ನಮ್ಮರಾಜ್ಯ – ಕರ್ನಾಟಕ -ಪ್ರಾಕೃತಿ ವಿಭಾಗಗಳು (All Competative exam notes)

 -: ಕರ್ನಾಟಕದ ಹೆಸರಿನ ಹಿನ್ನೆಲೆ :-

* ಇದನ್ನು ಕರುನಾಡು ( ಕರ್ +ನಾಡು) ಅಂದರೆ ಕಪ್ಪುಮಣ್ಣಿನ ನಾಡು ಎಂದು ಕರೆಯುತ್ತಿದ್ದರು.

* ತಮಿಳಿನ ” ಶಿಲಪ್ಪಾದಿಕಾರಂ” ಎಂಬ ಪ್ರಾಚೀನ ಕೃತಿಯಲ್ಲಿ ‘ಕರುನಾಟ್’ ಎಂಬ ಶಬ್ದದಿಂದ ಕರ್ನಾಟಕ ಎಂದು ಕರೆದಿರುವುದು ತಿಳಿದುಬರುತ್ತದೆ.

* ಕರುನಾಟ್ ಎಂದರೆ ಎತ್ತರದಲ್ಲಿರುವ ನಾಡು ಎಂದರ್ಥ. ಇದು ಹಿಂದೆ ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ಹಬ್ಬಿತ್ತೆ೦ದು, ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನ ಗ್ರಂಥ ‘ಕವಿರಾಜಮಾರ್ಗ’ ದಲ್ಲಿ ಉಲ್ಲೇಖಿಸಲಾಗಿದೆ.

* ಮೈಸೂರು ಅರಸರ ಒಡೆತನದಲ್ಲಿದ್ದ ದಕ್ಷಿಣದ 09 ಜಿಲ್ಲೆಗಳನ್ನೊಳಗೊಂಡು 1953 ರಲ್ಲಿ “ಮೈಸೂರು ರಾಜ್ಯ” ವು ಉದಯವಾಯಿತು.

* ನವಂಬರ್ 1 1956 ರಂದು”ವಿಶಾಲ ಮೈಸೂರು ರಾಜ್ಯ” ಅಸ್ತಿತ್ವಕ್ಕೆ ಬಂತು. ಇದರ ನೆನಪಿಗಾಗಿ ನವೆಂಬರ್ ಒಂದನ್ನು ಪ್ರತಿ ವರ್ಷವೂ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ.

* 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.

    -: ಭೌಗೋಳಿಕ ಸ್ಥಾನ :-

* ಕರ್ನಾಟಕ ಗೋಡಂಬಿ ಆಕಾರ ಹೊಂದಿದೆ.

* ಉತ್ತರದ ತುದಿ- ಬೀದರ್ ಜಿಲ್ಲೆಯ ಔರಾದ್

* ಪೂರ್ವತುದಿ – ಕೋಲಾರ ಜಿಲ್ಲೆಯ ಮುಳುಬಾಗಿಲು

* ಪಶ್ಚಿಮ ತುದಿ – ಉತ್ತರ ಕನ್ನಡ ಜಿಲ್ಲೆಯ ಕಾರವಾರ

* ದಕ್ಷಿಣತುದಿ – ಚಾಮರಾಜನಗರ ಜಿಲ್ಲೆಯ ಮಾಯಾರ್ ನದಿ.

* ಕರ್ನಾಟಕ ಭಾರತದ ದಕ್ಷಿಣ ಭಾಗದಲ್ಲಿದ್ದು,ಪರ್ಯಾಯ ದ್ವೀಪದ ಪಶ್ಚಿಮ ಮಧ್ಯ ಭಾಗದಲ್ಲಿದೆ.

* ಇದು 11° -31’ಮತ್ತು 18°-45′ ಉತ್ತರ ಅಕ್ಷಾಂಶಗಳು ಹಾಗೂ 74°-12′ ಮತ್ತು 78°-40′ ಪೂರ್ವ ರೇಖಾಂಶಗಳ ಮಧ್ಯ ವಿಸ್ತರಿಸಿದೆ.

