ಕರ್ನಾಟಕದ ಭೂ ಸಂಪತ್ತು (All Competative exam notes)

-: ವಿವಿಧ ಭೂ-ಬಳಕೆಯ ಶೇಖಡಾ ಪ್ರಮಾಣ :-

* 58.1% -> ಸಾಗುವಳಿ ಭೂಮಿ

* 9.5% -> ಅರಣ್ಯ ಪ್ರದೇಶ

* 7.2% -> ಸಾಗುವಳಿಗೆ ಲಭ್ಯವಿಲ್ಲದ ಭೂಮಿ

* 10.2 % -> ಸಾಗುವಳಿ ಮಾಡದ ಇತರ ಭೂಮಿ

* 14.5% -> ಬೀಳು ಭೂಮಿ

ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಉತ್ತಮ ಸ್ಥಾನದಲ್ಲಿದ್ದು,ಒಟ್ಟು 19.05 ಲಕ್ಷ ಹೆಕ್ಟರ್ ಭೌಗೋಳಿಕ ಪ್ರದೇಶವನ್ನು ಹೊಂದಿದೆ.

-: ಕರ್ನಾಟಕ ಭೂ ಬಳಕೆಯ ಮಾದರಿಗಳು :-

1) ನಿವ್ವಳ ಸಾಗುವಳಿ ಭೂಮಿ (58.1%):-

* ಕಲ್ಬುರ್ಗಿ ಜಿಲ್ಲೆಯು ಕರ್ನಾಟಕದಲ್ಲಿಯೇ ಅತೀ ಹೆಚ್ಚು ಸಾಗುವಳಿ ಭೂಮಿಯನ್ನು ಹೊಂದಿದೆ. ನಂತರದ ಸ್ಥಾನದಲ್ಲಿ.ಬೆಳಗಾವಿ, ವಿಜಯಪುರ, ತುಮಕೂರು, ರಾಯಚೂರು, ಬಾಗಲಕೋಟೆ

* ತೀವ್ರ ನಗರಿಕರಣದಿಂದ ಬೆಂಗಳೂರು ಜಿಲ್ಲೆ ಕನಿಷ್ಠ ಸಾಗುವಳಿ ಭೂಮಿಯನ್ನು ಹೊಂದಿದೆ.

2) ಅರಣ್ಯ ಪ್ರದೇಶ(14.5%):-

* ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿದ ಜಿಲ್ಲೆ ಉತ್ತರ ಕನ್ನಡ ನಂತರದಲ್ಲಿ ಶಿವಮೊಗ್ಗ,ಚಾಮರಾಜನಗರ, ಚಿಕ್ಕಮಂಗಳೂರು, ಕೊಡಗು, ಬೆಳಗಾವಿ ಮುಂತಾದವು.

*ವಿಜಯಪುರ ಜಿಲ್ಲೆಯು ಅತಿ ಕನಿಷ್ಠ ಅರಣ್ಯ ಪ್ರದೇಶವನ್ನು ಹೊಂದಿದೆ ನಂತರದಲ್ಲಿ ಕೊಪ್ಪಳ ಮತ್ತು ರಾಯಚೂರು.

3) ಸಾಗುವಳಿ ಲಭ್ಯವಿಲ್ಲದ ಭೂಮಿ (10.2%):-

* ಈ ಭೂಮಿಯು ರೈಲು ಮಾರ್ಗ,ರಸ್ತೆ ಮಾರ್ಗ, ವಸತಿ, ಕೈಗಾರಿಕೆ ಮುಂತಾದವುಗಳಿಗೆ ಬಳಕೆಯಾಗಿರುತ್ತದೆ.

* ಇಂತಹ ಭೂಮಿ ಬೆಂಗಳೂರು ನಗರದಲ್ಲಿ ಜಾಸ್ತಿ ಇದೆ.

* ಬೀದರ್ ಜಿಲ್ಲೆಯಲ್ಲಿ ಅತಿ ಕಡಿಮೆ ಇದೆ.

4) ಸಾಗುವಳಿ ಮಾಡದ ಇತರೆ ಭೂಮಿ (7.2%):-

* ಇದರಲ್ಲಿ ಕಾಯಂ ಗೋಮಾಳ ವೃಕ್ಷ ಮತ್ತು ತೋಪುಗಳು ಸೇರುತ್ತವೆ.

