PM Kusum Yojana:ಪಿಎಂ ಕುಸುಮ್‌ ಯೋಜನೆ(PM Kusum Yojana) ಸೋಲಾರ್‌ ಪಂಪ್‌ಸೆಟ್‌ ಅಳವಡಿಕೆಗೆ ಸಿಗಲಿದೆ ಶೇ.60ಷ್ಟು ಸಹಾಯಧನ ಹಾಗೂ 30% ಸಾಲ ಸೌಲಭ್ಯ; ಅರ್ಜಿ ಸಲ್ಲಿಕೆ ಹೇಗೆ?

PM Kusum Yojana:ಪಿಎಂ ಕುಸುಮ್‌ ಯೋಜನೆ(PM Kusum Yojana) ಸೋಲಾರ್‌ ಪಂಪ್‌ಸೆಟ್‌ ಅಳವಡಿಕೆಗೆ ಸಿಗಲಿದೆ ಶೇ.60ಷ್ಟು ಸಹಾಯಧನ ಹಾಗೂ 30% ಸಾಲ ಸೌಲಭ್ಯ; ಅರ್ಜಿ ಸಲ್ಲಿಕೆ ಹೇಗೆ?

Table of Contents

PM Kusum Yojana

PM Kusum Yojana:ರೈತರು ನೀರಾವರಿಗಾಗಿ ತಮ್ಮ ಪಂಪ್‌ಸೆಟ್‌ಗಳಿಗೆ ಡೀಸೆಲ್‌ ಮತ್ತು ಸಾಂಪ್ರದಾಯಿಕ ವಿದ್ಯುತ್‌ಶಕ್ತಿಯ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ಅನ್ನದಾತರಿಗೆ ಅಗ್ಗದ ದರದಲ್ಲಿ ಸೌರ ವಿದ್ಯುತ್‌ ದೊರೆಯುವಂತೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ್ (ಪಿಎಂ-ಕುಸುಮ್ ಯೋಜನೆ) ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ ಸ್ವತಂತ್ರ ಸೌರ ಪಂಪ್‌ಗಳನ್ನು ಸ್ಥಾಪಿಸಲು ಹಾಗೂ ಅಸ್ತಿತ್ವದಲ್ಲಿರುವ ಗ್ರಿಡ್-ಸಂಪರ್ಕಿತ ಕೃಷಿ ಪಂಪ್‌ಗಳನ್ನು ಸೌರಶಕ್ತಿಗೆ ಅಳವಡಿಸಲು ಸಹಾಯಧನವನ್ನು ಒದಗಿಸಲಾಗುತ್ತದೆ. ಹಾಗಿದ್ದರೆ ಏನಿದು ಪ್ರಧಾನ ಮಂತ್ರಿ ಕುಸುಮ್‌ ಯೋಜನೆ? ಅದರ ಉದ್ದೇಗಳು ಏನು? ಸರ್ಕಾರದಿಂದ ಸಹಾಧನ ಪಡೆಯುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ  ತಿಳಿಯೋಣ ಬನ್ನಿ..

ಏನಿದು ಪಿಎಂ ಕುಸುಮ್‌ ಯೋಜನೆ(PM Kusum Yojana).

