-: ಶಾತವಾಹನರು:-
* ಮೌರ್ಯರ ನಂತರ ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದವರು – ಶಾತವಾಹನರು .
* ಕರ್ನಾಟಕವನ್ನಾಳಿದ ಮೊದಲ ರಾಜಮನೆತನ – ಶಾತವಾಹನರು .
* ಶಾತವಾಹನರು ‘ಕನ್ನಡದ ಮೂಲದವರೆಂದು’ ಈ ಮನೆತನದ ರಾಜರ ಹೆಸರುಗಳು ಕನ್ನಡದಲ್ಲಿವೆ ಎಂದು ಹೇಳಲಾಗುತ್ತದೆ.( ಉದಾ: ಹಾಲ, ನಾಗನಿಕ, ಪುಲಮಾವಿ)
* ಶಾತವಾಹನರ ರಾಜಧಾನಿ – ಪೈಠಾನ್ / ಪ್ರತಿಷ್ಠಾನ
* ಶಾತವಾಹನರ ಪ್ರಸಿದ್ಧ ದೊರೆ – ಗೌತಮಿಪುತ್ರ ಶಾತಕರಣಿ
* ಇವನು ಅವನತಿಯ ಅಂಚಿನಲ್ಲಿದ್ದ ಶಾತವಾಹನರ ಮನೆತನವನ್ನು ಮತ್ತೆ ಪ್ರವರ್ಧಮಾನಕ್ಕೆ ತಂದನು.
* ಶಾತವಾಹನರ ಯಾವ ರಾಜನು ಶಕರ ನಹಪಾಣನ ನಾಣ್ಯಗಳ ಮೇಲೆತನ್ನ ಹೆಸರನ್ನು ಮರು ಮುದ್ರಿಸಿದನು?
-> ಗೌತಮಿಪುತ್ರ ಶಾತಕಣಿ೯
* ಗೌತಮಿಪುತ್ರ ಶಾತಕರ್ಣಿಯು ಶಕ, ಯವನ, ಪಹ್ಲವ ಎಂಬ ವಿದೇಶಿ ರಾಜಮನೆತನಗಳನ್ನು ಸೋಲಿಸಿದನು.
* ಗೌತಮಿಪುತ್ರ ಶಾತಕರ್ಣಿಯ ಬಿರುದು -ತ್ರೈಸಮುದ್ರ ತೋಯ ಪಿತವಾಹನರ ( ಮೂರು ಸಮುದ್ರಗಳ ನೀರು ಕುಡಿದ ಕುದುರೆಗಳನ್ನು ವಾಹನವಾಗಿ ಉಳ್ಳವನು.
* ಶಿವಮೋಗ್ಗ ಜಿಲ್ಲೆಯ ತಾಳಗುಂದದ ಪ್ರಣವೇಶ್ವರನು ಶಾತವಾಹನರಿಂದ ಪೂಜಿಸಲ್ಪಟ್ಟವನೆಂದು ಶಾಸನದಿಂದ ತಿಳಿದು ಬಂದಿದೆ.
* ಶಾತವಾಹನರ ಆಡಳಿತ ಭಾಷೆ – ಪ್ರಾಕೃತ
* ಶಾತವಾಹನರ ಶಾಸನಗಳಿರುವ ಲಿಪಿ – ಪ್ರಾಕೃತ ಭಾಷೆ ಮತ್ತು ಬ್ರಾಹ್ಮಿ ಲಿಪಿ
* ಶಾತವಾಹನರ ಹಾಲ ಬರೆದ ಕೃತಿ – ಗಾಥಾ ಸಪ್ತಸತಿ – ಪ್ರಾಕೃತ ಭಾಷೆ
* ಗುಣಾಡ್ಯ – ವಡ್ಡಕಥಾ
* ಸರ್ವ ವರ್ಮ – ಕಾತಂತ್ರ ವ್ಯಾಕರಣ
* ಶಾತವಾಹನರು ನಿರ್ಮಿಸಿರುವ ದೊಡ್ಡ ಚೈತ್ಯ ವಿರುವುದು ಎಲ್ಲಿ?
