-: ವರ್ಧನರು :-
* ಬಾಣ ಕವಿಯ ಹರ್ಷಚರಿತೆಯ ಪ್ರಕಾರ ಪುಷ್ಯಭೂತಿ ವರ್ಧನ ಈ ವಂಶದ ಸ್ಥಾಪಕ.
* ರಾಜಧಾನಿಗಳು ಥಾನೇಶ್ವರ ಮತ್ತು ಕನೋಜ.
ಪ್ರಭಾಕರ ವರ್ಧನ ( ಸಾಮಾನ್ಯ ಶಕ 583-605).
* ಆದಿತ್ಯ ವರ್ಮನ ಮಗನಾದ ಈತ ” ಮಹಾರಾಜಾಧಿರಾಜ ” ಮತ್ತು ” ಪರಮ ಭಟ್ಟಾರಕ ” ಎಂಬ ಬಿರುದನ್ನು ಹೊಂದಿದ್ದ.
* ಇವನು ಯಶೋಮತಿ ವಿವಾಹವಾಗಿದ್ದು ಇವನಿಗೆ ಎರಡನೆಯ ರಾಜವರ್ಧನ್, ಹರ್ಷವರ್ಧನ್, ರಾಜಶ್ರೀ ಎಂಬ ಮಕ್ಕಳಿದ್ದರು. ಇವನು ಸೂರ್ಯನ ಆರಾಧಕ.
ಎರಡನೇ ರಾಜವರ್ಧನ್ ( ಸಾಮಾನ್ಯ ಶಕ 605-606).
* ಇವನ ಆಳ್ವಿಕೆ ಆರಂಭದಲ್ಲಿ ಮಾಳ್ವದ ದೇವಗುಪ್ತ ಕನೋಜಿನ ಗೃಹ ವರ್ಮನನ್ನು ಕೊಂದು ರಾಜಶ್ರೀ ಯನ್ನು ಬಂಧಿಸಿದನು.
* ಈತ ತನ್ನ ಸಹೋದರಿಯಾದ ಅನ್ಯಾಯವನ್ನು ಸರಿಪಡಿಸಲು ಮಾಳ್ವದ ಮೇಲೆ ದಾಳಿ ಮಾಡಿ ಸ್ನೇಹಿತನಂತೆ ನಟಿಸಿದ ಗೌಡ ದೇಶದ ಶಶಾಂಕ ಮೋಸದಿಂದ ರಾಜವರ್ಧನನ್ನು ಕೊಂದನು.
ಹರ್ಷವರ್ಧನ( ಸಾಮಾನ್ಯ ಶಕ 606-646).
* ವರ್ಧನ ಸಂತತಿಯ ಪ್ರಸಿದ್ಧ ದೊರೆ.
* ಇವನನ್ನು ರಾಜಪುತ್ರ, ಶಿಲಾದಿತ್ಯ, ಪ್ರಿಯದರ್ಶಿನಿ, ಉತ್ತರ ಪಥೇಶ್ವರ, ಪರಮೇಶ್ವರ, ಪರಮ ಭಟ್ಟಾರಕ ಎಂದು ಕರೆಯುತ್ತಿದ್ದರು.
ನರ್ಮದಾ ನದಿ ಕದನ ( ಸಾಮಾನ್ಯ ಶಕ 630-34).
* ಬಾದಾಮಿ ಚಾಲುಕ್ಯರ ಎರಡನೇ ಪುಲಕೇಶಿಯನ್ನು ಯುದ್ಧಕ್ಕೆ ಆಹ್ವಾನಸಿದನು. ಆದರೆ ನರ್ಮದಾ ನದಿಯ ದಡದಲ್ಲಿ ನಡೆದ ಈ ಕದನದಲ್ಲಿ ವರ್ಷವರ್ಧನ ಸೋತನೆಂದು ರವಿ ಕೀರ್ತಿಯ ಐಹೊಳೆ ಶಾಸನದಲ್ಲಿ ಉಲ್ಲೇಖಿಸಲಾಗಿದೆ.
-: ಆಡಳಿತ :-
* ತನ್ನ ಸಾಮ್ರಾಜ್ಯವನ್ನು ಭುಕ್ತಿಗಳಾಗಿ ಅಂದರೆ ಪ್ರಾಂತ್ಯಗಳಾಗಿ.
* ಪ್ರಾಂತ್ಯಗಳನ್ನು ವಿಷಯಗಳಾಗಿ ಅಂದರೆ ಜಿಲ್ಲೆಗಳಾಗಿ.
* ಜಿಲ್ಲೆಗಳನ್ನು ಪತಕ ಅಥವಾ ಗ್ರಾಮಗಳಾಗಿ ವಿಭಾಗಿಸಿದನು.
