* ಭಾರತದಲ್ಲಿ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ.
* ಕರ್ನಾಟಕದಲ್ಲಿ 75% ಕಬ್ಬಿಣದ ಅದಿರಿನ ಗಣಿಗಳಿವೆ.
* ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬಿಣದ ನಿಕ್ಷೇಪ ಹೊಂದಿರುವ ಜಿಲ್ಲೆ – ಬಳ್ಳಾರಿ 2 ನೇ ಜಿಲ್ಲೆ – ಚಿಕ್ಕಮಂಗಳೂರು.
* ಕುದುರೆಮುಖ ರಾಷ್ಟ್ರೀಯ ಉದ್ಯಾನವನ – ಚಿಕ್ಕಮಗಳೂರು
* ರಾಜ್ಯದಲ್ಲಿ ಉತ್ಪಾದನೆಯಾಗುವ ಕಬ್ಬಿಣದ ಅದಿರನ್ನು ಭದ್ರಾವತಿ ಮತ್ತು ಬಳ್ಳಾರಿ ಸಮೀಪದ ಜಿಂದಾಲ್ ವಿಜಯನಗರ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಿಗೆ ಉಪಯೋಗಿಸಿ ಉಳಿದ ಭಾಗವನ್ನು ರಫ್ತು ಮಾಡಲಾಗುತ್ತದೆ.
-: ಮ್ಯಾಂಗನೀಸ್ :-
* ಮ್ಯಾಂಗನೀಸ್ ಅದಿರು ಮುಖ್ಯವಾಗಿ ಪದರುಶಿಲೆ ಮತ್ತು ರೂಪಾಂತರ ಶಿಲೆಗಳಲ್ಲಿ ಆಕ್ಸೈಡ್ ರೂಪದಲ್ಲಿ ದೊರೆಯುತ್ತದೆ.
* ಇದನ್ನು ” ಬಹು ಉಪಯೋಗಿ ಖನಿಜ ” ಎನ್ನುವರು.
* ದೇಶದ ಒಟ್ಟು ನಿಕ್ಷೇಪದಲ್ಲಿ 27% ಭಾಗ ಹೊಂದಿದೆ.
* ಮ್ಯಾಂಗನೀಸ್ ಉತ್ಪಾದನೆಯಲ್ಲಿ ಓಡಿಶಾದ ನಂತರ ಕರ್ನಾಟಕವು 2 ನೇ ಸ್ಥಾನದಲ್ಲಿದೆ.
* ರಾಜ್ಯದಲ್ಲಿ 90% ಮ್ಯಾಂಗನೀಸ್ ನ್ನು ” ಸಂಡೂರು ”ನಲ್ಲಿ ಉತ್ಪಾದಿಸಲಾಗುತ್ತದೆ.
-: ಮ್ಯಾಂಗನೀಸ್ ನ ಪ್ರಮುಖ ನಿಕ್ಷೇಪಗಳು :-
* ಶಿವಮೊಗ್ಗ – ಶಂಕರಗುಡ್ಡ, ಹೊಸಳ್ಳಿ, ಕುಂಸಿ
* ಚಿತ್ರದುರ್ಗ – ಸಾದರಹಳ್ಳಿ
* ತುಮಕೂರು – ಚಿಕ್ಕನಾಯಕನಹಳ್ಳಿ
* ಉತ್ತರ ಕನ್ನಡ – ಶಿರಸಿ,ಸೂಪ,ಲೊಂಡ, ಉಸ್ಕಾಂಡ
* ಧಾರವಾಡ
* ವಿಜಯಪುರ
* ಚಿಕ್ಕಮಗಳೂರು
-: ಬಾಕ್ಸೈಟ್ :-
* ಈ ಅದಿರನ್ನು ಅಲುಮಿನಿಯಂ ಲೋಹವನ್ನು ಉತ್ಪಾದಿಸಲು ಅಧಿಕವಾಗಿ ಬಳಸುತ್ತಾರೆ.
* ನಿಕ್ಷೇಪಗಳು :- ಬೆಳಗಾವಿ,ಚಿಕ್ಕಮಂಗಳೂರು, ದಕ್ಷಿಣ ಕನ್ನಡ, ಉಡುಪಿ.
* ಬೆಳಗಾವಿಯೂ ಬಾಕ್ಸೈಟ್ ಉತ್ಪಾದಿಸುವ ಜಿಲ್ಲೆಯಾಗಿದೆ.
