ರಾಷ್ಟಕೂಟರು ಮತ್ತು ಕಲ್ಯಾಣಿ ಚಾಲುಕ್ಯರು. TET,GPSTR,HSTR,PDO All Competative exam notes.

Table of Contents

ರಾಷ್ಟಕೂಟರು ( ಸಾಮಾನ್ಯ ಶಕ 753-973).

* ಇವರು 8ನೇ ಶತಮಾನದಿಂದ 10ನೇ ಶತಮಾನದ ವರೆಗೆ ಆಳ್ವಿಕೆ ನಡೆಸಿದರು.

* ರಾಷ್ಟ್ರಕೂಟ ಎಂದರೆ ” ರಾಷ್ಟ್ರದ ಮುಖ್ಯಸ್ಥರು ” ಎಂದರ್ಥ.

* ಸ್ಥಾಪಕ – ದಂತಿದುರ್ಗ ( ಬಾದಾಮಿ ಚಾಲುಕ್ಯರ ದೊರೆ ಎರಡನೇ ಕೀರ್ತಿವರ್ಮನನ್ನು ಸೋಲಿಸಿ ಸಾಮ್ರಾಜ್ಯ ಸ್ಥಾಪನೆ ಮಾಡಿದನು)

* ರಾಜಧಾನಿಗಳು – ಲಟ್ಟಲೂರು ( ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆ ಲಾತೂರ್ ) ಮಾನ್ಯ ಖೇಟ ( ಗುಲ್ಬರ್ಗ ಜಿಲ್ಲೆ )

* ರಾಜ್ಯ ಲಾಂಛನ – ಗರುಡ

ದಂತಿದುರ್ಗ ( ಸಾಮಾನ್ಯ ಶಕ 753-756).

* ಹಿರಣ್ಯಗರ್ಭದಾನ ಯಾಗವನ್ನು ಮಾಡಿದನು.

* ಇವನು ಚಾಲುಕ್ಯ ದೊರೆ ಎರಡನೇ ಕೀರ್ತಿವರ್ಮನನ್ನು ಸೋಲಿಸಿ, ರಾಷ್ಟ್ರಕೂಟ ವಂಶ ಸ್ಥಾಪಿಸಿದನು.

ಒಂದನೇ ಕೃಷ್ಣ ( ಸಾಮಾನ್ಯ ಶಕ 756-774).

* ದಂತಿದುರ್ಗ ಸಂತಾನವಿಲ್ಲದೆ ಮರಣ ಹೊಂದಿದಾಗ ಅವನ ಚಿಕ್ಕಪ್ಪನಾದ ಒಂದನೇ ಕೃಷ್ಣನು ಆಡಳಿತಕ್ಕೆ ಬಂದನು.

* ಎಲ್ಲೋರದಲ್ಲಿ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದನು ಇದು ಏಕಶಿಲೆಯ ನಿರ್ಮಾಣವಾಗಿರುವ ಬೃಹತ್ ದೇವಾಲಯವಾಗಿದೆ. ಇದನ್ನು ಮೇಲಿನಿಂದ ಕೆಳಗೆ ಕೊರೆಯಲಾಗಿದೆ. ಇದನ್ನು ಕಟ್ಟಿದ ಶಿಲ್ಪಿ ” ವಿಶ್ವಕರ್ಮ ”

ಎರಡನೇ ಗೋವಿಂದ ( ಸಾಮಾನ್ಯ ಶಕ 774-780).

* ಇವನು ಗಂಗರ ಶ್ರೀ ಪುರುಷ ಮತ್ತು ವೆಂಗಿಯ ವಿಷ್ಣುವರ್ಧನನ್ನು ಸೋಲಿಸಿದನು.

* ಬಿರುದುಗಳು – ಪ್ರತಾಪವ ಲೋಕ, ಪ್ರಭುತ ವರ್ಷ, ಜಗತ್ತುಂಗ .

ಧ್ರುವ ( ಸಾಮಾನ್ಯ ಶಕ 780-793).

* ಗಂಗಾ ಯಮುನಾ ತೀರದಲ್ಲಿ ಬಂಗಾಲದ ಧರ್ಮ ಪಾಲನನ್ನು ಸೋಲಿಸಿದನು .

* ಕನೌಜಿನ ಇಂದ್ರಾಯುಧ ನನ್ನು ಸೋಲಿಸಿದನು.