* ಕರ್ನಾಟಕ ರಾಜ್ಯ 19.1791.ಚದರ ಕಿಲೋಮೀಟರು ವಿಸ್ತಾರವಾಗಿದ್ದು, ವಿಸ್ತೀರ್ಣದಲ್ಲಿ 8ನೇ ದೊಡ್ಡ ರಾಜ್ಯವಾಗಿದೆ.

* 2011ರ ಜನಗಣತಿಯ ಪ್ರಕಾರ 6.11.30.704 ಜನಸಂಖ್ಯೆಯನ್ನು ಹೊಂದಿದೆ.ಜನಸಂಖ್ಯೆಯಲ್ಲಿ 9ನೇ ಸ್ಥಾನವನ್ನು ಹೊಂದಿದೆ.

* ಭಾರತದ ಭೌಗೋಳಿಕ ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ ಶೇಕಡ 5.83.

* 31 ಜಿಲ್ಲೆಗಳು,227 ತಾಲೂಕುಗಳು,745 ಹೋಬಳಿಗಳು,343ಪಟ್ಟಣ ಮತ್ತು ನಗರಗಳು,29483 ಹಳ್ಳಿಗಳನ್ನು ಹೊಂದಿದೆ.

* ವಿಸ್ತೀರ್ಣದಲ್ಲಿ ಬೆಳಗಾವಿ ಜಿಲ್ಲೆ ದೊಡ್ಡದಿದೆ (13415 ಚದರ ಕಿ.ಮೀ) ಹಾಗೂ ಬೆಂಗಳೂರು ನಗರ ಚಿಕ್ಕ ಜಿಲ್ಲೆಯಾಗಿದೆ (2196ಚದರ ಕಿಲೋ ಮೀಟರ್).

* ಬೆಂಗಳೂರು – ಕರ್ನಾಟಕದ ರಾಜಧಾನಿ

* ಕರ್ನಾಟಕದಲ್ಲಿ ನಾಲ್ಕು ಕಂದಾಯ ವಿಭಾಗಗಳಿವೆ.

-> ಬೆಂಗಳೂರು ವಿಭಾಗ

-> ಮೈಸೂರು ವಿಭಾಗ

-> ಬೆಳಗಾವಿ ವಿಭಾಗ

-> ಕಲ್ಬುರ್ಗಿ ವಿಭಾಗ

  -: ಕರ್ನಾಟಕದ ಪ್ರಾಕೃತಿಕ ವಿಭಾಗಗಳು :-

* ಕರ್ನಾಟಕ ರಾಜ್ಯವು ಭಾರತದ ಪರ್ಯಾಯ ದ್ವೀಪದ ಭಾಗವಾಗಿದೆ.

* ಸಮುದ್ರಮಟ್ಟಕ್ಕೆ 450-900 ಮೀಟರ್ ಎತ್ತರದಲ್ಲಿದೆ ಕೆಲವು ಭಾಗಗಳಲ್ಲಿ 1800 ಮೀಟರ್ ಗಳಿಗಿಂತ ಹೆಚ್ಚು ಎತ್ತರವಿದೆ.

* ಕರ್ನಾಟಕವನ್ನು ಮೂರು ಪ್ರಮುಖ ಪ್ರಾಕೃತಿಕ ವಿಭಾಗಗಳಾಗಿ ವಿಂಗಡಿಸಲಾಗಿದೆ.

1) ಕರಾವಳಿ

2) ಮಲೆನಾಡು

3) ಬಯಲು ಸೀಮೆ

1) ಕರಾವಳಿ/ಕೆನರಾ/ ಕರ್ನಾಟಕ ಕರಾವಳಿ:-

* ಪ್ರಾಕೃತಿಕ ವಿಭಾಗವು ಅರಬ್ಬಿ ಸಮುದ್ರ ಮತ್ತು ಮಲೆನಾಡುಗಳ ಮಧ್ಯೆ ವಿಸ್ತರಿಸಿದೆ.