* ಬೆಳಗಾವಿ ಮತ್ತು ಖಾನಾಪುರದಲ್ಲಿ ಉತ್ಪಾದಿಸುವ ಅದಿರನ್ನು ಬೆಳಗಾವಿಯ ಅಲುಮಿನಿಯಂ ಕಂಪನಿಯ ಕೈಗಾರಿಕೆಯಲ್ಲಿ ಬಳಸಲಾಗುತ್ತದೆ.
-: ಚಿನ್ನ :-
* ಅಪರೂಪದ,ಹೊಳೆಯುವ, ಹೆಚ್ಚು ಬೆಲೆ ಬಾಳುವ ಲೋಹ.
* ಭಾರತದಲ್ಲಿ ಅತಿ ಹೆಚ್ಚು ಚಿನ್ನ ಉತ್ಪಾದಿಸುವ ರಾಜ್ಯ – ಕರ್ನಾಟಕ
* 1880 ರಲ್ಲಿ ” ಜಾನ್ ಟೇಲರ್ ” ಎಂಬುವವನು ಕೋಲಾರದಲ್ಲಿ ಚಿನ್ನದ ಗಣಿಗಾರಿಕೆ ಪ್ರಾರಂಭಿಸಿದನು.
* 1885 ರಲ್ಲಿ ಕೆಜಿಎಫ್ ಅಸ್ತಿತ್ವಕ್ಕೆ ಬರಲು ಕಾರಣವಾಯಿತು.
* ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ನಾಲ್ಕು ಪ್ರಮುಖ ಗಣಿಗಳಿವೆ.
1) ನಂದಿದುರ್ಗ
2) ಮೈಸೂರು ಗಣಿ
3) ಉರಿಗಾಂ
4) ಚಾಂಪಿಯನ್ ರೀಪ್
* ದೇಶದ ಅತ್ಯಂತ ಆಳದ ಗಣಿ – ಚಾಂಪಿಯನ್ ರಿಪ್(3217 KM ) ಇದು ಸ್ಥಗಿತಗೊಂಡಿದೆ.
* ಪ್ರಸ್ತುತ ಭಾರತದ ಅತಿ ದೊಡ್ಡ ಚಿನ್ನದ ಗಣಿ – ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ.
* ತುಮಕೂರು ಜಿಲ್ಲೆಯ,ಬೆಳ್ಳಾರ, ಸಿರಾ ಸಮೀಪವಿರುವ ಅಜ್ಜನಹಳ್ಳಿ ಯಲ್ಲಿ ಚಿನ್ನದ ಅದಿರು ಉತ್ಪಾದಿಸಲಾಗುತ್ತದೆ.
* ಗದಗ ಜಿಲ್ಲೆಯ ಮುಳಗುಂದ,ಕಪ್ಪದಗುಡ್ಡ, ಹಾಸನ ಜಿಲ್ಲೆಯ ಕೆಂಪಿನ ಕೋಟೆ ಮುಂತಾದ ಕಡೆ ಚಿನ್ನದ ನಿಕ್ಷೇಪಗಳಿವೆ.
-: ಕರ್ನಾಟಕದಲ್ಲಿ ಸಾರಿಗೆ ವ್ಯವಸ್ಥೆ :-
* ಕರ್ನಾಟಕದಲ್ಲಿ ಹಾದು ಹೋಗುವ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ – NH13
* NH13 :- ಮಂಗಳೂರು -ಮೂಡಬಿದ್ರಿ-ಕೊಪ್ಪ- ಶಿವಮೊಗ್ಗ- ಚಿತ್ರದುರ್ಗ- ಹೊಸಪೇಟೆ- ಇಳಕಲ್- ವಿಜಯಪುರ ಮಾರ್ಗವಾಗಿ ಸೊಲ್ಲಾಪುರವನ್ನು ಸೇರುತ್ತದೆ.
* ಪ್ರಸ್ತುತ ಕರ್ನಾಟಕದಲ್ಲಿ 14 ರಾಷ್ಟ್ರೀಯ ಹೆದ್ದಾರಿಗಳಿವೆ.
* ಇವುಗಳ ಒಟ್ಟು ಉದ್ದ -4491 KM
* ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿರದ ಜಿಲ್ಲೆಗಳು
-> ರಾಯಚೂರು
-> ಕೊಡಗು
* NH4 ಮತ್ತು NH7ಗಳು ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಸುವರ್ಣ ಚತುಷ್ಕೋನ ಹೆದ್ದಾರಿ ಯೋಜನೆ ಹಾಗೂ ಕಾರಿಡಾರ್ ಯೋಜನೆಗಳಿಗೆ ಸೇರಿವೆ.