-> ಕಾರ್ಲೆ
* ಶಾತವಾನರ ಪ್ರಮುಖ ನಿಗಮಗಳು – ಪೈಠಾಣ,ಕಾರ್ಲೆ,ಕನೇಹರಿ, ಜುನ್ನಾರ, ನಾಸಿಕ
* ಆಂಧ್ರದ ಧನ್ಯ ಕಟಕ ( ಧರಣಿಕೋಟೆ)
* ಉತ್ತರ ಕನ್ನಡ ಜಿಲ್ಲೆಯ -ವೈ ಜಯಂತಿ
* ಶಾತವಾನರ ಕಾಲದ ಶ್ರೇಣಿಗಳೆಂದರೆ – ಸಂಘಗಳು
* ಶಾತವಾನರ ಕಾಲದ ಧಾನ್ಯ ವ್ಯಾಪಾರಿಗಳ ಸಂಘವನ್ನು ಏನೆಂದು ಕರೆಯುತ್ತಿದ್ದರು?
-> ಧಾನಿಕ ಶ್ರೇಣಿ
* ಶಾತವಾನರ ಕಾಲದಲ್ಲಿ ಶ್ರೇಣಿಗೆ ಒಬ್ಬ ಹಿರಿಯನಿದ್ದು ಅವನನ್ನು ಏನೆಂದು ಕರೆಯುತ್ತಿದ್ದೆ?
-> ಶ್ರೇಷ್ಠ / ಸೆಟ್ಟಿ
-: ಕದಂಬರು :-
* ಕರ್ನಾಟಕವನ್ನಾಳಿದ ಮೊಟ್ಟ ಮೊದಲ ಕನ್ನಡ ಮನೆತನ – ಕದಂಬರು
* ಅಚ್ಚ ಕನ್ನಡದ ಮೊಟ್ಟ ಮೊದಲ ದೊರೆ – ಮಯೂರವರ್ಮ
* ಕದಂಬರ ರಾಜಧಾನಿ – ಬನವಾಸಿ
* ಕದಂಬರ ಲಾಂಛನ – ಸಿಂಹ
* ಚಿತ್ರದುರ್ಗ ಸಮೀಪದ ಚಂದ್ರವಳ್ಳಿಯ ಕೆರೆಯನ್ನು ದುರಸ್ತಿ ಮಾಡಿದವರು – ಮಯೂರವರ್ಮ
* ಕದಂಬರ ಯಾವ ಅರಸನು ಉತ್ತರ ಭಾರತದ ಪ್ರಸಿದ್ಧ ಗುಪ್ತ ಮನೆತನದ ಜೊತೆಗೆ ವಿವಾಹ ಸಂಬಂಧವನ್ನು ಹೊಂದಿದ್ದನು?
-> ಕಾಕುಸ್ಥವಮ೯ನು
* ಕದಂಬರು ಶೈವರಾಗಿದ್ದು ತಾಳಗುಂದದ ಪುಣವೇಶ್ವರ ಹಾಗೂ ಬನವಾಸಿಯ ಮಧುಕೇಶ್ವರನನ್ನು ಪೂಜಿಸುತ್ತಿದ್ದರು.
* ತಾಳಗುಂದದ ಪ್ರಣವೇಶ್ವರ ಲಿಂಗವು ಕರ್ನಾಟಕದ ಪ್ರಾಚೀನ ಲಿಂಗಲಾಗಿದೆ.
-: ಗಂಗರು :- ( 600 ವರ್ಷ ಆಳ್ವಿಕೆ)
* ಕದಂಬರು ವಾಯುವ್ಯ ಕರ್ನಾಟಕದಲ್ಲಿ ಆಳುತ್ತಿರುವಾಗ ದಕ್ಷಿಣ ಕರ್ನಾಟದಲ್ಲಿ ಏಳಿಗೆಗೆ ಬಂದವರು. – ಗಂಗರು
* ಗಂಗರು ಕರ್ನಾಟಕದಲ್ಲಿ ದೀರ್ಘಕಾಲ ಆಳಿದ ರಾಜಮನೆತನವಾಗಿದೆ -600 ವರ್ಷಗಳ ಕಾಲ ಆಳ್ವಿಕೆ
* ಗಂಗರ ರಾಜಧಾನಿ – ಕುವಲಾಲ ( ಕೋಲಾರ) , ತಲಕಾಡು (ತಲವನಪುರ)
* ಗಂಗರ ಪ್ರಸಿದ್ಧ ದೊರೆ – ದುರ್ವಿನಿತ
* ದುರ್ವಿನಿತನ ತಾಯಿಯು ಜೇಷ್ಠಾದೇವಿಯು ಯಾವ ಮನೆತನಕ್ಕೆ ಸೇರಿದವಳು?