* ಇವರು ಹೊಯ್ಸಳ ರಾಜಧಾನಿ ಹಳೇಬೀಡಿನಲ್ಲಿ ಧ್ರುವ ಸಮುದ್ರ ಎಂಬ ಕೆರೆಯನ್ನು ನಿರ್ಮಿಸಿದನು. ಆದ್ದರಿಂದ ಅದಕ್ಕೆ ದ್ವಾರಸಮುದ್ರ ಎಂಬ ಹೆಸರು ಬಂದಿದೆ.

* ಇವರು ಧಾರಾವರ್ಷ , ಶ್ರೀ ವಲ್ಲಭ, ಕಲಿವಲ್ಲಭ ಎಂಬ ಬಿರುದುಗಳನ್ನು ಹೊಂದಿದನು.

ಮೂರನೇ ಗೋವಿಂದ ( ಸಾಮಾನ್ಯ ಶಕ 793-814).

ಒಂದನೇ ಅಮೋಘವರ್ಷ ನೃಪತುಂಗ ( ಸಾಮಾನ್ಯ ಶಕ 814-878).

* ರಾಷ್ಟ್ರಕೂಟರಲ್ಲಿಯೇ ಪ್ರಸಿದ್ಧನಾದ ಅರಸ.

* ಇವನ ಸೇನಾನಿ ಬಂಕೇಶ – ಬಂಕಾಪುರ ಎಂಬ ನಗರವನ್ನು ನಿರ್ಮಿಸಿದನು.

* ವೆಂಗಿಯ ಎರಡನೇ ವಿಕ್ರಮಾದಿತ್ಯನನ್ನು ವಿಂಗವಳ್ಳಿ ಕದನದಲ್ಲಿ ಸೋಲಿಸಿದನು.

* ಕಲಾ ಪ್ರಿಯನಾದ ಈತ ಮಾನ್ಯಖೇಟ ಎಂಬ ಹೊಸ ರಾಜಧಾನಿಯನ್ನು ನಿರ್ಮಿಸಿದನು.

* ಸಾಮಾನ್ಯ ಶಕ 851 ರಲ್ಲಿ ಹರ ಪ್ರವಾಸಿಗ ಸುಲೈಮಾನ್ ನೃಪತುಂಗನ ಆಸ್ಥಾನಕ್ಕೆ ಭೇಟಿ ನೀಡಿ ಅವನ ಸಾಮ್ರಾಜ್ಯವು ಅಂಜನ ಪ್ರಪಂಚದ ನಾಲ್ಕು ಖ್ಯಾತ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು ಎಂದು ಬಣ್ಣಿಸಿದ್ದಾನೆ.

* ಇವನ ಆಸ್ಥಾನ ಕವಿ ಶ್ರೀವಿಜಯ ಕವಿರಾಜಮಾರ್ಗ ಎಂಬ ಕನ್ನಡದ ಮೊಟ್ಟ ಮೊದಲ ಉಪಲಬ್ದ ಕೃತಿಯನ್ನು ರಚಿಸಿದನು.

* ಕವಿರಾಜ ಮಾರ್ಗದಲ್ಲಿ ಕರ್ನಾಟಕದ ವ್ಯಾಪ್ತಿಯನ್ನು ಕಾವೇರಿಯಿಂದ ಗೋದಾವರಿ ಪರಮಿರ್ಪ ನಾಡದಾ ಕದನದೋಳ್ ಜನಪದ ಎಂದು ವರ್ಣಿಸಿದೆ.

ಎರಡನೇ ಕೃಷ್ಣ ( ಸಾಮಾನ್ಯ ಶಕ 880-914).

* ಗೂರ್ಜರ ಪ್ರತಿಹಾರರ ಅರಸನಾದ ಭೋಜರಾಜನನ್ನು ಸೋಲಿಸಿದನು.

ಮೂರನೇ ಇಂದ್ರ ( ಸಾಮಾನ್ಯ ಶಕ 914-928).

* ರಾಷ್ಟ್ರಕೂಟರ ಸಾರ್ವಭೌಮತ್ವವನ್ನು ಉತ್ತರ ಭಾರತದಲ್ಲಿ ಪುನಃ ಸ್ಥಾಪಿಸಿದನು.