* ಇದು ದಕ್ಷಿಣದಲ್ಲಿ ಮಂಗಳೂರಿನಿಂದ ಉತ್ತರದಲ್ಲಿ ಕಾರವಾರದ ವರೆಗೂ 320 ಕಿಲೋಮೀಟರ್ ಉದ್ದವಾಗಿದ್ದು 12 – 64 ಕಿಲೋಮೀಟರ್ ಅಗಲವಾಗಿದೆ.

* ಸಮುದ್ರಮಟ್ಟದಿಂದ 200 ಮೀಟರ್ ಎತ್ತರವಿದೆ.

* ನವಮಂಗಳೂರು ಬಂದರು “ಕರ್ನಾಟಕದ ಹೆಬ್ಬಾಗಿಲು”/ ಕರ್ನಾಟಕದ ಅತಿ ದೊಡ್ಡ ಬಂದರಾಗಿದೆ.

* ಭಟ್ಕಳ,ಮಲ್ಪೆ, ಕಾರವಾರ್,ಕುಮುಟಾ, ಬೇಲಿಕೆರೆ, ಮತ್ತು ಹೊನ್ನಾವರ ಇವು ಮೀನುಗಾರಿಕಾ ಬಂದರುಗಳು.

* ಮಂಗಳೂರು ಸಮೀಪದ ಸೋಮೇಶ್ವರ,ಉಳ್ಳಾಲ, ಪಣಂಬೂರು,ಉಡುಪಿಯ ಸಮೀಪ, ಮಲ್ಪೆ, ಕಾರವಾರ,ಹೊನ್ನಾವರ ಸಮೀಪದ ಮುರುಡೇಶ್ವರ,ಮರುವಂತೆ ಮತ್ತೆ ಗೋಕರ್ಣ ಸಮೀಪದ ” ಓಂ” ಬೀಚ್ ಪ್ರಮುಖವಾಗಿವೆ.

* ಮಲ್ಪೆ ಸಮೀಪದಲ್ಲಿರುವ ” ಸೇಂಟ್ ಮೇರಿಸ್ ದ್ವೀಪ” / ” ಕೋಕೋನಟ್ ದ್ವೀಪ” ಇದನ್ನು ಸ್ಥಳೀಯವಾಗಿ ತೋನ್ಸೆ ಪಾಲ್ ದೀಪ ಎನ್ನುವರು,ಕಾರವಾರದ ಸಮೀಪದ- ಅಂಜದ್ವೀಪ ,ದೇವಗಡ, ಕಾಂಜಿಗುಡ್ಡ ಪ್ರಮುಖವಾದ ದ್ವೀಪಗಳಾಗಿವೆ.

* ಕರಾವಳಿ ಜನರ ಮುಖ್ಯ ಉದ್ಯೋಗ – ಮೀನುಗಾರಿಕೆ

* ಮುರುಡೇಶ್ವರ ಸಮೀಪದ ” ಪಿಜಿನ್ ಐಲ್ಯಾಂಡ್”( ನೇತ್ರಾಣಿ ದೀಪ) ಪ್ರಮುಖವಾಗಿದೆ.ಇಲ್ಲಿ ಪಾರಿವಾಳಗಳು ಅಧಿಕವಾಗಿರುವುದರಿಂದ ” ಪಿಜನ್ ಐಲ್ಯಾಂಡ್” ಎನ್ನುವರು.

* ದಕ್ಷಿಣ ಕನ್ನಡ,ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು ಕರಾವಳಿಯ ಜಿಲ್ಲೆಗಳಾಗಿವೆ.

 2) ಮಲೆನಾಡು :-

* ನಮ್ಮ ರಾಜ್ಯದ ಪಶ್ಚಿಮ ಘಟ್ಟಗಳ ಭಾಗವನ್ನು ” ಮಲೆನಾಡು” ಎನ್ನುವರು.

* ಇದನ್ನು ” ಸಹ್ಯಾದ್ರಿ ಬೆಟ್ಟಗಳು” ಎಂದು ಕರೆಯುವರು.

* ಇದರ ಉದ್ದ 650 ಕಿಲೋಮಿಟರ್,ಅಗಲ 50-76 ಕಿಲೋಮೀಟರ್.