-> ಪುನ್ನಾಟ ರಾಜಮನೆತನ ( ಈ ಮನೆತನದಲ್ಲಿ ಗಂಡು ಸಂತಾನವಿಲ್ಲದ ಕಾರಣ ಪುನ್ನಾಟ ರಾಜ್ಯಕ್ಕೂ ದುರ್ವಿನಿತನೆ ವಾರಸುದಾರನಾದನು. ನೆರೆಯ ಶತ್ರುಗಳನ್ನು ಹಲವು ಯುದ್ಧಗಳಲ್ಲಿ ಮಣಿಸಿ ಗಂಗ ರಾಜ್ಯವನ್ನು ವಿಸ್ತರಿಸಿದನು. ನೀರಾವರಿಗಾಗಿ ಸಾಗರದಂತಹ ಅನೇಕ ಕೆರೆಗಳನ್ನು ಕಟ್ಟಿಸಿದನು.)
* ಭಾರತಿಯ ಕೃತಿ – ಕಿರಾತರ್ಜುನಿಯ
* ಗಂಗರ ಯಾವ ಅರಸನು ಸಂಸ್ಕೃತ ಕವಿ ಭಾರವಿಯ ಕಿರಾತರ್ಜುನಿಯ ಕೃತಿಯ 15 ನೇ ಸರ್ಗಕ್ಕೆ ಭಾಷ್ಯೆ ( ವಿಮರ್ಶೆ) ಬರೆದನು?
-> ದುರ್ವಿನಿತ
* ಗುಣಾಡ್ಯನ ವಡ್ಡಕಥಾವನ್ನು ದುರ್ವಿನಿತ ಸಾಂಸ್ಕೃತಕ್ಕೆ ಭಾಷಾಂತರಿಸಿದನು.
* ಕನ್ನಡದ ಪ್ರಮುಖ ಗದ್ಯ ಬರಹಗಾರರಲ್ಲಿ ದುರ್ವಿನಿತನು ಒಬ್ಬನೆಂದು ಯಾರು ಹೇಳಿದ್ದಾರೆ?
-> ಕವಿರಾಜ ಮಾರ್ಗದಲ್ಲಿ ಶ್ರೀವಿಜಯನು ಹೇಳುತ್ತಾನೆ
* ಕನ್ನಡದ ಮೊಟ್ಟ ಮೊದಲ ಉಪಲಬ್ದ ಗ್ರಂಥ – ಕವಿರಾಜಮಾರ್ಗ
* ದುರ್ವಿನಿತನ ನಂತರ ಬಂದ ಶ್ರೀ ಪುರುಷ,ರಾಚಮಲ್ಲ ಮುಂತಾದವರು ಸಹ ಪ್ರಮುಖರು.
* ಶ್ರೀ ಪುರುಷ ಕೂಡ ದುರ್ವಿನಿತನಂತೆ ಅನೇಕ ಕೆರೆಗಳನ್ನು ನಿರ್ಮಾಣ ಮಾಡಿಸಿದನು.
* ಶ್ರೀ ಪುರುಷನು ನಿರ್ಮಿಸಿದ ಪ್ರಸಿದ್ಧ ಕೆರೆ – ಕುಣಿಗಲ್ ದೊಡ್ಡ ಕೆರೆ
* ಶ್ರೀ ಪುರುಷನ ನಂತರ ಬಂದವನು ರಾಚಮಲ್ಲ, ರಾಚಮಲ್ಲನ ಪ್ರಧಾನಮಂತ್ರಿಯಾಗಿ ಚಾವುಂಡರಾಯನು ವಿಶ್ವ ಪ್ರಸಿದ್ಧ ಗೊಮ್ಮಟೇಶ್ವರ ಮೂರ್ತಿಯನ್ನು ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಿರ್ಮಾಣ ಮಾಡಿಸಿದನು.