ಕೃಷಿಗಾಗಿ ಸೌರ ನೀರಾವರಿ ಪಂಪ್‌ಗಳನ್ನು ಅಳವಡಿಸಿಕೊಳ್ಳುವ ಅನ್ನದಾತರಿಗೆ ಸಬ್ಸಿಡಿ ನೀಡಲು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯವು 2019ರ ಮಾರ್ಚ್‌ನಲ್ಲಿ ಪಿಎಂ ಕುಸುಮ್ ಯೋಜನೆ(PM Kusum Yojana) ಪ್ರಾರಂಭಿಸಿದೆ. ಕೊಳವೆ ಬಾವಿಗಳು ಹಾಗೂ ಪಂಪ್ ಸೆಟ್‌ಗಳನ್ನು ಸ್ಥಾಪಿಸಲು ಪ್ರತಿ ರೈತರಿಗೂ ಶೇಕಡಾ 60ರಷ್ಟು ಸಹಾಯಧನ ದೊರೆಯುತ್ತದೆ. ರೈತರು ಒಟ್ಟು ವೆಚ್ಚದ ಶೇಕಡಾ 30ರಷ್ಟನ್ನು ಸರ್ಕಾರದಿಂದ ಸಾಲವಾಗಿ ಪಡೆಯುತ್ತಾರೆ. ಇದು 3 ಘಟಕಗಳನ್ನು ಹೊಂದಿದೆ. ವಿಕೇಂದ್ರೀಕೃತ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವುದು, ಸ್ವತಂತ್ರ ಸೌರ ಪಂಪ್‌ಗಳನ್ನು ಸ್ಥಾಪಿಸುವುದು ಹಾಗೂ ಅಸ್ತಿತ್ವದಲ್ಲಿರುವ ಗ್ರಿಡ್-ಸಂಪರ್ಕಿತ ಪಂಪ್‌ಗಳನ್ನು ಸೌರಶಕ್ತಿಗೊಳಿಸುವುದು. ಭಾರತ ಸರ್ಕಾರದ ಪಿಎಂ-ಕುಸುಮ್ ಯೋಜನೆ(PM Kusum Yojana)ಯೂ 35 ಲಕ್ಷಕ್ಕೂ ಹೆಚ್ಚು ರೈತರಿಗೆ ಶುದ್ಧ ಶಕ್ತಿಯನ್ನು ಒದಗಿಸುವ ವಿಶ್ವದ ಅತಿದೊಡ್ಡ ಉಪಕ್ರಮಗಳಲ್ಲಿ ಒಂದಾಗಿದೆ.

PM Kusum Yojana:ಯೋಜನೆಯ ಉದ್ದೇಶಗಳೇನು?

ಸೌರ ಪಂಪ್‌ಗಳು ನಮ್ಮ ಅನ್ನದಾತರಿಗೆ ಹೆಚ್ಚು ಪರಿಣಾಮಕಾರಿ ಹಾಗೂ ಪರಿಸರ ಸ್ನೇಹಿ ನೀರಾವರಿಯಲ್ಲಿ ಸಹಾಯ ಮಾಡುತ್ತವೆ ಏಕೆಂದರೆ ಇವು ಸುರಕ್ಷಿತ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಇದರ ಜೊತೆಗೆ, ಪಂಪ್ ಸೆಟ್‌ಗಳು ಡೀಸೆಲ್ ಚಾಲಿತ ಪಂಪ್‌ಗಳಿಗಿಂತ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುವ ಇಂಧನ ವಿದ್ಯುತ್ ಗ್ರಿಡ್ ಅನ್ನು ಒಳಗೊಂಡಿರುತ್ತವೆ. ಅನ್ನದಾತರು ತಮ್ಮ ಆದಾಯವನ್ನು ಹೆಚ್ಚಿಸಲು ಹೆಚ್ಚುವರಿ ಶಕ್ತಿಯನ್ನು ನೇರವಾಗಿ ನಮ್ಮ ಸರ್ಕಾರಕ್ಕೆ ಮಾರಾಟ ಮಾಡಲು ಸಾಧ್ಯವಾಗುತ್ತದೆ.

ಕುಸುಮ್ ಯೋಜನೆ(PM Kusum Yojana)ಯ 3 ಘಟಕಗಳು.