* ಇಂತಹ ಭೂಮಿ ಗದಗ,ಬಾಗಲಕೋಟೆ, ಧಾರವಾಡಗಳಲ್ಲಿ ಕಡಿಮೆ ಇದೆ.

5) ಬೀಳು ಭೂಮಿ(9.5%):-

* 2/3 ವರ್ಷಗಳಿಗಿಂತ ಹೆಚ್ಚು ಅವಧಿಯವರೆಗೆ ನಿರಂತರವಾಗಿ ಸಾಗುವಳಿಯಾಗದ ಭೂಮಿ.

* ಕಲ್ಬುರ್ಗಿ ಜಿಲ್ಲೆ ಅಧಿಕ ಬೀಳು ಭೂಮಿಯನ್ನು ಹೊಂದಿದೆ.

      -: ವ್ಯವಸಾಯ :-

ಭೂಮಿಯನ್ನು ಉಳಿಮೆ ಮಾಡಿ ಬೆಳೆಯುವುದನ್ನು ವ್ಯವಸಾಯ ಎಂದು ಕರೆಯುವರು, ಕರ್ನಾಟಕದ ಶೇಕಡಾ 61.4% ಭಾಗದಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವುದರಿಂದ ಅವರು ವ್ಯವಸಾಯವನ್ನೇ ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿದ್ದಾರೆ ವ್ಯವಸಾಯವು ನಮ್ಮ ರಾಜ್ಯದ ಆದಾಯದ ಮೂಲವಾಗಿದ್ದು, ಆರ್ಥಿಕತೆಯ ಬೆನ್ನೆಲುಬು ಆಗಿದೆ.ಆರ್ಥಿಕ ಅಭಿವೃದ್ಧಿಯು ವ್ಯವಸಾಯವನ್ನು ಆಧರಿಸಿದೆ.

   -: ವ್ಯವಸಾಯದ ವಿಧಗಳು :-

1) ನೀರಾವರಿ ಬೇಸಾಯ

2) ಒಣ /ಶುಷ್ಕ ಬೇಸಾಯ

3) ನೆಡು ತೋಟದ ಬೇಸಾಯ

4) ವಾಣಿಜ್ಯ ಬೇಸಾಯ

5) ಜೀವನಾಧಾರ ಬೇಸಾಯ

6) ಮಿಶ್ರ ಬೇಸಾಯ

-: ಕರ್ನಾಟಕದ ಪ್ರಮುಖ ಬೆಳೆಗಳು :-

1) ಭತ್ತ :-

* ಇದು ಕರ್ನಾಟಕದ ಅತ್ಯಂತ ಪ್ರಮುಖ ಬೆಳೆಯಾಗಿದೆ ಒಟ್ಟು ಸಾಗುವಳಿ ಪ್ರದೇಶದಲ್ಲಿ ಶೇಕಡ 28.2% ಭಾಗದಲ್ಲಿ ಬೆಳೆಯಲಾಗುತ್ತದೆ.

* ಭತ್ತವು ಹುಲ್ಲಿನ ವರ್ಗದ ಸಸ್ಯ ಇದರ ವೈಜ್ಞಾನಿಕ ಹೆಸರು ಒರೈಸಾ ಸಟೈವಾ

* ಇದೊಂದು ಉಷ್ಣವಲಯದ ಬೆಳೆಯಾಗಿದೆ ಇದಕ್ಕೆ ಸಮತಟ್ಟಾದ ನೆಲ ಜೇಡಿಮಿಶ್ರಿತ ಮಣ್ಣು ಹಾಗೂ ಮೆಕ್ಕಲು ಮಣ್ಣು ಈ ಬೆಳೆಗೆ ಸೂಕ್ತವಾಗಿದೆ.

* ಸುಮಾರು ಶೇಕಡ 70% ಬೆಳೆಯನ್ನು ಜೂನ್ ನಿಂದ ಆಗಸ್ಟ್ ನಲ್ಲಿ ನಾಟಿ ಮಾಡಿ ನಾಟಿ ಮಾಡಿ ನವಂಬರ್ ಮತ್ತು ಡಿಸೆಂಬರ್ ನಲ್ಲಿ ಕಟಾವು ಮಾಡಲಾಗುವುದು ಇದನ್ನು “ಹೈನು ಬೆಳೆ” ಎನ್ನುವರು.