* ಗಂಗರ ರಾಜ್ಯದಲ್ಲಿದ್ದ ಪಂಥಗಳು -ಬೌದ್ಧ, ಕಾಳ ಮುಖ, ಲೋಕಾಯುತ
* ಗಂಗರು ಜೈನ ಮತ್ತು ವೈದಿಕ ಧರ್ಮಗಳ ಎರಡಕ್ಕೂ ಪ್ರೋತ್ಸಾಹ ನೀಡಿದರು ಕೆಲವು ಅರಸರು ವೈಷ್ಣವ ಮತವನ್ನು ಅವಲಂಬಿಸಿದರು.
*ದುರ್ವಿನಿತನು ಕನ್ನಡ ಮತ್ತು ಸಂಸ್ಕೃತದ ಪ್ರಸಿದ್ಧ ವಿದ್ವಾಂಸನಾಗಿದ್ದನು.
* ಶ್ರೀ ಪುರುಷ ಬರೆದ ಕೃತಿ – ಗಜ ಶಾಸ್ತ್ರ.
* ಗಂಗರ ಪ್ರಧಾನಿಯಾಗಿದ್ದ ಚಾವುಂಡರಾಯನು ರಚಿಸಿದ ಕೃತಿ -ಚಾವುಂಡರಾಯ ಪುರಾಣ
* ಗಂಗರ ಪ್ರಮುಖ ವಾಸ್ತುಶಿಲ್ಪಗಳು
-> ಮಣ್ಣೆಯ ಕಪಿಲೇಶ್ವರ
-> ತಲಕಾಡಿನ ಪಾತಾಳೇಶ್ವರ
-> ಕೋಲಾರದ ಕೋಲಾರಮ್ಮನ ಗುಡಿ
-> ಶ್ರವಣಬೆಳಗೊಳದ ಜೈನ ಬಸದಿಗಳು
-> ಕಂಬದಳ್ಳಿಯ ಪಂಚಕೂಟ ಬಸದಿ
* ಶ್ರವಣಬೆಳಗೊಳದಲ್ಲಿರುವ 58 ಅಡಿ ಎತ್ತರದ ಏಕಶಿಲಾ ಗೊಮ್ಮಟೇಶ್ವರ ಮೂರ್ತಿ
* ಕಾಳ ಮುಖ :- ಇದೊಂದು ಉಗ್ರ ಶೈವ ಪಂಥ ಈ ಪಂಥದವರು ಮುಖಕ್ಕೆ ಕಪ್ಪು ಮಸಿ ಬಳಿದು ಕೊಳ್ಳುತ್ತಿದ್ದರು ಆದ್ದರಿಂದ ಈ ಹೆಸರು ಬಂದಿದೆ.
* ಲೋಕಾಯುತ :- ಇವರನ್ನು ಚಾರ್ವಾಕರು ಎಂದು ಕರೆಯಲಾಗುತ್ತದೆ ಭೌತವಾದಿಗಳಾದ ಈ ಪಂಥವಾದವರು ವಾಸ್ತವಿಕ ಬದುಕಿನ ಬಗೆಗೆ ನಂಬಿಕೆ ಉಳ್ಳವರಾಗಿದ್ದರು.
-: ಬಾದಾಮಿ ಚಾಲುಕ್ಯರು :-
* ಬಾದಾಮಿ ಚಾಲುಕ್ಯರ ಸ್ಥಾಪಕ -ಜಯಸಿಂಹ
* ಬಾದಾಮಿ ಚಾಲುಕ್ಯರ ರಾಜ ಲಾಂಛನ – ವರಾಹ
* ಬಾದಾಮಿ ಚಾಲುಕ್ಯರ ಪ್ರಸಿದ್ಧ ದೊರೆ – ಇಮ್ಮಡಿ ಪುಲಕೇಶಿ
* ಪುಲಕೇಶಿ ತನ್ನ ಚಿಕ್ಕಪ್ಪನಾದ ಮಂಗಳೇಶನ ವಿರುದ್ಧ ಯುದ್ಧ ಮಾಡುವ ಮೂಲಕ ರಾಜ್ಯ ಕಸಿದುಕೊಂಡನು.
* ಇಮ್ಮಡಿ ಪುಲಕೇಶಿಯು ಪರ್ಶಿಯಾ ದೇಶದ ಯಾವ ರಾಜನ ಆಸ್ಥಾನಕ್ಕೆ ನಿಯೋಗ ಒಂದನ್ನು ಕಳುಹಿಸಿದನು?