ಕುಸುಮ್ ಯೋಜನೆಯು ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿರುವ 3 ಘಟಕಗಳನ್ನು ಒಳಗೊಂಡಿದೆ:

1. ಘಟಕ- A:- ಬಂಜರು ಭೂಮಿಯಲ್ಲಿ 10,000 ಮೆಗಾವ್ಯಾಟ್ ವಿಕೇಂದ್ರೀಕೃತ ಗ್ರಿಡ್ ಸಂಪರ್ಕಿತ ನವೀಕರಿಸಬಹುದಾದ ಇಂಧನ ವಿದ್ಯುತ್ ಸ್ಥಾವರಗಳನ್ನು ಅಳವಡಿಸುವುದು. ಈ ಘಟಕದ ಅಡಿಯಲ್ಲಿ, 500 kW ನಿಂದ 2 MW ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಆಧಾರಿತ ವಿದ್ಯುತ್ ಸ್ಥಾವರಗಳನ್ನು ವೈಯಕ್ತಿಕ ರೈತರು/ ರೈತರ ಗುಂಪು/ ಸಹಕಾರಿ ಸಂಸ್ಥೆಗಳು/ ಪಂಚಾಯತ್‌ಗಳು/ ರೈತ ಉತ್ಪಾದಕ ಸಂಸ್ಥೆಗಳು (FPO)/ ನೀರು ಬಳಕೆದಾರ ಸಂಘಗಳು ಬಂಜರು/ ಪಾಳು ಭೂಮಿಯಲ್ಲಿ ಅಳವಡಿಸಬಹುದಾಗಿದೆ. ಈ ವಿದ್ಯುತ್ ಸ್ಥಾವರಗಳನ್ನು ಕೃಷಿಯೋಗ್ಯ ಭೂಮಿಯಲ್ಲಿಯೂ ಸ್ಥಾಪಿಸಬಹುದು. ಅಲ್ಲಿ ಸೌರ ಫಲಕಗಳ ಕೆಳಗೆ ಬೆಳೆಗಳನ್ನು ಬೆಳೆಯಬಹುದು. ಉಪ-ಪ್ರಸರಣ ಮಾರ್ಗಗಳ ಹೆಚ್ಚಿನ ವೆಚ್ಚವನ್ನು ತಪ್ಪಿಸಲು ಹಾಗೂ ಪ್ರಸರಣ ನಷ್ಟವನ್ನು ಕಡಿಮೆ ಮಾಡಲು ನವೀಕರಿಸಬಹುದಾದ ಇಂಧನ ವಿದ್ಯುತ್ ಯೋಜನೆಯನ್ನು ಉಪ-ಕೇಂದ್ರಗಳ 5 ಕಿಮೀ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗುತ್ತದೆ. ಉತ್ಪಾದಿಸುವ ವಿದ್ಯುತ್ ಅನ್ನು ಸ್ಥಳೀಯ DISCOM ಪೂರ್ವ-ನಿಗದಿತ ದರದಲ್ಲಿ ಖರೀದಿಸುತ್ತದೆ.

2. ಘಟಕ- B:- ಇದು 17.50 ಲಕ್ಷ ಸ್ವತಂತ್ರ ಸೌರ ಕೃಷಿ ಪಂಪ್‌ಗಳ ಸ್ಥಾಪಿಸುತ್ತದೆ. ಈ ಘಟಕದ ಅಡಿಯಲ್ಲಿ ಗ್ರಿಡ್ ಸರಬರಾಜು ಲಭ್ಯವಿಲ್ಲದ ಆಫ್-ಗ್ರಿಡ್ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಡೀಸೆಲ್ ಕೃಷಿ ಪಂಪ್‌ಗಳು / ನೀರಾವರಿ ವ್ಯವಸ್ಥೆಗಳನ್ನು ಬದಲಾಯಿಸಲು 7.5 HP ವರೆಗಿನ ಸಾಮರ್ಥ್ಯದ ಸ್ವತಂತ್ರ ಸೌರ ಕೃಷಿ ಪಂಪ್‌ಗಳನ್ನು ಸ್ಥಾಪಿಸಲು ವೈಯಕ್ತಿಕ ರೈತರಿಗೆ ಬೆಂಬಲ ನೀಡಲಾಗುವುದು. 7.5 HP ಗಿಂತ ಹೆಚ್ಚಿನ ಸಾಮರ್ಥ್ಯದ ಪಂಪ್‌ಗಳನ್ನು ಸಹ ಸ್ಥಾಪಿಸಬಹುದು. ಆದಾಗ್ಯೂ, ಹಣಕಾಸಿನ ಬೆಂಬಲವನ್ನು 7.5 HP ಸಾಮರ್ಥ್ಯಕ್ಕೆ ಸೀಮಿತಗೊಳಿಸಲಾಗುತ್ತದೆ.