-: ಸಾಹಿತ್ಯ :-
* ಹರ್ಷವರ್ಧನ – ನಾಗಾನಂದ, ಪ್ರಿಯದರ್ಶಿಕ ರತ್ನಾವಳಿ ಎಂಬ ಸಂಸ್ಕೃತ ನಾಟಕಗಳು.
* ಬಾಣಭಟ್ಟ ಹರ್ಷಚರಿತೆ ಕಾದಂಬರಿ ಚಂಡಿ ಶತಕ ಪಾರ್ವತಿ ಪರಿಣಯ.
* ಮಯೂರ ಸೂರ್ಯ ಶತಕ.
* ಭತೃಹರಿ ಭತೃಹರಿ ಶತಕ.
-: ಶಾತವಾಹನರು :-
* ಮೌರ್ಯರ ನಂತರ ದಕ್ಷಿಣ ಭಾರತದಲ್ಲಿ ಆಳ್ವಿಕೆ ಮಾಡಿದ ಪ್ರಥಮ ಮನೆತನ.
* ಸ್ಥಾಪಕ – ಸಿಮುಖ
* ರಾಜಧಾನಿ – ಫೈತಾನ್ ಅಥವಾ ಪ್ರತಿಷ್ಠಾನ.
* ರಾಜ ಲಾಂಛನ – ವರುಣ.
* ಆರ್. ಜಿ. ಭಂಡಾರ್ಕರ್
ದಕ್ಷಿಣದಲ್ಲಿ ಶಾತವಾಹನರು ನೇಗಿಲನ್ನು ಪರಿಚಯಿಸಿದರು ಎಂಬುವುದಕ್ಕಿಂತ ನೇಗಿಲಿನಿಂದ ಶಾತವಾಹನರು ದಕ್ಷಿಣಕ್ಕೆ ಪರಿಚಿತರಾದರು ಎಂಬುದು ಸೂಕ್ತ ಎಂದಿದ್ದಾರೆ.
ಸಿಮುಖ.
ನಾನಾಘಾಟ್ ಸಾಸನ ಇವನನ್ನು ರಾಯಸಿಮುಖ ಎಂದು ವರ್ಣಿಸಿದೆ. ಅಲ್ಲದೆ ಜೈನ ಗ್ರಂಥವೊಂದು ಶಾಲಿವಾಹನ ಎಂದು ಕರೆದಿದೆ.
-: ಒಂದನೇ ಶಾತಕರ್ಣಿ :-
* ಈತ ತನ್ನ ದಿಗ್ವಿಜಯಗಳ ಸ್ಮರಣಾರ್ಥ ಎರಡು ಅಶ್ವಮೇಧ ಹಾಗೂ ಒಂದು ರಾಜಸೂಯ ಯಾಗಗಳನ್ನು ಆಚರಿಸಿದನು.
* ” ದಕ್ಷಿಣ ಪಥಾಪತಿ ” ಎಂಬ ಬಿರುದು ಪಡೆದುಕೊಂಡಿದ್ದನು.
-: ಹಾಲ ( ಸಾಮಾನ್ಯ ಶಕ 46-51).
* ಈತನು ಶಾತವಾಹನರ 17ನೇ ದೊರೆಯಾಗಿದ್ದ ಶಾಂತಿ ಪ್ರಿಯ ಅರಸನೆಂದು ಖ್ಯಾತನಾಗಿದ್ದಾನೆ.
* ಸ್ವತಹ ಸಾಹಿತಿಯಾಗಿದ್ದ, ಪ್ರಾಕೃತ ಭಾಷೆಯಲ್ಲಿ ಗಾತ ಸಪ್ತಶತಿ ಎಂಬ ಕೃತಿಯನ್ನು ರಚಿಸಿದನು ಇದು 700 ಶೃಂಗಾರ ಕಾವ್ಯಗಳನ್ನು ಒಳಗೊಂಡಿದೆ.
* ಈತನ ಆಸ್ಥಾನ ಕವಿ ಪೈಶಾಚಿ ಪ್ರಾಕೃತ ಭಾಷೆಯಲ್ಲಿ – ಬೃಹತ್ಕಥಾ ಕೃತಿಯನ್ನು ರಚಿಸಿದನು.
* ಈತನೇ ಶಾಲಿವಾಹನ ಶಕೆ ಪ್ರಾರಂಭಿಸಿದನೆಂದು ಹೇಳಲಾಗುತ್ತದೆ.
-: ಗೌತಮಿಪುತ್ರ ಶಾತಕರ್ಣಿ ( ಸಾಮಾನ್ಯ ಶಕ 106-130).
* ಶಾತವಾಹನ ಮನೆತನದ ಪ್ರಸಿದ್ಧ ಅರಸ.