* ಸಮುದ್ರ ಮಟ್ಟದಿಂದ ಬೀಸುವ ಮಳೆಯ ಮಾರುತಗಳನ್ನು ತಡೆದು 200 ಸೆಂಟಿಮೀಟರ್ ಗಿಂತ ಹೆಚ್ಚು ಮಳೆ ಪಡೆಯುತ್ತವೆ.

* ಇಲ್ಲಿನ ಎತ್ತರದ ಪರ್ವತ ಶಿಖರಗಳು – ಮುಳ್ಳಯ್ಯನಗಿರಿ,ಕುದುರೆಮುಖ, ಕಲ್ಹತ್ತಗಿರಿ,ರುದ್ರಗಿರಿ, ದೇವಿರಮ್ಮನ ಬೆಟ್ಟ(ಚಿಕ್ಕಮಂಗಳೂರು ಜಿಲ್ಲೆ) ಇದಲ್ಲದೆ ಬಲ್ಲಾಳ ರಾಯಣ್ಣದುರ್ಗ, ಮೆರ್ತಿಗುಡ್ಡ,ಪುಷ್ಪಗಿರಿ, ಕೊಡಚಾದ್ರಿ, ಇವು ಪಶ್ಚಿಮ ಘಟ್ಟದ ಉನ್ನತ ಶಿಖರಗಳಾಗಿವೆ.

* ಮುಳ್ಳಯ್ಯನಗಿರಿ – 1913 ಮೀಟರ್ ಇದ್ದು ರಾಜ್ಯದಲ್ಲೇ ಅತಿ ಎತ್ತರವಾಗಿದೆ.

  -: ಪ್ರಮುಖ ಘಾಟ್/ಘಟ್ಟ ಮಾರ್ಗಗಳು :-

1) ಚಾರ್ಮುಡಿ ಘಾಟ್ – ಮಂಗಳೂರು-> ಚಿಕ್ಕಮಂಗಳೂರು

2) ಶಿರಾಡಿ ಘಾಟ್ – ಹಾಸನ -> ಸಕಲೇಶಪುರ -> ಮಂಗಳೂರು

3) ಆಗುಂಬೆ ಘಾಟ್ – ಶಿವಮೊಗ್ಗ -> ಉಡುಪಿ

4) ಹುಲಿಕಲ್ ಘಾಟ್ – ಶಿವಮೊಗ್ಗ -> ಕುಂದಾಪುರ

* ಮಲೆನಾಡು ಅಧಿಕ ಮಳೆ ಪಡೆಯುವುದರಿಂದ ನಿತ್ಯ ಹರಿದ್ವರ್ಣ ಕಾಡುಗಳು ಕಂಡುಬರುತ್ತವೆ.

* ಇದು ಕರ್ನಾಟಕದ ಹಲವು ನದಿಗಳ ಉಗಮ ಸ್ಥಾನವಾಗಿದೆ ಇವುಗಳು ಅನೇಕ ಜಲಪಾತಗಳನ್ನು ನಿರ್ಮಿಸಿವೆ.

* ಭಾರತದಲ್ಲಿ ಎತ್ತರವಾದ ” ಜೋಗ್ ಫಾಲ್ಸ್” ಶರಾವತಿ ನದಿಗೆ ನಿರ್ಮಿತವಾಗಿದೆ.

* ಪ್ರಮುಖ ಜಲಪಾತಗಳು – > ಉಂಚಳ್ಳಿ,ಮಾಗೋಡು, ಅಬ್ಬಿ,ಶಿವನಸಮುದ್ರ ಜಲಪಾತಗಳು.

* ಅಧಿಕ ಕಾಫಿ ಬೆಳೆಯುವದರಿಂದ ಚಿಕ್ಕಮಂಗಳೂರನ್ನು ” ಕಾಫಿ ನಾಡು” ಎನ್ನುವರು.

* ಕೊಡಗನ್ನು ” ಕರ್ನಾಟಕದ ಕಾಶ್ಮೀರ” ಎನ್ನುವರು.