* ಇವನ ಆಸ್ಥಾನದಲ್ಲಿದ್ದ  ತ್ರಿವಿಕ್ರಮ ನಳಚಂಪು ಕೃತಿಯನ್ನು ರಚಿಸಿದನು. ಇದು ಪ್ರಥಮ ಸಂಸ್ಕೃತದ ಚಂಪು ಕಾವ್ಯ.

ಮೂರನೇ ಕೃಷ್ಣ ( ಸಾಮಾನ್ಯ ಶಕ 939-967).

* ಸಾಮಾನ್ಯ ಶೇಕು 949ರಲ್ಲಿ ನಡೆದ ತಕ್ಕೊಳಂ ಕದನದಲ್ಲಿ ಚೋಳರ ಅರಸನಾದ ಒಂದನೇ ಪರಾಂತಕ ಚೋಳನನ್ನು ಸೋಲಿಸಿದನು.

* ಇವನ ಆಸ್ಥಾನ ಕವಿ ಉಭಯ ಕವಿ ಚಕ್ರವರ್ತಿ ಎಂಬ ಬಿರುದು ಹೊಂದಿದ್ದ ಪೊನ್ನ ಶಾಂತಿಪುರಾಣ,ಭುವನೈಕ ರಾಮಾಭ್ಯುದಯ ಎಂಬ ಕೃತಿ ರಚಿಸಿದನು.

   -: ಆಡಳಿತ :-

* ರಾಷ್ಟ್ರವೆಂಬುದು ಭಾರತದ ಪ್ರಮುಖ ಘಟಕವಾಗಿದ್ದು, ಸಾಮ್ರಾಜ್ಯವನ್ನು ಅನೇಕ ವಿಭಾಗಗಳಾಗಿ ವಿಂಗಡಿಸಿದ್ದಾರೆ.

* ರಾಷ್ಟ್ರ , ವಿಷಯ, ನಾಡು, ಭುಕ್ತಿ ಎಂದು ವಿಭಾಗಿಸಲಾಗಿತ್ತು.

* ಕಳಸ, ಇಂಡಿ, ಸಾಲೋಟಗಿ ಅಂದಿನ ಪ್ರಮುಖ ಶಿಕ್ಷಣ ಕೇಂದ್ರಗಳಾಗಿದ್ದವು.

     -: ಸಾಹಿತ್ಯ :-

* ಹಲಾಯುಧ – ಕವಿರಹಸ್ಯ ಮತ್ತು ಮಿತ್ರ ಸಂಜೀವಿನಿ

* ಶಿವಕೋಟ್ಯಾಚಾರ್ಯ – ವಡ್ಡಾರಾಧನೆ

* ತ್ರಿವಿಕ್ರಮ – ನಳಚಂಪೂ, ಮದಲಸ ಚಂಪು

* ಮಹಾವೀರಚಾರ್ಯ – ಗಣಿತ ಸಾರಸಂಗ್ರಹ

* ಜಿನಸೇನಾಚಾರ್ಯ – ಹರಿವಂಶ

* ಪೊನ್ನ – ಶಾಂತಿಪುರಾಣ

* ಶ್ರೀ ವಿಜಯ – ಕವಿರಾಜಮಾರ್ಗ

  -: ಕಲೆ ಮತ್ತು ವಾಸ್ತು ಶಿಲ್ಪ :-

* ಎಲ್ಲೋರ ( ದಿ ವರ್ಲ್ಡ್ ಹೆರಿಟೇಜ್ ಸೈಟ್ ).

* ಈ ಸ್ಥಳ 1983 ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿತು.

* 16ನೇ ಗುಹೆ ಕೈಲಾಸನಾಥ ದೇವಾಲಯ ಬರುವ ಗುರಿಯಾಗಿದೆ ಇದನ್ನು ಒಂದನೇ ಕೃಷ್ಣ ನಿರ್ಮಿಸಿದನು.

* ಇವರ ಕಾಲದ ಪ್ರಮುಖ ಶಿಕ್ಷಣ ಕೇಂದ್ರಗಳು ಬಿಜಾಪುರದ ಇಂಡಿಯಾ, ಸಾಲೋಟಗಿ ಗ್ರಾಮ , ಹಾವೇರಿಯ ಕಳಸಾ, ಶಿವಮೊಗ್ಗದ ಬಳ್ಳಿಗಾವೆ .

