Teachers: ಖಾಲಿ ಇರುವ ಶಿಕ್ಷಕರ(Teachers) ಹುದ್ದೆಗಳಿಗೆ ಅರ್ಜಿ ಆಹ್ವಾನ.

Teachers: ಖಾಲಿ ಇರುವ ಶಿಕ್ಷಕರ(Teachers) ಹುದ್ದೆಗಳಿಗೆ ಅರ್ಜಿ ಆಹ್ವಾನ.

Teachers

Teachers:ಶ್ರೀ ಕಾಂಚನೇಶ್ವರಿ ವಿದ್ಯಾವರ್ಧಕ ಸಂಸ್ಥೆ(ರಿ), ಕಟಗೇರಿ, ತಾ:ಗುಳೇದಗುಡ್ಡ ಈ ಆಡಳಿತ ಮಂಡಳಿಯ ಅಧೀನದಲ್ಲಿ ನಡೆಯುತ್ತಿರುವ ಶ್ರೀ ಕಾಂಚನೇಶ್ವರಿ ಹಿರಿಯ ಪ್ರಾಥಮಿಕ ಶಾಲೆ, ಕಟಗೇರಿ, ತಾ:ಗುಳೇದಗುಡ್ಡ ಪ್ರಾಥಮಿಕ ಶಾಲೆಯನ್ನು ಸರ್ಕಾರದ ಆದೇಶ ಸಂಖ್ಯೆ ಇಡಿ 223 ಪಿಎಂಸಿ 2014, ಬೆಂಗಳೂರು ದಿನಾಂಕ:09-06-2015ರನ್ವಯ ಸಹಾಯಾನುದಾನಕ್ಕೆ ಒಳಪಡಿಸಲಾಗಿರುತ್ತದೆ. ಸದರಿ ಶಾಲೆಯಲ್ಲಿ 1 ರಿಂದ 7ನೇ ತರಗತಿಗಳು ನಡೆಯುತ್ತಿದ್ದು, ಈಗಾಗಲೇ 4 ಸಹ ಶಿಕ್ಷಕರನ್ನು ಸಹಾಯಾನುದಾನಕ್ಕೆ ಒಳಪಡಿಸಲಾಗಿರುತ್ತದೆ. ಅನುದಾನ ರಹಿತವಾಗಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಶಿಕ್ಷಕರುಗಳು ವೈಯಕ್ತಿಕ ಕಾರಣಗಳಿಂದ ರಾಜೀನಾಮೆಯನ್ನು ನೀಡಿರುವ ಪ್ರಯುಕ್ತ, ಸದರಿ ಹುದ್ದೆಗಳನ್ನು ಸಹಾಯಾನುದಾನಕ್ಕೆ ಒಳಪಡಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಪ್ರಕಟಣೆಗೊಂಡ 21 ದಿವಸಗಳೊಳಗಾಗಿ ತಮ್ಮ ಅರ್ಜಿಯೊಂದಿಗೆ ಸಂಪೂರ್ಣ ವಿದ್ಯಾರ್ಹತೆಯ ಹಾಗೂ ಈಗಿನ ಸಂಪರ್ಕಿಸುವ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿ ದಾಖಲೆ:ಮಾಹಿತಿಗಳೊಂದಿಗೆ ನಿಗಧಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು. ಮತ್ತು ಟಿ.ಇ.ಟಿ ಪರೀಕ್ಷೆಯನ್ನು ಕಡ್ಡಾಯವಾಗಿ ಪಾಸು ಮಾಡಿರಬೇಕು. ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ದೃಢೀಕೃತ ದಾಖಲೆಗಳೊಂದಿಗೆ ಅಭ್ಯರ್ಥಿಗಳು ರೂ.500-00ರ ಹುಂಡಿಯನ್ನು ರಾಷ್ಟ್ರೀಕೃತ ಬ್ಯಾಂಕ್‌ ನಲ್ಲಿ ‘ಚೇರಮನ್, ಶ್ರೀ ಕಾಂಚನೇಶ್ವರಿ ವಿದ್ಯಾವರ್ಧಕ ಸಂಸ್ಥೆ, ಕಟಗೇರಿ’ ಹೆಸರಿನಲ್ಲಿ ತೆಗೆದು ಸಂಪೂರ್ಣ ಅರ್ಜಿಯನ್ನು ಚೇರಮನ್ನರು, ಶ್ರೀ ಕಾ ಕಾಂಚನೇಶ್ವರಿ ವಿದ್ಯಾವರ್ಧಕ ಸಂಸ್ಥೆ ಕಟಗೇರಿ, c/o ಗುಡ್ಡದ ಬಿಲ್ಡಿಂಗ್, ಆನಂದ ನಗರ, ಬಾದಾಮಿ-587201, ಜಿಲ್ಲೆ:ಬಾಗಲಕೋಟೆ ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. ಹಾಗೂ ಅರ್ಜಿಯ ಒಂದು ಪ್ರತಿಯನ್ನು ಉಪನಿರ್ದೇಶಕರು, ಶಾ.ಶಿ.ಇ, ಜಿಲ್ಲಾಡಳಿತ ಭವನ, ಬಾಗಲಕೋಟೆ ಇವರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 1:10ರ ಅನುಪಾತದಂತೆ ಅರ್ಹತೆ ಆಧಾರದ ಮೇಲೆ ಸಂದರ್ಶನಕ್ಕೆ ಕರೆಯಲಾಗುವುದು.
ಸಂಪರ್ಕಿಸಿರಿ: ಹೆಚ್ಚಿನ ಮಾಹಿತಿಗಾಗಿ 9448776238, 9743922811 ಸಂಪರ್ಕಿಸಲು ಕೋರಲಾಗಿದೆ.

PDF DOWNLOAD – CLICK HERE

WhatsApp Group Join Now
Telegram Group Join Now