* ಬೇಸಿಗೆಯಲ್ಲಿ ನೀರು ಸೌಲಭ್ಯವಿರುವವರು ಭತ್ತ ಬೆಳೆಯುತ್ತಾರೆ.( ಫೆಬ್ರವರಿ ಯಿಂದ ಜೂನ್) ಇದನ್ನು” ಕಾರು ಬೆಳೆ” ಎನ್ನುವರು.

* ರಾಯಚೂರು ಜಿಲ್ಲೆಯು ಭತ್ತದ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ನಂತರದಲ್ಲಿ ದಾವಣಗೆರೆ ಮೈಸೂರು ಶಿವಮೊಗ್ಗ.

* ಕೃಷ್ಣ,ಕಾವೇರಿ, ತುಂಗಭದ್ರಾ ನದಿ ಕಣಿವೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ.

2) ಜೋಳ :-

* ಒಟ್ಟು ಸಾಗುವಳಿ ಶೇಕಡ 26% ರಷ್ಟು ಜೋಳದ ಬೆಳೆಗೆ ಭೂಮಿ ಬಳಕೆಯಾಗುತ್ತದೆ.

* ಭತ್ತದ ನಂತರ ಜೋಳ ಕರ್ನಾಟಕದ ಎರಡನೇ ಪ್ರಮುಖ ಬೆಳೆಯಾಗಿದೆ.

* ಕರ್ನಾಟಕ ಜೋಳದ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ ಮೊದಲನೇ ಸ್ಥಾನದಲ್ಲಿ ಮಹಾರಾಷ್ಟ್ರ.

* ಇದಕ್ಕೆ ಸೂಕ್ತ ಮಣ್ಣು ಕಪ್ಪು ಮಣ್ಣು,ಕೆಂಪು ಮಣ್ಣು ಮತ್ತು ಮೆಕ್ಕಲು ಮಿಶ್ರಿತ ಮಣ್ಣು.

* ವಿಜಯಪುರ ಜಿಲ್ಲೆ ಕರ್ನಾಟಕದಲ್ಲಿ ಜೋಳ ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿದೆ.

* ಉತ್ತರ ಕರ್ನಾಟಕದಲ್ಲಿ ಜೋಳ ಬೆಳೆಯುತ್ತಾರೆ.

3) ರಾಗಿ :-

* ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಆಹಾರ ಧಾನ್ಯವಾಗಿದೆ.

* ಇದು ಕೆಂಪು ಮತ್ತು ಮೆಕ್ಕಲು ಮಿಶ್ರಿತ ಮಣ್ಣಿನಲ್ಲಿ ಬೆಳೆಯುತ್ತಾರೆ.

* ರಾಗಿ ಉತ್ಪಾದನೆಯಲ್ಲಿ,ಭಾರತದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ.

* ಒಟ್ಟು ಸಾಗುವಳಿಯ ಭೂಮಿಯಲ್ಲಿ ಶೇಕಡಾ 14% ಭಾಗದಲ್ಲಿ ಬೆಳೆಯಲಾಗುತ್ತಿದೆ.

* ಮೈಸೂರು ಪ್ರಾಂತ್ಯದ ಸಾಂಪ್ರದಾಯಿಕ ಬೆಳೆ.ದಕ್ಷಿಣ ಕರ್ನಾಟಕದಲ್ಲಿ ರಾಗಿಯೆ ಪ್ರಧಾನ .

* ಕರ್ನಾಟಕದಲ್ಲಿ ತುಮಕೂರು ಅತಿ ಹೆಚ್ಚಾಗಿ ರಾಗಿ ಬೆಳೆಯುವ ಜಿಲ್ಲೆ ನಂತರದಲ್ಲಿ ರಾಮನಗರ.

     -: ವಾಣಿಜ್ಯ ಬೆಳೆಗಳು:-

1) ಕಬ್ಬು :-

* ಇದು ಕರ್ನಾಟಕದ ಪ್ರಮುಖ ವಾಣಿಜ್ಯ ಹಾಗೂ ಕೈಗಾರಿಕಾ ಬೆಳೆಯಾಗಿದೆ.

* ಕರ್ನಾಟಕ ಕಬ್ಬು ಉತ್ಪಾದನೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

* ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ ಬೆಳಗಾವಿ ಎರಡನೇ ಸ್ಥಾನ ಬಾಗಲಕೋಟೆ.