* ಶಕರ ಅರಸನಾದ ನಹಪಾಣನನ್ನು ಸೋಲಿಸಿ ಆತನ ನಾಣ್ಯಗಳ ಮೇಲೆ ಮರು ಮುದ್ರಣ ಹಾಕಿಸಿದಕ್ಕಾಗಿ ಶಕಾರಿ ಅಥವಾ ಶಿಕಾರಿ ಎಂಬ ಬಿರುದು ಬಂದಿತು.
* ತನ್ನ ಸಾಮ್ರಾಜ್ಯವನ್ನು ಮೂರು ಸಮುದ್ರಗಳ ವರೆಗೆ ವಿಸ್ತರಿಸಿದ್ದಕ್ಕಾಗಿ ತ್ರೈಸಮುದ್ರ ತೋಯ ಪಿತವಾಹನ ( ಅಂದರೆ ಮೂರು ಸಮುದ್ರಗಳ ನೀರನ್ನು ಕುಡಿದ ಕುದುರೆಯನ್ನು ವಾಹನವನ್ನಾಗಿ ಪಡೆದವನು) ಎಂಬ ಬಿರುದು ಪಡೆದಿದ್ದನು.
-: ಯಜ್ಞಶ್ರೀ ಶಾತಕರ್ಣಿ :-
* ಈತ ಶಾತವಾಹನರ ಕೊನೆಯ ಪ್ರಬಲ ದೊರೆ.
* ಇವನ ನಾಣ್ಯಗಳ ಮೇಲೆ ಹಡಗು ಮತ್ತು ಮೀನಿನ ಚಿತ್ರಗಳು ಇರುವುದರಿಂದ ಉತ್ತಮವಾದ ಸಾಗರ ವ್ಯಾಪಾರ ಹೊಂದಿದ್ದನೆಂದು ಹೇಳಲಾಗಿದೆಹೇಳಲಾಗಿದೆ
ಆಡಳಿತ.
* ಮೌರ್ಯರ ರೈತ ಪದ್ದತಿಯನ್ನು ಮುಂದುವರಿಸಿದ್ದರು ರಾಜನು ರಾಜ್ಯದ ಎಲ್ಲಾ ಅಧಿಕಾರದ ಕೇಂದ್ರವಾಗಿದ್ದನು ರಾಜನನ್ನು ರಾಜನ್, ಸ್ವಾಮಿನ್ , ರಾಜರಾಣೋ ಎಂದು ಕರೆಯುತ್ತಿದ್ದರು.
ಆಡಳಿತದ ಅನುಕೂಲಕ್ಕಾಗಿ.
ಜನಪದ ಪ್ರಾಂತ್ಯಾಧಿಕಾರಿ, ಪಟ್ಟಣ ವಿಷಯ ಪತಿ, ಅಗ್ರಹಾರ ಅಮಾತ್ಯ , ಗ್ರಾಮ ಗ್ರಾಮೀಕ ಅಥವಾ ಗೌಡ, ಆಡಳಿತ ಅಧಿಕಾರಿಗಳು ( ಮಂತ್ರಿಮಂಡಲ), ಭಂಡಾರಿಕ ಉಗ್ರಾಣ ಅಧಿಕಾರಿ, ಮಹಾ ಆರ್ಯ ಗ್ರಾಮಾಧಿಕಾರಿ, ಹಿರಣ್ಯಕ ಹಣಕಾಸಿನ ಅಧಿಕಾರಿ, ನಿಬಂಧನಕಾರಿ ಭೂ ದಾಖಲೆ ಅಧಿಕಾರಿ.
* ಸ್ತ್ರೀಯರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಕಾಣಬಹುದು.
* ಸಾಮಾಜಿಕ ಜೀವನ ಚಾತುರ್ವಣಗಳಿಂದ ಕೂಡಿತ್ತು.
* ಅವಿಭಕ್ತ ಕುಟುಂಬ ಸಾಮಾನ್ಯವಾಗಿತ್ತು.
* ಅತಿ ಶೂದ್ರರನ್ನು ಪಂಚಮ ರನ್ನು ಪರಿಗಣಿಸಿ ಅಸ್ಪೃಶ್ಯರೆಂದು ತಿಳಿದಿದ್ದರೂ ಅವರನ್ನು ಸಮಾಜದಿಂದ ದೂರವಿಟ್ಟಿದ್ದರು.
-: ಆರ್ಥಿಕ ಜೀವನ :-
* ಕೃಷಿ ಪ್ರಮುಖ ಉದ್ಯೋಗವಾಗಿತ್ತು.
* ಗೃಹ ಕೈಗಾರಿಕೆಗಳ ಪ್ರಚಲಿತದಲ್ಲಿತ್ತು.
* ಮುಸ್ಲಿನ್, ಉಣ್ಣೆ ಬಟ್ಟೆ, ಸಾಂಬಾರ್ ಪದಾರ್ಥಗಳು, ಶ್ರೀಗಂಧ ಮುಂತಾದವುಗಳನ್ನು ರಫ್ತು ಮಾಡುತ್ತಿದ್ದರು.