* ಪಂಪನು ರಾಷ್ಟ್ರಕೂಟರ ಸಾಮಂತರವಾದ ವೇಮಲವಾಡ ಚಾಲುಕ್ಯರ ಎರಡನೇ ಅರಿಕೇಸರಿ ಆಸ್ಥಾನದಲ್ಲಿ ಇದ್ದನು.

ಕಲ್ಯಾಣದ ಚಾಲುಕ್ಯರು.

* ರಾಷ್ಟ್ರಕೂಟರ ಅವನತಿಯ ನಂತರ ಮಾನ್ಯಖೇಟವನ್ನು( ಎಲ್ಲೋರಾ) ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದರು.

* ರಾಜಧಾನಿ ಬೀದರ್ ಜಿಲ್ಲೆಯ ಬಸವಕಲ್ಯಾಣ

* ಸ್ಥಾಪಕ – ಎರಡನೇ ತೈಲಪ ಅಥವಾ ಇಮ್ಮಡಿ ತೈಲಪ

* ಲಾಂಛನ – ವರಾಹ

ಎರಡನೇ ತೈಲಪ ( ಸಾಮಾನ್ಯ ಶಕ 973-997).

* ಇಮ್ಮಡಿ ತೈಲಪ ಕಲ್ಯಾಣ ಚಾಲುಕ್ಯ ವಂಶದ ಸ್ಥಾಪಕ.

* ಇವನು ಬಾದಾಮಿ ಚಾಲುಕ್ಯರ ನಾಲ್ಕನೇ ವಿಕ್ರಮಾದಿತ್ಯನ ಮಗ.

ಸತ್ಯಶ್ರಯ ( ಸಾಮಾನ್ಯ ಶಕ 997-1008).

* ಇವನು ಚೋಳರನ್ನು ಹಿಮ್ಮೆಟ್ಟಿಸಿ ಇರಿವೆ ಬೆಡಂಗ ಎಂಬ ಬಿರುದು ಪಡೆದ.

* ಕನ್ನಡದ ಖ್ಯಾತ ಕವಿಯಾದ ರನ್ನನಿಗೆ ಆಶ್ರಯದಾತನಾಗಿದ್ದ.

* ರನ್ನನು ಸತ್ಯ ಆಶ್ರಯನನ್ನು  ಮಹಾಭಾರತದ ಭೀಮನಿಗೆ ಹೋಲಿಸಿದ್ದಾನೆ.

ಇಮ್ಮಡಿ ಜಯಸಿಂಹ ( ಸಾಮಾನ್ಯ ಶಕ 1015-1043).

* ಜಯಸಿಂಹನ ಆಸ್ಥಾನದಲ್ಲಿದ್ದ ದುರ್ಗಸಿಂಹನ ಪಂಚತಂತ್ರ ಎಂಬ ಕೃತಿಯನ್ನು ಕನ್ನಡದಲ್ಲಿ ರಚಿಸಿದ್ದಾನೆ.

* ಈತನ ಆಸ್ಥಾನದ ಕವಿ ವಾದಿರಾಜ ಸಂಸ್ಕೃತದಲ್ಲಿ ಪಾರ್ಶ್ವನಾಥ ಚರಿತೆ, ವಾದಿರಾಜ ಚರಿತೆ ಎಂಬ ಕೃತಿಯನ್ನು ರಚಿಸಿದನು.

ಒಂದನೇ ಸೋಮೇಶ್ವರ ( ಸಾಮಾನ್ಯ ಶಕ 1043-1068).

* ಇವನು ಹೊಸ ರಾಜಧಾನಿ ಕಲ್ಯಾಣವನ್ನು ಕಟ್ಟಿದ ಇದು ಪ್ರಸ್ತುತ ಬೀದರ್ ಜಿಲ್ಲೆಯಲ್ಲಿದೆ.

ಆರನೇ ವಿಕ್ರಮಾದಿತ್ಯ ( ಸಾಮಾನ್ಯ ಶಕ 1076-1127).

* ಕಲ್ಯಾಣ ಚಾಲುಕ್ಯರ ಮನೆತನದ ಪ್ರಸಿದ್ಧ ಅರಸ.

* ಸಾಮಾನ್ಯ ಶಕ 1076 ರಲ್ಲಿ ಎರಡನೇ ಸೋಮೇಶ್ವರನನ್ನು ಸೋಲಿಸಿ ಅಧಿಕಾರಕ್ಕೆ ಬಂದ ಈತ ಚಾಲುಕ್ಯ ವಿಕ್ರಮ ಶಕೆಯನ್ನು ಆರಂಭಿಸಿದನು.

