B.COM:ಬಿಕಾಂ(B.COM) ಪದವೀಧರರಿಗೆ ಶಿಕ್ಷಕ ಕನಸು ಭಗ್ನ|ಟಿಇಟಿ ಮಾಡಿದರೂ ನೇಮಕಾತಿಗೆ ಪರಿಗಣಿಸದ ಸರಕಾರ.

B.COM:ಬಿಕಾಂ(B.COM) ಪದವೀಧರರಿಗೆ ಶಿಕ್ಷಕ ಕನಸು ಭಗ್ನ|ಟಿಇಟಿ ಮಾಡಿದರೂ ನೇಮಕಾತಿಗೆ ಪರಿಗಣಿಸದ ಸರಕಾರ.

B.COM

B.COM:ಬಿಕಾಂ, ಎಂಕಾಂ ಪದವಿ ನಂತರ ಬಿಇಡಿ ಮಾಡಿ ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಪಾಸಾದರೂ ಅವರಿಗೆ ಶಿಕ್ಷಕರಾಗುವ ಅವಕಾಶ ಸರಕಾರ ನೀಡಿಲ್ಲ. ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿಯಲ್ಲಿ ಇವರನ್ನು ಪರಿಗಣಿಸದೆ ಇರುವ ಕಾರಣಕ್ಕೆ ರಾಜ್ಯಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಹತ್ತಾರು ವರ್ಷಗಳಿಂದ ತ್ರಿಶಂಕು ಸ್ಥಿತಿಯಲ್ಲಿನರಳುತ್ತಿದ್ದಾರೆ.

ಬಿಕಾಂ, ಎಂಕಾಂ ನಂತರ ಬಿಇಡಿ ಪೂರೈಸಿರುವವರನ್ನು ಅತಿಥಿ ಶಿಕ್ಷಕರಾಗಿ ನೇಮಿಸಿಕೊಳ್ಳುತ್ತದೆ. ಆದರೆ ಸರಕಾರಿ ನೇಮಕಾತಿಗೆ ಮಾತ್ರ ಅವಕಾಶವಿಲ್ಲ. ಸಿಆರ್ (ಕೇಡರ್ ರೆಕ್ರುಟ್‌ ಮೆಂಟ್) ರೂಲ್ ತಿದ್ದುಪಡಿ ಮಾಡಿ ನೇಮಕಾತಿ ಯಲ್ಲಿ ಅವಕಾಶ ನೀಡಬೇಕೆಂದು ಒತ್ತಾಯಿಸಿದರೂ ಸರಕಾರ ಗಂಭೀರವಾಗಿ ತೆಗೆದುಕೊಳ್ಳದ ಕಾರಣ. ಈ ಪದವೀಧರರು ನಿರುದ್ಯೋಗಿಗಳಾಗುತ್ತಿದ್ದಾರೆ. ಈಗ ಸರಕಾರ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಸಿದ್ಧತೆ ನಡೆದಿದೆ ಎಂದು ಶಿಕ್ಷಣ ಸಚಿವರು ಹೇಳುತ್ತಿದ್ದು, ಈ ಗಂಭೀರ ವಿಷಯದ ಬಗ್ಗೆಯೂ ಗಮನ ಹರಿಸಬೇಕು ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.

ಬಿಇಡಿಗೆ ಅವಕಾಶ, ನೇಮಕಾತಿಗೆ ಇಲ್ಲ?

‘ಬಿಕಾಂ,ಎಂಜಿನಿಯರಿಂಗ್ ಪದವೀಧರರಿಗೆ 2015ರಲ್ಲಿ ಸರಕಾರ ಬಿಇಡಿ ಮಾಡಲು ಅವಕಾಶ ನೀಡಿತು. ನಂತರ 2020ರಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆಯಲು ಕೂಡ ಅವಕಾಶ ನೀಡಿದೆ. ಆದರೆ ಶಿಕ್ಷಕರ ನೇಮಕಾತಿಗೆ ಮಾತ್ರ ಪರಿಗಣಿಸುತ್ತಿಲ್ಲ. ಬಿಕಾಂ ಪದವೀಧರರು ಬಿಇಡಿನಲ್ಲಿ ಇಂಗ್ಲಿಷ್ ಹಾಗೂ ಸಮಾಜ ವಿಜ್ಞಾನವನ್ನೂ ಎರಡು ಮುಖ್ಯ ವಿಷಯವನ್ನಾಗಿ ಅಯ್ಕೆ ಮಾಡಿಕೊಂಡು ಓದಿರುತ್ತಾರೆ. ತರಬೇತಿ ಅವಧಿಯಲ್ಲೂ ಇಂಗ್ಲಿಷ್ ಮತ್ತು ಸಮಾಜ ವಿಜ್ಞಾನ ಬೋಧಿಸುತ್ತೇವೆ, ಅದಕ್ಕೆ ಅಂಕಗಳನ್ನು ಕೂಡ ಪಡೆಯುತ್ತೇವೆ. ಮೂರು ವರ್ಷ ಬಿಕಾಂ ಪದವಿ ಮಾಡುವಾಗ ಅರ್ಥಶಾಸ್ತ್ರ, ವಾಣಿಜ್ಯ ಶಾಸ್ತ್ರ ಅಧ್ಯಯನ ಮಾಡಿರುತ್ತೇವೆ. ನಂತರ 2 ವರ್ಷ ಬಿಇಡಿ ಮಾಡುತ್ತೇವೆ. ಆದರೂ ಶಿಕ್ಷಕಾಗುವ ಕನಸಿಗೆ ಈ ಓದು ಸಾರ್ಥಕತೆ ಇಲ್ಲದಂತಾಗಿದೆ. ಸಮಾಜ ವಿಜ್ಞಾನ ವಿಷಯದಲ್ಲಿ ವ್ಯವಹಾರ ಅಧ್ಯಯನ ಪಠ್ಯ ಇದೆ, ಇದರ ಬೋಧನೆಗಾದರೂ ನಮ್ಮನ್ನು ನೇಮಿಸಿಕೊಳ್ಳಬೇಕಿತ್ತು,” ಎನ್ನುವುದು ಇವರ ವಾದ.

ಈ ಹಿಂದೆ ಪಿಯು ಕಾಲೇಜು ಉಪನ್ಯಾಸಕರಾಗಲು ಬಿಇಡಿ ಕಡ್ಡಾಯ ಮಾಡಲಾಗಿತ್ತು. ಆಗ ಬಿಕಾಂ ಮಾಡಿದವರಿಗೆ ಬಿಇಡಿ ಮಾಡಲು ಅವಕಾಶ ನೀಡಲಾಯಿತು ಅಷ್ಟೇ ಎಂದು ಬಿಇಡಿ ಕಾಲೇಜು ಉಪನ್ಯಾಸಕರೊಬ್ಬರು ಹೇಳುತ್ತಾರೆ. ಆದರೆ ಬಿಕಾಂ ಮೇಲೆ ಬಿಇಡಿ ಮಾಡಿದವರ ನೇಮಕಾತಿಗೆ ಇರುವ ಅಡ್ಡಿಗಳನ್ನು ಸರಕಾರ ನಿವಾರಿಸಬೇಕು. ಶಿಕ್ಷಕರಾಗುವ ಎಲ್ಲ ಶಿಕ್ಷಣ, ಅರ್ಹತೆ ಪಡೆದುಕೊಂಡಿರುವ ಪದವೀಧರರ ಶಿಕ್ಷಕರಾಗುವ ಕನಸನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

WhatsApp Group Join Now
Telegram Group Join Now