Ramnagar Teachers Recruitment 2024: ರಾಮನಗರ ಪ್ರೌಢಶಾಲೆಯಲ್ಲಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ -2024.
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.
ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ರವರಿಂದ ಅನುಮೋದಿತ, ನಿರ್ದೇಶಕರು (ಪ್ರೌಢಶಿಕ್ಷಣ] ಶಾ.ಶಿ.ಇ. ಬೆಂಗಳೂರು, ರವರ ಜ್ಞಾಪನಪತ್ರದ ಸಂಖ್ಯೆ: ಸಿ8(8)ಶಾ.ಶಿ.ಅ.ಪ.ಪ್ರ.ಅನು/ಇ-1291440/1/2023-24 ದಿನಾಂಕ: 19.08.2024ರ ಜ್ಞಾಪನ ಪತ್ರದಂತೆ, ನಮ್ಮ ಆಡಳಿತ ಮಂಡಳಿಯ ವತಿಯಿಂದ ನಡೆಯುತ್ತಿರುವ ಗ್ರಾಮಾಂತರ ವಿವಿಧೋದ್ದೇಶ ಪ್ರೌಢಶಾಲೆ, ಕನಕಪುರ ಟೌನ್, ಇಲ್ಲಿ ಖಾಲಿ ಇರುವ ಸಹ ಶಿಕ್ಷಕ ಹುದ್ದೆ ಭರ್ತಿ ಮಾಡಿಕೊಳ್ಳಲು ಪ್ರಕಟಣೆ ನೀಡಲು ಅನುಮತಿ ನೀಡಿರುತ್ತಾರೆ. ಅದರಂತೆ ಅರ್ಹ ಅಭ್ಯರ್ಥಿಗಳಿಂದ ಈ ಕೆಳಕಂಡ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ: ಇಡಿ.291.ಎಲ್.ಬಿ.ಪಿ2015 ದಿನಾಂಕ: 29.09.2016ರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು ಹಾಗೂ ಪ್ರಚಲಿತ ಸರ್ಕಾರದ ಆದೇಶಗಳನ್ವಯ ವಯೋಮಿತಿ ಇರಬೇಕು.
ಷರತ್ತುಗಳು:-
1. ಅರ್ಹ ಅಭ್ಯರ್ಥಿಗಳು ತಮ್ಮ ಹೆಸರು, ವಿದ್ಯಾರ್ಹತೆ, ವಯಸ್ಸು, ಅನುಭವ ಇತ್ಯಾದಿ ವಿವರಗಳನ್ನೊಳಗೊಂಡ ಅರ್ಜಿಯ ಜೊತೆ ಶೈಕ್ಷಣಿಕ ದಾಖಲಾತಿಗಳ ಜೆರಾಕ್ಸ್ ಪ್ರತಿಯನ್ನು, ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿ ಮುಚ್ಚಿದ ಲಕೋಟೆಯಲ್ಲಿ ಈ ಕೆಳಗಿನ ವಿಳಾಸಕ್ಕೆ ಜಾಹೀರಾತು ಪ್ರಕಟಣೆಯಾದ 21 ದಿನಗಳೊಳಗೆ ಸಲ್ಲಿಸುವುದು.
2. ಅರ್ಜಿಯ ಒಂದು ತತ್ಸಮಾನ ಪ್ರತಿಯನ್ನು, ಉಪನಿರ್ದೇಶಕರು [ಆಡಳಿತ], ಶಾಲಾ ಶಿಕ್ಷಣ ಇಲಾಖೆ, ರಾಮನಗರ ಜಿಲ್ಲೆ, ರಾಮನಗರ ಇವರಿಗೆ ಪ್ರತ್ಯೇಕವಾಗಿ ಸಲ್ಲಿಸುವುದು.
3. ಸಾಮಾನ್ಯ ಮತ್ತು ಇತರೆ ವರ್ಗದವರು ರೂ. 1000/- ಹಾಗೂ ಪ.ಜಾತಿ/ಪ.ಪಂಗಡದವರು ರೂ. 500/- ರ ಮೊಬಲಗಿನ ಬ್ಯಾಂಕ್ ಹುಂಡಿಯನ್ನು, ಕಾರ್ಯದರ್ಶಿ, ದಿ ರೂರಲ್ ಎಜುಕೇಷನ್ ಸೊಸೈಟಿ, ಕನಕಪುರ, ರವರ ಹೆಸರಿನಲ್ಲಿ ಪಡೆದು ಸಲ್ಲಿಸಬೇಕು. ಡಿಡಿ ಮೊಬಲಗಿನ ಹಣವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ.
4. ಅರ್ಜಿಗಳ ಮುಖಪುಟ ಮತ್ತು ಕವರ್ ಮೇಲ್ಬಾಗದಲ್ಲಿ ಅರ್ಜಿ ಸಲ್ಲಿಸಿದ ಹುದ್ದೆಯ ಹೆಸರು, ಮೀಸಲಾತಿಯನ್ನು ಸ್ಪಷ್ಟವಾಗಿ, ಕಡ್ಡಾಯವಾಗಿ ನಮೂದಿಸಬೇಕು. ಅಸ್ಪಷ್ಟ ಮತ್ತು ದೃಢೀಕೃತ ದಾಖಲೆಗಳಿಲ್ಲದ ಮಾಹಿತಿಗಳಿಲ್ಲದ ಅಪೂರ್ಣ ಅರ್ಜಿಗಳನ್ನು ಯಾವುದೇ ಕಾರಣ ನೀಡದೆ ತಿರಸ್ಕರಿಸಲಾಗುವುದು.
5. ನಿಗದಿತ ದಿನಾಂಕವನ್ನು ಮೀರಿ ಬರುವ ಅರ್ಜಿಗಳನ್ನು ಯಾವ ಹಿಂಬರಹ ನೀಡದೆ ತಿರಸ್ಕರಿಸಲಾಗುವುದು ಹಾಗೂ ಹಿಂದಿರುಗಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸುವ ವಿಳಾಸ:
ಕಾರ್ಯದರ್ಶಿಗಳು, ದಿ ರೂರಲ್ ಎಜುಕೇಷನ್ ಸೊಸೈಟಿ (ರಿ), ಕನಕಪುರ, ಎಂ ಜಿ ರಸ್ತೆ, ಕನಕಪುರ – 562117, ರಾಮನಗರ ಜಿಲ್ಲೆ.
ವಿಷೇಶ ಸೂಚನೆ:-
ನೇಮಕಾತಿ ಪ್ರಾಧಿಕಾರವಾದ ಆಡಳಿತ ಮಂಡಳಿಯು ಯಾವುದೇ ಹಂತದಲ್ಲಿ ಯಾವುದೇ ಕಾರಣ ನೀಡದೆ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡುವ ಅಥವಾ ರದ್ದುಗೊಳಿಸುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತದೆ ಹಾಗೂ ನೇಮಕಾತಿ ಪ್ರಾಧಿಕಾರವಾದ ಆಡಳಿತ ಮಂಡಳಿಯ ತೀರ್ಪು ಅಂತಿಮವಾಗಿರುತ್ತದೆ.