* ಸ್ವಾತಂತ್ರ್ಯ ಪೂರ್ವದಿಂದಲೂ ಕಬ್ಬು ಬೆಳೆಯಲ್ಲಿ ಮಂಡ್ಯ ಜಿಲ್ಲೆಯ ಹೆಸರುವಾಸಿಯಾಗಿದೆ.

* ಇದು ಹುಲ್ಲು ಜಾತಿಗೆ ಸೇರಿದ ಸಸ್ಯ ಅಧಿಕ ಉಷ್ಣಾಂಶ ಮತ್ತು ಮಳೆಯಾಗುವ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.

2) ಹತ್ತಿ :-

* ನಾರಿನ ಬೆಳೆಯಾಗಿದ್ದು,ಹತ್ತಿ ಬಟ್ಟೆ ಕೈಗಾರಿಕೆಯ ಪ್ರಮುಖ ಕಚ್ಚಾ ವಸ್ತು.

* ಉಷ್ಣ ಮತ್ತು ಉಪ ಉಷ್ಣವಲಯದ ವಾಣಿಜ್ಯ ಬೆಳೆ.

* ಕಪ್ಪು ಮಣ್ಣು ಹತ್ತಿ ಬೆಳೆಗೆ ಸೂಕ್ತವಾಗಿದೆ.

* ಹಾವೇರಿ ಅತಿ ಉತ್ಪಾದನೆಯಲ್ಲಿ ಕರ್ನಾಟಕದಲ್ಲಿ ಮೊದಲನೆ ಸ್ಥಾನದಲ್ಲಿದೆ ಎರಡನೇ ಸ್ಥಾನದಲ್ಲಿ ಧಾರವಾಡ.

* ಹತ್ತಿಯನ್ನು ಆಗಸ್ಟ್ ಇಂದ ಸೆಪ್ಟೆಂಬರ್ ತಿಂಗಳಲ್ಲಿ ಬಿತ್ತನೆ ಮಾಡಲಾಗುತ್ತದೆ.

3) ತಂಬಾಕು :-

* ಇದು ನಿಕೋಷಿಯಾನ ವರ್ಗಕ್ಕೆ ಸೇರಿದ ಸಸ್ಯವಾಗಿದೆ ಇದರಲ್ಲಿ ” ನಿಕೋಟಿನ್” ಎಂಬ ಮಾದಕ ವಸ್ತುವಾಗಿದೆ.

* ಪೋರ್ಚುಗೀಸರು 17ನೇ ಶತಮಾನದಲ್ಲಿ ತಂಬಾಕನ್ನು ಭಾರತಕ್ಕೆ ಪರಿಚಯಿಸಿದರು.

* ” ವರ್ಜೀನಿಯಾ” ತಂಬಾಕು ಉತ್ತಮ ದರ್ಜೆಯದ್ದಾಗಿದ್ದು,ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಬೇಡಿಕೆ ಗಳಿಸಿದೆ.

* ಇದನ್ನು ಉತ್ಪಾದಿಸುವ ಸ್ಥಾನಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ.

* ಮೈಸೂರು ಜಿಲ್ಲೆ ತಂಬಾಕು ಉತ್ಪಾದನೆಯಲ್ಲಿ ಒಂದನೇ ಸ್ಥಾನದಲ್ಲಿದೆ.

* ಬೆಳಗಾವಿ ಜಿಲ್ಲೆಯ ” ನಿಪ್ಪಾಣಿ ” ಯು ದೇಶದಲ್ಲಿ ಬೀಡಿ ತಯಾರಿಕಾ ತಂಬಾಕು ಮಾರುಕಟ್ಟೆಗೆ ಅತ್ಯಂತ ಪ್ರಸಿದ್ಧವಾಗಿದೆ.

4) ಕಾಫಿ :-

* ಕಾಫಿಯು ಕರ್ನಾಟಕದ ಪ್ರಸಿದ್ಧ ನೆಡು ತೋಟದ ಹಾಗೂ ಪಾನೀಯ ಬೆಳೆ.

* ಕರ್ನಾಟಕ ಭಾರತದಲ್ಲಿ ಕಾಫಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.