* ರಾಜ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳು :- NH-13, NH-17, NH- 48,NH – 206, NH – 209, NH -212
-: ರಾಜ್ಯ ಹೆದ್ದಾರಿಗಳು :-
* ರಾಜ್ಯದಲ್ಲಿ 20,905 KM ಉದ್ದದ ರಾಜ್ಯ ಹೆದ್ದಾರಿ ಇದೆ.
* ಅತಿ ಉದ್ದದ ರಾಜ್ಯ ಹೆದ್ದಾರಿ ಹೊಂದಿರುವ ಜಿಲ್ಲೆ -ಬೆಳಗಾವಿ
* ಅತಿ ಕಡಿಮೆ ಉದ್ದದ ರಾಜ್ಯ ಹೆದ್ದಾರಿ ಹೊಂದಿರುವ ಜಿಲ್ಲೆ – ಬೆಂಗಳೂರು
-: ಜಿಲ್ಲಾ ರಸ್ತೆಗಳು :-
* ಜಿಲ್ಲಾ ರಸ್ತೆಗಳು ಜಿಲ್ಲಾ ಪಂಚಾಯಿತಿಗೆ ಸೇರುತ್ತವೆ.
* 47,836 ಕಿಲೋಮಿಟರ್ ಉದ್ದದ ಜಿಲ್ಲಾ ರಸ್ತೆಗಳಿವೆ.
* ಅತಿ ಹೆಚ್ಚು ಜಿಲ್ಲಾ ರಸ್ತೆಗಳನ್ನು ಒಳಗೊಂಡ ಜಿಲ್ಲೆ – ತುಮಕೂರು.
* ಅತಿ ಕಡಿಮೆ ಜಿಲ್ಲಾ ರಸ್ತೆಗಳನ್ನು ಒಳಗೊಂಡ ಜಿಲ್ಲೆ – ರಾಯಚೂರು.
* ಕರ್ನಾಟಕದಲ್ಲಿ 1,47,212 ಕಿಲೋಮೀಟರ್ ಗ್ರಾಮೀಣ ರಸ್ತೆಗಳಿವೆ.
-: ರೈಲು ಸಾರಿಗೆ :-
* ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ರೈಲು ಸಂಚಾರ ಆರಂಭವಾಗಿದ್ದು – 1864 ರಲ್ಲಿ ಇದನ್ನು ಬೆಂಗಳೂರು ಮತ್ತು ಮದ್ರಾಸ್ ನಗರಗಳ ಮಧ್ಯೆ,ಮದ್ರಾಸ್ ರೈಲ್ವೇ ಕಂಪನಿ ನಿರ್ಮಿಸಿತು.1956ರ ವೇಳೆಗೆ 2595 ಕಿಲೋಮೀಟರ್ಗಳಿದ್ದು ಅದು ದಕ್ಷಿಣ ರೈಲ್ವೆ ವಲಯಕ್ಕೆ ಸೇರಿತ್ತು.ಈಗ ನೈರುತ್ಯ ರೈಲ್ವೆ ವಲಯವು ಅಸ್ತಿತ್ವಕ್ಕೆ ಬಂದಿದೆ. ಇದರ ಕೇಂದ್ರ ಕಚೇರಿ – ಹುಬ್ಬಳ್ಳಿ ಕರ್ನಾಟಕದಲ್ಲಿ ಇಂದು ಒಟ್ಟು – 3244 ಕಿಲೋಮೀಟರ್ ಉದ್ದದ ರೈಲು ಮಾರ್ಗಗಳಿವೆ.
* ರೈಲು ಮಾರ್ಗ ಹೊಂದಿರದ ಜಿಲ್ಲೆ – ಕೊಡಗು
-: ಕೊಂಕಣ ರೈಲು :-
* ಇದು ಪಶ್ಚಿಮ ಕರಾವಳಿಯ ಮಹತ್ವಪೂರ್ಣವಾದ ರೈಲು ಮಾರ್ಗ.