* ಇವನ ಪ್ರಸಿದ್ಧ ದಂಡ ನಾಯಕ ದಂಡಾಧೀಶ.

ಸೈನಿಕ ಸಾಧನೆಗಳು.

* ಸಹೋದರ ನಾಲ್ಕನೇ ಜಯಸಿಂಹ ದಂಗೆ ಎದ್ದನು ಈ ದಂಗೆಯನ್ನು ಯಶಸ್ವಿಯಾಗಿ ಹತ್ತಿಕ್ಕಿ ಆತನನ್ನು ಕ್ಷಮಿಸಿ, ಬನವಾಸಿಯ ಪ್ರಾಂತ್ಯಾಧಿಕಾರಿಯಾಗಿ ಮಾಡಿದನು.

* ಜಗ ದೇವನ ಪರವಾಗಿ ಮತ್ತೊಮ್ಮೆ ಧಾರಾ ನಗರದ ಮೇಲೆ ದಾಳಿ ಮಾಡಿ ಜಗದೇವನಿಗೆ ಸಾಮ್ರಾಜ್ಯ ದೊರಕಿಸಿ ಕೊಟ್ಟರು.

* ಇವನ ದಂಡ ನಾಯಕ ದಂಡಾದೀನು( ಮಹಾದೇವ) ಇಟಗಿಯಲ್ಲಿ ಮಹಾದೇವ ದೇವಾಲಯ ನಿರ್ಮಿಸಿದನು ಇದನ್ನು “ದೇವಾಲಯಗಳ ಚಕ್ರವರ್ತಿ ” ಎಂದು ಕರೆಯಲಾಗಿದೆ.

* ಇವನ ಹೆಂಡತಿ ಚಂದ್ರಲೇಖ ನೃತ್ಯ- ಸಂಗೀತ ಪ್ರವೀಣೆಯಾಗಿದ್ದು ಅಭಿನವ ಸರಸ್ವತಿ ಎಂಬ ಬಿರುದು ಪಡೆದಿದ್ದಳು.

* ಈತನ ಆಸ್ಥಾನದಲ್ಲಿದ್ದ ಬಿಲ್ಹಣ ವಿಕ್ರಮಾಂಕ ದೇವ ಚರಿತಂ, ವಿಜ್ಞಾನೇಶ್ವರನ ಮಿತಾಕ್ಷರ ಸಂಹಿತೆ ಕೃತಿಯನ್ನು ರಚಿಸಿದನು.

* ವಿಜ್ಞಾನೇಶ್ವರನು – ತನ್ನ ಮಿತಾಕ್ಷರ ಸಂಹಿತೆ ಕೃತಿಯಲ್ಲಿ ” ಜಗತ್ತಿನಲ್ಲಿ ಕಲ್ಯಾಣದಂತಹ ನಗರವು ಹಿಂದಿರಲಿಲ್ಲ, ಮುಂದಿರಲಾರದು. ವಿಕ್ರಮಾದಿತ್ಯ ನಂತರ ರಾಜನನ್ನು ಕಂಡಿಲ್ಲ ಕೇಳಿಲ್ಲ” ಎಂದಿದ್ದಾನೆ.

ಮೂರನೇ ಸೋಮೇಶ್ವರ ( ಸಾಮಾನ್ಯ ಶಕ 1127-1137).

* ಈ ಮನೆತನದ ಶಾಂತಿ ಪ್ರಿಯ ಅರಸ.

* ಸ್ವತಃ ಸಾಹಿತಿಯಾಗಿದ್ದ ಈತ ಸಂಸ್ಕೃತದ ವಿಶ್ವಕೋಶ ಎಂದೇ ಕರೆಯಲ್ಪಡುವ ” ಮಾನಸೋಲ್ಲಾಸ ” ಅಥವಾ ” ಅಭಿಲಾಷಿತಾರ್ಥ ಚಿಂತಾಮಣಿ ” ಎಂಬ ಕೃತಿಯನ್ನು ರಚಿಸಿದನು.

ಮೂರನೇ ತೈಲಪ ( ಸಾಮಾನ್ಯ ಶಕ 1149-1162).