* ಕೊಡಗು ಕಿತ್ತಳೆ ಹಣ್ಣನ್ನು ಹೆಚ್ಚಾಗಿ ಬೆಳೆಯುವುದರಿಂದ ” ಕಿತ್ತಳೆ ನಾಡು” ಎಂದು ಕರೆಯುವರು.

* ಮಲೆನಾಡನ್ನು ” ಜೀವ ವೈವಿಧ್ಯತ ವಲಯ” ಎಂದು ಗುರುತಿಸಿದೆ.

* ಹಾಸನ,ಕೊಡಗು,, ಶಿವಮೊಗ್ಗ ಚಿಕ್ಕಮಂಗಳೂರು ಪ್ರಮುಖವಾದ ಮಲೆನಾಡು ಜಿಲ್ಲೆಗಳಾಗಿವೆ.

 3) ಬಯಲುಸೀಮೆ :-

* ಮಲೆನಾಡಿನ ಪೂರ್ವ ದಿಕ್ಕಿನಲ್ಲಿ ವಿಶಾಲ ಮೈದಾನವಿದ್ದು,ಸರಾಸರಿ 450-760 ಮೀಟರ್ ಎತ್ತರದಲ್ಲಿದೆ.

* ಇದು ಕೃಷ್ಣ,ಕಾವೇರಿ, ತುಂಗಭದ್ರಾ ಜಲಾಶಯ ಪ್ರದೇಶಗಳನ್ನು ಹೊಂದಿದೆ.

* ಇದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

1) ಉತ್ತರ ಬಯಲು ಸೀಮೆ

2) ದಕ್ಷಿಣ ಬಯಲು ಸೀಮೆ

1) ಉತ್ತರ ಬಯಲು ಸೀಮೆ:-

* ಇದು ಕಪ್ಪು ಮನೆನಿಂದ ಕೂಡಿದ್ದು,ಸಮುದ್ರ ಮಠದಿಂದ ಸರಾಸರಿ 356-610 ಮೀಟರ್ ಎತ್ತರವಾಗಿದೆ.

* ಪ್ರಮುಖ ಗುಡ್ಡಗಳು –  ನರಗುಂದ ಗುಡ್ಡ,ಪರಸಗಡ ಗುಡ್ಡ, ಇಳಕಲ್ ಗುಡ್ಡ.

* ಸೌವದತ್ತಿ ಹಾಗೂ ಬಾದಾಮಿಯ ಪೂರ್ವದಲ್ಲಿ ಸುಣ್ಣದ ಕಲ್ಲಿನ ಕೆಲವು ಭಾಗಗಳು ಸ್ತರಂಭದಿಂದ ಕೂಡಿದೆ.

* ಪ್ರಮುಖ ಜಲಪಾತಗಳು – ಘಟಪ್ರಭಾ ನದಿಗೆ ಇರುವ ಗೋಕಾಕ್ ಜಲಪಾತ(62 ಮೀಟರ್),ಛಾಯಾ ಭಗವತಿ ಜಲಪಾತ, ಸೊಗಲ ಜಲಪಾತ.

* ಬೇಸಿಗೆಯಲ್ಲಿ ಅಧಿಕ ಬಿಸಿಲು ಇರುವುದರಿಂದ ” ಬಿಸಿಲು ನಾಡು” ಎನ್ನುವರು.

* ಜಿಲ್ಲೆಗಳು – ಬೀದರ್, ವಿಜಯಪುರ, ಕಲ್ಬುರ್ಗಿ, ಯಾದಗಿರಿ, ಗದಗ್, ಕೊಪ್ಪಳ, ರಾಯಚೂರು, ಹಾವೇರಿ,, ಬಳ್ಳಾರಿ,, ಬಾಗಲಕೋಟೆ.

 2) ದಕ್ಷಿಣ ಬಯಲುಸೀಮೆ :-

* ತುಂಗಭದ್ರ ನದಿ ಪಾತ್ರದಿಂದ ದಕ್ಷಿಣದ ಚಾಮರಾಜನಗರ ಜಿಲ್ಲೆಯವರೆಗೂ ಹಬ್ಬಿದೆ.