* ಇದು ಮಂಗಳೂರು – ಮುಂಬೈ ನಡುವಿನ ಪ್ರಯಾಣದ ಅವಧಿ 41 ಗಂಟೆಗಳಿಂದ 18 ಗಂಟೆಗಳಿಗೆ ಕಡಿಮೆಯಾಗಿದೆ, ಇದರ ಉದ್ದ ಕರ್ನಾಟಕದಲ್ಲಿ – 273 ಕಿಲೋಮೀಟರ್
* ಇದರಲ್ಲಿ 13 ಪ್ರಮುಖ ಮತ್ತು 310 ಇತರೆ ಸೇತುವೆಗಳಿವೆ. ಅವುಗಳಲ್ಲಿ ಶರಾವತಿ ಸೇತುವೆ(22K M) ಅತ್ಯಂತ ಉದ್ದವಾಗಿದೆ ಕಾಳಿ ನದಿ ಸೇತುವೆ (1.2 KM ) ಉದ್ದವಾಗಿದೆ.
-: ಮೆಟ್ರೋ ರೈಲು :-
* 2011 ಅಕ್ಟೋಬರ್ 20ರಂದು ಬೆಂಗಳೂರು ನಗರದ ಬೈಯಪ್ಪನಹಳ್ಳಿಯಿಂದ M G ರಸ್ತೆಯವರೆಗೂ ಕಾರ್ಯಾರಂಭಗೊಂಡಿದೆ.
-: ವಾಯು ಸಾರಿಗೆ :-
* ಕರ್ನಾಟಕದಲ್ಲಿ ಮೊದಲು ವಿಮಾನಯಾನ 1946ರಲ್ಲಿ ಬೆಂಗಳೂರು – ಹೈದ್ರಾಬಾದ್ ಮಧ್ಯೆ ” ಡೆಕ್ಕನ್ ಏರ್ವೇಸ್ ” ಎಂಬ ಕಂಪನಿಯು ಪ್ರಾರಂಭಿಸಿತು.
* ಭಾರತೀಯ ವಿಮಾನ ಸಂಚಾರವು 1953ರಲ್ಲಿ ರಾಷ್ಟ್ರೀಕರಣಗೊಂಡು ಇಂಡಿಯನ್ ಏರ್ಲೈನ್ಸ್ ಸಂಸ್ಥೆ ಆರಂಭಗೊಂಡ ಮೇಲೆ ಬೆಂಗಳೂರಿನಿಂದ ವಿವಿಧ ಕೇಂದ್ರಗಳಿಗೆ ವಿಮಾನಯಾನದ ಸೌಲಭ್ಯವು ಕಲ್ಪಿಸಲಾಯಿತು.
* ರಾಜ್ಯದ ರಾಜಧಾನಿ ಬೆಂಗಳೂರು 1996ರಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವೆಂದು ಘೋಷಿಸಲ್ಪಟ್ಟಿತು.
* ಬೆಳಗಾವಿ,ಹುಬ್ಬಳ್ಳಿ, ಮೈಸೂರು, ಮಂಗಳೂರಿನಲ್ಲಿ ದೇಶಿಯ ವಿಮಾನ ನಿಲ್ದಾಣಗಳಿವೆ ಹೊಸದಾಗಿ ಕಲ್ಬುರ್ಗಿಯಲ್ಲಿ ನಿರ್ಮಾಣಗೊಂಡಿದೆ.
* ಈ ಹಿಂದೆ ಬೆಂಗಳೂರು ನಗರದ HAL ವಿಮಾನ ನಿಲ್ದಾಣದಲ್ಲಿದ್ದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅಲ್ಲಿದ್ದ 34 ಕಿ.ಮೀ ದೂರದಲ್ಲಿ ದೇವನಹಳ್ಳಿಗೆ ದಿನಾಂಕ 24 5 2018 ರಂದು ಸ್ಥಳಾಂತರಿಸಲಾಗಿದೆ.
* HAL ವಿಮಾನ ನಿಲ್ದಾಣವನ್ನು ಈಗ ಪೈಲೆಟ್ಗಳ ತರಬೇತಿಗೆ ಬಳಸಲಾಗುತ್ತಿದೆ.
* ಹೊಸದಾಗಿ ನಿರ್ಮಿಸಿದ ದೇವನಹಳ್ಳಿ ವಿಮಾನ ನಿಲ್ದಾಣವು ಭಾರತದ ಮೊದಲ ಹಸಿರು ಕ್ಷೇತ್ರದ ವಿಮಾನ ನಿಲ್ದಾಣವಾಗಿದೆ. ( Green field Airport )
-: ಜಲ ಸಾರಿಗೆ :-
* ಹಡಗು ನಿಲ್ಲುವ ಸಮುದ್ರ ತೀರದ ಸ್ಥಳವನ್ನು ಬಂದರುಗಳು ಎನ್ನುವರು.