* ಈತನ ಕಾಲದಲ್ಲಿ ಎಂದರೆ ಸಾಮಾನ್ಯ ಶಕ 1157 ರಲ್ಲಿ ಕಲ್ಯಾಣವನ್ನು ಕಲಚೂರಿ ಮನೆತನದ ಅರಸನಾದ ಬಿಜ್ಜಳನು ಪಡೆದುಕೊಂಡಿದ್ದಕ್ಕಾಗಿ ಇವನ ಅವನತಿಯಾಯಿತು.

ನಾಲ್ಕನೇ ಸೋಮೇಶ್ವರ ( ಸಾಮಾನ್ಯ ಶಕ 1183-1189).

* ಕಲ್ಯಾಣ ಚಾಲುಕ್ಯರ ಕೊನೆಯ ದೊರೆ.

  -: ಆಡಳಿತ :-

* ಕಲ್ಯಾಣಿ ಚಾಲುಕ್ಯರು ಬಾದಾಮಿ ಚಾಲುಕ್ಯರ ಆಡಳಿತ ವ್ಯವಸ್ಥೆಯನ್ನು ಹೋಲುವಂತಹ ಆಡಳಿತ ಪದ್ಧತಿಯನ್ನು ರೂಪಿಸಿದರು.

* ದಾಸಿವೇರ್ಗಡೆ – ಅರಮನೆಯ ಪಾರುಪತ್ಯಗಾರ

* ಖಾನಸವೇರ್ಗಡೆ – ಉಗ್ರಾಣ ಪಾರುಪತ್ಯಗಾರ

* ಅಂತಃಪುರಾಧ್ಯಕ್ಷ – ಅಂತಪುರದ ಮೇಲ್ವಿಚಾರಕ

 -: ಆಡಳಿತ ವಿಂಗಡನೆ :-

* ರಾಷ್ಟ್ರ ರಾಷ್ಟ್ರಪತಿ, ವಿಷಯ ವಿಷಯ ಪತಿ, ನಾಡು ನಾಡ ರಸ, ಧಾನ ಗ್ರಾಮ ಕೂಟ.

-: ಕಲ್ಯಾಣಿ ಚಾಲುಕ್ಯರ ಸಾಂಸ್ಕೃತಿಕ ಕೊಡುಗೆಗಳು :-

* ಬಿಲ್ಹಣ – ವಿಕ್ರಮಂಕದೇವಚರಿತಂ

* ವಾದಿರಾಜ – ಪಾರ್ಶ್ವನಾಥ ಚರಿತೆ, ಯಶೋಧರ ಚರಿತೆ.

* ಬಸವಣ್ಣ ವಚನಗಳು

* ನಾಗಚಂದ್ರ – ಮಲ್ಲಿನಾಥ ಪುರಾಣ, ರಾಮಚಂದ್ರಚರಿತಪುರಾಣ

* ರನ್ನ – ಅಜಿತಪುರಾಣ, ಸಾಹಸಭೀಮ ವಿಜಯ ಅಥವಾ ಗದಾಯುದ್ಧ , ಪರಶುರಾಮ ಚರಿತೆ, ಚಕ್ರೇಶ್ವರ ಚರಿತೆ, ರನ್ನ ಕಂದ

* ಒಂದನೇ ನಾಗವರ್ಮ – ಕರ್ನಾಟಕ ಕಾದಂಬರಿ, ಛಂದೋಬುಧಿ

* ಎರಡನೇ ಚಾವುಂಡರಾಯ – ಲೋಕೋಪಕಾರಿ

* ಶ್ರೀಧರಾಚಾರ್ಯ – ಜಾತಕ ತಿಲಕ

* ಎರಡನೇ ನಾಗವರ್ಮ – ಕಾವ್ಯಾವಲೋಕನ ಭಾಷ ಭೂಷಣ ಅಭಿದಾನಿವಸ್ತುಕೋಶ

* ದುರ್ಗಸಿಂಹ – ಪಂಚತಂತ್ರ

* ನಯಸೇನಾ – ಧರ್ಮಾಮೃತ

 

WhatsApp Group Join Now
Telegram Group Join Now

1 thought on “ರಾಷ್ಟಕೂಟರು ಮತ್ತು ಕಲ್ಯಾಣಿ ಚಾಲುಕ್ಯರು. TET,GPSTR,HSTR,PDO All Competative exam notes.”

  1. Good information about rashtra kootaru and kalyani chalukyaru… iam really very exited to watch some more details about Karnataka’s history ..

    Reply

Leave a Comment