* ಕ್ರಿಸ್ತಶಕ 10670ರ ಸುಮಾರಿಗೆ ಬಾಬಾಬುಡನ್ ಎಂಬ ಮುಸ್ಲಿಂ ಸಂತನು ಚಿಕ್ಕಮಂಗಳೂರಿನ ಬೆಟ್ಟಗಳ ಸಾಲಿನಲ್ಲಿ ಕಾಪಿ ಸಸಿಗಳನ್ನು ಬೆಳೆಸಿದನು. ಆ ಬೆಟ್ಟಗಳನ್ನು ಬಾಬಾಬುಡನ್ ಗಿರಿ ( ಇನಾಮ್ ದತ್ತಾತ್ರೇಯ ಪೀಠ) ಎನ್ನುವರು ಆದರೆ ಕ್ರಮಬದ್ಧವಾಗಿ ಪ್ರಾರಂಭವಾದದ್ದು 1826ರಲ್ಲಿ.

* ಕರ್ನಾಟಕವು ‘ ಅರೇಬಿಕಾ’ ಮತ್ತು ‘ ರೊಬೊಸ್ಟಾ’ ಎಂಬ ಎರಡು ಪ್ರಭೇದದ ಕಾಫಿ ಉತ್ಪಾದಿಸುತ್ತದೆ ಇದರಲ್ಲಿ ಅರೇಬಿಕಾ ಶ್ರೇಷ್ಠ ದರ್ಜೆಯದ್ದಾಗಿದೆ.

* ಈ ಬೆಳೆಗೆ ಜೇಡಿ ಮಿಶ್ರಿತ ಮಣ್ಣು ಸೂಕ್ತವಾಗಿದ್ದು ಕಾಫಿ ಗಿಡಕ್ಕೆ ಸೂರ್ಯನ ನೇರ ಕಿರಣಗಳು ಬೀಳದಂತೆ ಮರಗಳನ್ನು ಬೆಳೆಸಬೇಕು.

* ದೇಶದ ಕಾಫಿ ಉತ್ಪಾದನೆಯಲ್ಲಿ ಶೇಕಡ 70ರಷ್ಟು ಕರ್ನಾಟಕವೇ ಉತ್ಪಾದಿಸುತ್ತದೆ.

* ಕೊಡಗು ಜಿಲ್ಲೆ ಕರ್ನಾಟಕದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ಜಿಲ್ಲೆ ಎರಡನೇ ಸ್ಥಾನದಲ್ಲಿ ಚಿಕ್ಕಮಂಗಳೂರು ಮೂರನೇ ಸ್ಥಾನದಲ್ಲಿ ಹಾಸನ.

* ಕರ್ನಾಟಕವನ್ನು ” ಕಾಫಿ ನಾಡು ” ಎಂದು ಕರೆಯುತ್ತಾರೆ.

 

 

   -: ಅರ್ಥಶಾಸ್ತ್ರ :-

    -: ಆರ್ಥಿಕ ರಚನೆ :-

1) ಸ್ಥಿರಾತ್ಮಕ ಅರ್ಥಶಾಸ್ತ್ರ :-

ಸ್ಥಿರಾತ್ಮಕ ( Statics) ಎಂಬ ಪದವು ಗ್ರೀಕ್ ನ ಸ್ಟಾಟಿಕ ( Statike) ಎಂಬ ಪದದಿಂದ ಬಂದಿದೆ ಇದರರ್ಥ ” ಸ್ಥಿರವಾಗಿ ನಿಲ್ಲು ” ಅರ್ಥಶಾಸ್ತ್ರದಲ್ಲಿ ಇದು ಯಾವುದೇ ಬದಲಾವಣೆಗಳಿಲ್ಲದ ಸನ್ನಿವೇಶವನ್ನು ಸೂಚಿಸುತ್ತದೆ.

2) ಚಲನಾತ್ಮಕ ಅರ್ಥಶಾಸ್ತ್ರ

ಈ ಚಲನಾತ್ಮಕ ಎಂಬ ಪದವು ಗ್ರೀಕಿನ  “Dynamikos ” ಎಂಬ ಪದದಿಂದ ಬಂದಿದೆ ಇದರರ್ಥ ಶಕ್ತಿಶಾಲಿಯಾದ ಬದಲಾವಣೆ ಇಲ್ಲದೆ ನಿರಂತರ ಬದಲಾವಣೆಯನ್ನು ಸೂಚಿಸುತ್ತದೆ.

WhatsApp Group Join Now
Telegram Group Join Now

2 thoughts on “ಕರ್ನಾಟಕದ ಭೂ ಸಂಪತ್ತು (All Competative exam notes)”

Leave a Comment