* ಕರ್ನಾಟಕದಲ್ಲಿ 25 ಸಣ್ಣ ಮತ್ತು ದೊಡ್ಡ ಪ್ರಮಾಣದ ಬಂದರುಗಳಿವೆ.
* 1957ರಲ್ಲಿ ಬಂದರು ಅಭಿವೃದ್ಧಿ ಇಲಾಖೆಯು ಸ್ಥಾಪಿ ತಗೊಂಡು ಸೌಲಭ್ಯಗಳ ವಿಸ್ತರಣೆ ಆರಂಭಗೊಂಡಿತು.
* ನವಮಂಗಳೂರು 1974 ಮೇ 4ರಂದು ಭಾರತದ 9ನೇ ಬಂದರಾಗಿ ಘೋಷಿಸಲ್ಪಟ್ಟಿದೆ.
* ಇದನ್ನು ” ಕರ್ನಾಟಕದ ಹೆಬ್ಬಾಗಿಲು ” ಎಂದು ಕರೆಯುವರು.
* ಹಳೆಯ ಮಂಗಳೂರು ಬಂದರು,ಮಲ್ಪೆ, ಹಂಗಾರಕಟ್ಟೆ,ಕುಂದಾಪುರ, ಪಡುಬಿದ್ರಿ, ಭಟ್ಕಳ, ಹೊನ್ನಾವರ, ಬೇಲಿಕೇರಿ, ತದ್ರಿ,ಮತ್ತು ಕಾರವಾರ ಪ್ರಮುಖ ಬಂದರುಗಳಾಗಿವೆ.
* ಕಾರವಾರ ಬಂದರು ಅತಿ ಸುಂದರವಾದ ಬಂದರು ಎಂದು ಪ್ರಸಿದ್ಧಿ .
* ಇದು ಸರ್ವ ಋತು ಬಂದರಾಗಿದ್ದು ತನ್ಮೂಲಕ ಕಬ್ಬಿಣದ ಅದಿರು,ಮ್ಯಾಂಗನೀಸ್,ಗ್ರಾನೈಟ್ ಹಾಗೂ ವ್ಯವಸಾಯ ಉತ್ಪನ್ನಗಳು ರಫ್ತು ಆಗುತ್ತದೆ.
-: ರಾಷ್ಟ್ರೀಯ ಭಾವೈಕ್ಯ :-
* ಒಂದು ರಾಷ್ಟ್ರದ ಜನ ನಾವೆಲ್ಲ ಒಂದೇ ಎನ್ನುವ ಭಾವನೆ ರಾಷ್ಟ್ರೀಯ ಭಾವೈಕ್ಯ
* ಈ ದೇಶದಲ್ಲಿ 1652 ಭಾಷೆ ಮತ್ತು ಉಪಭಾಷೆಗಳನ್ನು ಮಾತನಾಡುವ ಜನರಿದ್ದಾರೆ.
* 22 ಭಾಷೆಗಳನ್ನು ನಮ್ಮ ಸಂವಿಧಾನ ಅಂಗೀಕರಿಸಿದೆ.
* ಭಾರತವು ವಿವಿಧ ಭಾಷೆಗಳ ತವರೂರಾಗಿದೆ.
* ಭಾರತ ಒಂದು ಜಾತ್ಯತೀತ ರಾಷ್ಟ್ರ, ಧರ್ಮವಿರೋಧಿ ರಾಷ್ಟ್ರವಲ್ಲ.
-: ಸಾಮಾಜಿಕರಣ ಹಾಗೂ ಕುಟುಂಬದ ಸಂಬಂಧಗಳು :-
* ಮಾನವನು ಸಾಮಾಜಿಕ ವ್ಯಕ್ತಿಯಾಗಿ ರೂಪಗೊಳ್ಳುವ ಕ್ರಿಯೆ – ಸಾಮಾಜಿಕರಣ .
* ತಾಯಿಯೇ ಮಗುವಿನ ಮೊದಲ ಗುರು.
-: ಸಮುದಾಯ :-
* ಅತಿ ಹೆಚ್ಚು ಬುಡಕಟ್ಟು ಜನಾಂಗವನ್ನು ಹೊಂದಿರುವ ದೇಶ – ಆಫ್ರಿಕಾ
* ಅತಿ ಹೆಚ್ಚು ಬುಡಕಟ್ಟು ಜನಾಂಗವನ್ನು ಹೊಂದಿರುವ ಎರಡನೇ ದೇಶ – ಭಾರತ