-> ಪಶಿ೯ಯಾ ರಾಜ ಖುಸ್ರು
* ಪರ್ಶಿಯಾದ ರಾಜ ಖುಸ್ರು ತನ್ನ ರಾಯಭಾರಿಯನ್ನು ಪುಲಕೇಶಿ ಆಸ್ಥಾನಕ್ಕೆ ಕಳುಹಿಸಿದನು.
* ಯಾವ ಚಿತ್ರವನ್ನು ಪುಲಕೇಶಿಯು ಪರ್ಶಿಯಾದ ರಾಜ ಖುಸ್ರು ಕಳುಹಿಸಿದ ರಾಯಭಾರಿಯನ್ನು ಸ್ವಾಗತಿಸುತ್ತಿರುವ ಚಿತ್ರವು – ಅಜಂತಾದ ಒಂದನೇ ಗುಹೆಯಲ್ಲಿರುವ ಅರುಣ ಚಿತ್ರ
* ಐಹೊಳೆಯ ಲಾಡ್ ಖಾನ್ ದೇವಾಲಯ,ದುರ್ಗಾ/ಸೂರ್ಯ ದೇವಾಲಯ,ಮೇಗುತಿಗುಡಿ, ಹುಚ್ಚಮಲ್ಲಿ ಗುಡಿ
* ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು – ‘ಐಹೊಳೆ’
* ಬಾದಾಮಿಯ ಗುಹಾಲಯದಲ್ಲಿರುವ ನಟರಾಜ ಮತ್ತು ವಿಷ್ಣುವಿನ ಉಬ್ಬು ಶಿಲ್ಪಗಳು ಅದ್ಭುತವಾಗಿವೆ.
* ಐಹೊಳೆಯ ದೇವಾಲಯಗಳಲ್ಲಿ ಲಾಡ ಖಾನ್ ದೇವಾಲಯವು ಅತ್ಯಂತ ಹಳೆಯ ದೇವಾಲಯವಾಗಿದೆ ಇದೊಂದು ಶಿವನ ದೇವಾಲಯ ಕೆಲವು ವರ್ಷಗಳ ಹಿಂದೆ ಲಾಡ್ ಖಾನ್ ಎಂಬ ಸಂತನು ಇಲ್ಲಿ ನೆಲೆಸಿದ್ದರಿಂದ ಈ ಹೆಸರು ಬಂದಿದೆ.
* ಐಹೊಳೆಯಲ್ಲಿರುವ ಸೂರ್ಯ ದೇವಾಲಯವನ್ನು ‘ ದುರ್ಗ ದೇವಾಲಯ’ ಎಂದು ಕರೆಯುವರು.
* ಈ ದೇವಾಲಯವು ಕೋಟೆ ಆವಣದಲ್ಲಿ ಇರುವುದರಿಂದ ಇದನ್ನು ದುರ್ಗ ದೇವಾಲಯ ಎಂದು ಕರೆಯುತ್ತಾರೆ ಕೋಟೆಯನ್ನು ದುರ್ಗಾ ಎಂದು ಕರೆಯುವುದುಂಟು.
* ಪಟ್ಟದಕಲ್ಲಿನ ದೇವಾಲಯಗಳಲ್ಲಿ ವಿರೂಪಾಕ್ಷ ದೇವಾಲಯವು ಸುಂದರವಾದ ಮತ್ತು ದೊಡ್ಡ ದೇವಾಲಯವಾಗಿದೆ.
* ಪಟ್ಟದಕಲ್ಲಿನ ಚಾಲುಕ್ಯ ದೊರೆಗಳ ಪಟ್ಟಾಭಿಷೇಕ ನೆರವೇರಿತ್ತಿತ್ತು ಎಂದು ಹೇಳಲಾಗುತ್ತದೆ.
-: ಪಲ್ಲವರು :-
* ಪಲ್ಲವರ ರಾಜವಂಶವು ದಕ್ಷಿಣ ಭಾರತದ ಒಂದು ಪ್ರಸಿದ್ಧ ರಾಜವಂಶ.