* ಗ್ರೀಕ್ ಮತ್ತು ರೋಮನ್ ಅವರೊಂದಿಗೆ ವ್ಯಾಪಾರ ಸಂಪರ್ಕ ಹೊಂದಿದ್ದರು.
* ಇವರ ಕಾಲದ ವಿದೇಶಿ ವ್ಯಾಪಾರದ ಬಗ್ಗೆ ಅನಾಮದೇಯ ರಚಿಸಿದ ಪೇರಿ ಪ್ಲಸ್ ಆಫ್ ದಿ ಎರಿತ್ರಿಯನ್ ಸಿ ಯಲ್ಲಿ ಹಾಗೂ ಸ್ಟ್ರಾಬೋ ಮತ್ತು ಪ್ಲಿನಿ ಬರವಣಿಗೆಗಳಲ್ಲಿ ಉಲ್ಲೇಖವಿದೆ.
* ಈ ಕಾಲದ ಪ್ರಮುಖ ಆಮದುಗಳು – ತಾಮ್ರಾ, ಸೀಸ್, ಪರಿಮಳದ್ರವ್ಯ , ಗಾಜು.
-: ನಾಣ್ಯಗಳು :-
ಸುವರ್ಣ ದಿನಾರ್ ಎಂಬ ಬಂಗಾರದ ನಾಣ್ಯಗಳು, ಬೆಳ್ಳಿ ಸೀಸದ ಕೂಪಣ ಎಂಬ ನಾಣ್ಯಗಳು ಅಸ್ತಿತ್ವದಲ್ಲಿದ್ದವು.
ಕಲೆ ಮತ್ತು ವಾಸ್ತು ಶಿಲ್ಪ.
ಇವರ ಕಾಲದ ಪ್ರಮುಖ ಕಲಾ ವಾಸ್ತು ಶಿಲ್ಪ ಕೇಂದ್ರಗಳು ಎಂದರೆ ಅಮರಾವತಿ, ನಾಗಾರ್ಜುನ ಕೊಂಡ, ಅಜಂತ, ಕಾರ್ಲೆ , ನಾಸಿಕ್, ಕನೇರಿ ಮುಂತಾದವು.ಮೂರು ವಿಧದ ಸ್ಮಾರಕಗಳನ್ನು ನಿರ್ಮಿಸಿದರು.
1. ಚೈತಾಲಯಗಳು.
* ಬುದ್ಧನನ್ನು ಪೂಜಿಸುವ ಪ್ರಾರ್ಥನಾ ಸಭಾಂಗಣಗಳೆ ಚೈತ್ಯಗಳು.
* ಕಾರ್ಲೆ ಚೈತ್ಯಾಲಯ – ಇದು ಭಾರತದ ಅತ್ಯಂತ ಉದ್ದನೆಯ ಹಾಗೂ ಸುಂದರವಾದ ಚೈತಾಲಯವಾಗಿದೆ. ಇದನ್ನು ನಿರ್ಮಿಸಿದ ಶಿಲ್ಪಿ ” ವೈ ಜಯಂತಿ “.
2. ವಿಹಾರಗಳು.
* ಬೌದ್ಧ ಸನ್ಯಾಸಿಗಳ ವಾಸ ಸ್ಥಳಗಳೆ ವಿಹಾರಗಳು.
* ಅಜಂತಾದ 12ನೇ ಗುಹೆ ಏಕಂತಸ್ತ್ತಿನ ಪ್ರಾಚೀನ ಬೌದ್ಧ ವಿಹಾರವಾಗಿದೆ.
* ನಾಸಿಕ್ ನಲ್ಲಿ ಮೂರು ವಿಹಾರಗಳಿವೆ.
3. ಸ್ತೂಪಗಳು .
* ಬುದ್ಧನ ವಿಶೇಷಗಳ ಮೇಲೆ ಗುಮ್ಮಟ ಆಕೃತಿಯಲ್ಲಿ ನಿರ್ಮಿಸಿದ ಕಲಾಕೃತಿಗಳ ಸ್ತೂಪಗಳು.
* ಈ ಕಾಲದ ಸ್ತೂಪಗಳು ಆಂಧ್ರದಲ್ಲಿನ ಅಮರಾವತಿ, ನಾಗಾರ್ಜುನ ಕೊಂಡ, ಗೋಲಿ, ಜಗ್ಗಯ್ಯ ಪೇಟ, ಭಟ್ಟಿ ಪ್ರೊಲು, ಗಂಟಸಾಲಗಳಲ್ಲಿ ಕಂಡುಬರುತ್ತವೆ.
* ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಸನ್ನತಿ ಎಂಬಲ್ಲಿ ಒಂದು ಸ್ತೂಪವಿದೆ.