಿಜ್ಜಳನ ಬಂಡಾರದ ಅಧಿಕಾರಿಯಾಗಿದ್ದರು.

* ಸಮಾಜದ ಸ್ವಾವಲಂಬನೆಗೆ ” ಕಾಯಕ ” ತತ್ವವನ್ನು ಪ್ರತಿಪಾದಿಸಿದರು ” ಕಾಯಕವೇ ಕೈಲಾಸ ” ಎಂದು ಸಾರಿದರು.

* ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ” ಅನುಭವ ಮಂಟಪವನ್ನು” ಸ್ಥಾಪಿಸಿದರು.

-: ಬಸವೇಶ್ವರರ ಬೋಧನೆಗಳು :-

ಶಿವಶರಣರು ಜಾತಿ ಭೇದವನ್ನು ಮಾಡಬಾರದು, ಆತ್ಮ ಪರಿಶುದ್ಧತೆಗೆ ಭಕ್ತಿಯ ನಿಜವಾದ ಮಾರ್ಗ , ಕಾಯಕ ತತ್ವದ ಪ್ರತಿಪಾದನೆ, ಸಮಾಜದ ಅಂಕು ಡೊಂಕುಗಳ ವಿಡಂಬನೆ, ಮಾನವರೆಲ್ಲರೂ ಸಮಾನರು, ಹುಟ್ಟಿನಿಂದ ಯಾರೂ ಅಸ್ಪೃಶ್ಯರಲ್ಲ.

-: ಪ್ರಮುಖ ಅನುಯಾಯಿಗಳು :-

ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ದರಾಮ, ಮೋಳಿಗೆ ಮಾರಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಮಾದಾರ್ ಚೆನ್ನಯ್ಯ, ಹರಳಯ್ಯ, ಕಿನ್ನರಿಬೊಮ್ಮಯ್ಯ.

 

 

 

 

WhatsApp Group Join Now
Telegram Group Join Now