* ಪಲ್ಲವರ ರಾಜಧಾನಿ – ತಮಿಳುನಾಡಿನ ಕಂಚಿ
* 300 ವರ್ಷಗಳ ಕಾಲ ಆಳಿದರು ಪ್ರಸಿದ್ಧ ಅರಸ – ನರಸಿಂಹವರ್ಮ
* ನರಸಿಂಹವರ್ಮನ ಬಿರುದು – ಮಹಾಮಲ್ಲ(ನರಸಿಂಹವರ್ಮನು ಚಾಲುಕ್ಯ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಇಮ್ಮಡಿ ಪುಲಕೇಶಿಯನ್ನು ಸೋಲಿಸಿ ಬಾದಾಮಿಯನ್ನು ಗೆದ್ದುಕೊಂಡನು. ಈ ವಿಜಯದ ಸಂಕೇತವಾಗಿ ನರಸಿಂಹವರ್ಮ ಪಡೆದ ಬಿರುದು – ” ವಾತಾಪಿಕೊಂಡ”)
* ನರಸಿಂಹವರ್ಮನು ಮಾಮಲ್ಲಾಪುರ (ಈಗಿನ ಮಹಾಬಲಿಪುರ) ರೇವುಪಟ್ಟಣವನ್ನು ಸುಂದರ ನಗರವನ್ನಾಗಿ ಅಭಿವೃದ್ಧಿಪಡಿಸಿದನು.
* ಪಲ್ಲವರ ಯಾವ ಅರಸನ ಕಾಲದಲ್ಲಿ ಏಳು ಕಲ್ಲಿನ ರಥಗಳಿದ್ದವು – ನರಸಿಂಹವರ್ಮ (ಜಗತ್ಪ್ರಸಿದ್ಧವಾದ ಈ ರಥಗಳನ್ನು ಒಂದೊಂದೇ ಕಲ್ಲಿನಲ್ಲಿ ಕೆತ್ತಲಾಗಿದೆ.)
* ಗಂಗಾವರಣ ಎಂಬ ಉಬ್ಬು ಶಿಲ್ಪ ಇರುವುದು ಎಲ್ಲಿ ?
-> ಮಹಾಬಲಿಪುರ ( ಈ ಕೆತ್ತನೆಯಲ್ಲಿ ಭಗೀರಥನ ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ತರಲು ಪ್ರಯತ್ನಿಸುವ ಚಿತ್ರಣವಿದೆ ಇದೊಂದು ಪ್ರಸಿದ್ಧ ಹುಬ್ಬು ಶಿಲ್ಪವಾಗಿದೆ.)
* ಪಲ್ಲವರ ಮಹಾಬಲಿಪುರದ ಸಮುದ್ರ ತೀರದಲ್ಲಿ ನಿರ್ಮಿಸಲಾದ ಶಿವಾ ದೇವಾಲಯವಿದೆ.
* ಕಂಚಿಯ ಕೈಲಾಸನಾಥ ಮತ್ತು ವೈಕುಂಠ (ಎರಡನೇ ನಂದಿವರ್ಮನ) ಪೆರುಮಾಳ್ ದೇವಾಲಯಗಳಿವೆ. – ನಿರ್ಮಾತೃ -ಎರಡನೇ ನರಸಿಂಹವರ್ಮ
* ಪಲ್ಲವರ ಪ್ರಸಿದ್ಧ ದೊರೆ – ನರಸಿಂಹವರ್ಮ ಬಿರುದು – ಮಹಾಮಲ್ಲ,ವಾತಾಪಿಕೊಂಡ.
* ವಿಶ್ವ ಪರಂಪರೆಯ ತಾಣ:- ಜಗತ್ತಿನ ಕೆಲವು ಅಪೂರ್ವ,ಅಮೂಲ್ಯ ತಾಣಗಳು ವಿಶ್ವ ಪರಂಪರೆಗೆ ಸೇರಿದ್ದು ಎಂಬುದಾಗಿ ವಿಶ್ವಸಂಸ್ಥೆ ಘೋಷಣೆ ಮಾಡಿದೆ. ಇವುಗಳಿಗೆ ವಿಶೇಷ ಸಂರಕ್ಷಣೆ ನೀಡಲಾಗುತ್ತದೆ. ಕರ್ನಾಟಕದಲ್ಲಿ ಹಂಪಿ ಮತ್ತು ಪಟ್ಟದಕಲ್ಲು ಈ ಪಟ್ಟಿಗೆ ಸೇರಿವೆ.