* ಕೆಂಪು ಮಣ್ಣಿನಿಂದ ಕೂಡಿದ ಪ್ರಸ್ಥಭೂಮಿಯಾಗಿದೆ.

* ಈ ಪ್ರದೇಶ 900-975 ಮೀಟರ್ ಎತ್ತರ ಉಳ್ಳದ್ದಾಗಿದೆ.

* ಪ್ರಮುಖ ಬೆಟ್ಟಗಳು – ಚಿತ್ರದುರ್ಗ ಬೆಟ್ಟಗಳು,ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾರಾಯಣದುರ್ಗ, ಸಾವನದುರ್ಗ, ಶಿವಗಂಗೆ, ತುಮಕೂರಿನ ಮಧುಗಿರಿ ಬೆಟ್ಟ( ಇದು ಏಷ್ಯಾ ಖಂಡದಲ್ಲಿ ಅತಿ ದೊಡ್ಡ ಏಕಶಿಲಾ ಬೆಟ್ಟ).

* ನಂದಿ ಬೆಟ್ಟ,ಚಾಮುಂಡಿ ಬೆಟ್ಟ, ಚನ್ನಕೇಶವ ಬೆಟ್ಟ, ಕವಿಲೇ ದುರ್ಗ ಮುಂತಾದವು.

* ಪಾಲಾರ್,ಪೆನ್ನಾರ್ ಇಲ್ಲಿ ಹರಿಯುವ ಪ್ರಮುಖ ನದಿಗಳು.

   ಸಮಾಜಶಾಸ್ತ್ರ

-: ಕುಟುಂಬ :-

ಕುಟುಂಬವು ಭಾರತದ ಪ್ರಾಚೀನ ಪಾರಂಪರಿಕ ವ್ಯವಸ್ಥೆಯಾಗಿದ್ದು ತಂದೆ- ತಾಯಿ, ಮಕ್ಕಳು, ಮೊಮ್ಮಕ್ಕಳು ನಡುವೆ ಉಂಟಾಗುವ ಸಂಬಂಧಗಳ ವ್ಯವಸ್ಥೆಯನ್ನು ಕುಟುಂಬ ಎನ್ನುವರು.

* ಕುಟುಂಬ ಮತ್ತು ಪೀಳಿಗೆಗಳು /ತಲೆಮಾರುಗಳು:- ಹಿರಿಯ ಪೋಷಕರು ಒಂದನೇ ತಲೆಮಾರಿಗೆ ಸೇರಿಸಲ್ಪಟ್ಟಿದ್ದರೆ ಪೋಷಕರು ಎರಡನೇ ತಲೆಮಾರಿಗೆ ಸೇರಿರುತ್ತಾರೆ ಮಕ್ಕಳು ಮೂರನೇ ತಲೆಮಾರಿಗೆ ಸೇರಿರುತ್ತಾರೆ.

   -: ಕುಟುಂಬದ ಪ್ರಕಾರಗಳು :-

1) ಪಿತೃ ಪ್ರಧಾನ ಕುಟುಂಬ

2) ಮಾತೃ ಪ್ರಧಾನ ಕುಟುಂಬ

3) ಆಧುನಿಕ ಕೇಂದ್ರ ಕುಟುಂಬ.

* ಅವಿಭಕ್ತ ಕುಟುಂಬ:- ಅವಿಭಕ್ತ ಕುಟುಂಬದಲ್ಲಿ ಪತಿ,ಪತ್ನಿ ಅವರ ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳು ಹೀಗೆ ಎರಡಕ್ಕಿಂತ ಹೆಚ್ಚು ತಲೆಮಾರಿನ ಜನರಿರುತ್ತಾರೆ,. ಸಾಮಾನ್ಯವಾಗಿ ಒಂದೇ ಮನೆಯಲ್ಲಿ ವಾಸಿಸುವ ನಿರ್ದಿಷ್ಟ ರಕ್ತ ಸಂಬಂಧಗಳಿಂದ ಪರಸ್ಪರ ಸಂಬಂಧಗಳಾಗಿರುವ ಜನರ ಗುಂಪು.

WhatsApp Group Join Now
Telegram Group Join Now

Leave a Comment