Internal reservation:ಸರ್ಕಾರಿ ನೇಮಕಾತಿ ಮತ್ತು ಬಡ್ತಿ ಪುನರಾರಂಭಕ್ಕೆ ಸುಗಮ ಹಾದಿ.ಒಳಮೀಸಲಾತಿ(Internal reservation) ಸಮೀಕ್ಷಾ ವರದಿ ಇಂದು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ.
Internal reservation:ಶಿಕ್ಷಣ ಹಾಗೂ ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟಜಾತಿ(ST)ಯಲ್ಲಿ ಒಳಮೀಸಲಾತಿ ಕಲ್ಪಿಸಲು ಉಪಪಂಗಡಗಳ ಅಂಕಿ-ಅಂಶಗಳ ಸಮೀಕ್ಷೆಗಾಗಿ ರಾಜ್ಯ ಸರ್ಕಾರ ರಚಿಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ಎಚ್.ಎನ್.ನಾಗಮೋಹನ ದಾಸ್ನೇತೃತ್ವದ ಏಕಸದಸ್ಯ ಆಯೋಗ ಸೋಮವಾರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ.
ವಿಧಾನಸೌಧದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಯೋಗ ತನ್ನ ವರದಿ ಸಲ್ಲಿಸಲಿದೆ.
ಒಳಮೀಸಲಾತಿ ಹಿನ್ನೆಲೆಯಲ್ಲಿ ಸರ್ಕಾರದ ವಿವಿಧ ಇಲಾಖಾ ನೇಮಕಾತಿಗಳು, ಬಡ್ತಿ ವಿಚಾರಗಳಿಗೆ ಕೆಲವು ತಿಂಗಳಿಂದ ತಡೆಬಿದ್ದಿದೆ.
• ಪರಿಶಿಷ್ಟ ಜಾತಿಯಲ್ಲಿ ಒಳಮೀಸಲು ಕಲ್ಪಿಸಲು ಉಪಪಂಗಡಗಳ ಅಂಕಿ-ಅಂಶ ಸಮೀಕ್ಷೆಗೆ ರಚನೆಯಾಗಿದ್ದ ಆಯೋಗ
• ಒಳಪಂಗಡಗಳ ವಿಸ್ತ್ರತ ಸಮೀಕ್ಷೆ ನಡೆಸಿರುವ ನ್ಯಾ. ನಾಗಮೋಹನ ದಾಸ್ ಆಯೋಗ
• ಒಳಮೀಸಲು ಕಾರಣ ರಾಜ್ಯದಲ್ಲಿ ಸದ್ಯ ಸ್ಥಗಿತ ಆಗಿರುವ ಹೊಸ ನೇಮಕಾತಿ, ಬಡ್ತಿ ಪ್ರಕ್ರಿಯೆ
• ವರದಿ ಸಲ್ಲಿಕೆಯಾದರೆ ಆ ಪ್ರಕ್ರಿಯೆಗಳು ಪುನಾರಂಭ ಸಾಧ್ಯತೆ. 20 ದಿನದಲ್ಲೇ ಒಳಮೀಸಲು ಜಾರಿ ಆಗುವ ನಿರೀಕ್ಷೆ
• ಆಗದಿದ್ರೆ ಒಳಮೀಸಲು ಬೇಡಿಕೆ ತೀವ್ರ ಸಾಧ್ಯತೆ. ವರದಿ ಅಂಕಿ-ಅಂಶಗಳ ಬಗ್ಗೆಯೂ ಕುತೂಹಲ