3. ಘಟಕ-C:- 10 ಲಕ್ಷ ಗ್ರಿಡ್ ಸಂಪರ್ಕಿತ ಕೃಷಿ ಪಂಪ್‌ಗಳ ಸೌರ ಶಕ್ತಿ ಚಾಲಿತಗೊಳಿಸುವುದು ಇದರ ಉದ್ದೇಶವಾಗಿದೆ. ಈ ಘಟಕದ ಅಡಿಯಲ್ಲಿ ಗ್ರಿಡ್ ಸಂಪರ್ಕಿತ ಕೃಷಿ ಪಂಪ್ ಹೊಂದಿರುವ ವೈಯಕ್ತಿಕ ಅನ್ನದಾತರಿಗೆ ಸೌರೀಕರಣ ಪಂಪ್‌ಗಳಿಗೆ ಬೆಂಬಲ ನೀಡಲಾಗುವುದು. ನೀರಾವರಿ ಅಗತ್ಯಗಳನ್ನು ಪೂರೈಸಲು ರೈತರು ಉತ್ಪಾದಿಸಿದ ಸೌರಶಕ್ತಿಯನ್ನು ಬಳಸಲು ಸಾಧ್ಯವಾಗುತ್ತದೆ ಹಾಗೂ ಹೆಚ್ಚುವರಿ ಸೌರಶಕ್ತಿಯನ್ನು DISCOM ಗಳಿಗೆ ಪೂರ್ವ-ನಿಗದಿತ ಸುಂಕದಲ್ಲಿ ಮಾರಾಟ ಮಾಡಲಾಗುತ್ತದೆ.

ಪಿ ಎಂ ಕುಸಮ್‌ ಯೋಜನೆ(PM Kusum Yojana)ಯ ಪ್ರಯೋಜನಗಳು.

• ಈ ಯೋಜನೆಯಡಿಯಲ್ಲಿ ಸರ್ಕಾರವು 60% ಸಬ್ಸಿಡಿ ನೀಡುತ್ತದೆ ಮತ್ತು ಒಟ್ಟು ವೆಚ್ಚದ 30% ಸಾಲವನ್ನು ನೀಡುತ್ತದೆ. ಇದು ನಮ್ಮ ರೈತರು ಸೌರ ಸ್ಥಾವರಗಳು ಹಾಗೂ ಸೌರ ಪಂಪ್‌ಗಳನ್ನು ಸ್ಥಾಪಿಸಲು ಒಟ್ಟು ವೆಚ್ಚದ 10% ಅನ್ನು ಮಾತ್ರ ಭರಿಸುವಂತೆ ಮಾಡುತ್ತದೆ.
• ಸರ್ಕಾರವು ಅತ್ಯಾಧುನಿಕ ಸೌರ ಪಂಪ್‌ಗಳನ್ನು ಸ್ಥಾಪಿಸಲು ಸಬ್ಸಿಡಿಗಳನ್ನು ನೀಡುತ್ತದೆ. ಅವು 720MV ಸಾಮರ್ಥ್ಯವನ್ನು ಹೊಂದಿರುವುದರಿಂದ ಅವು ನೀರಾವರಿಯನ್ನು ಸುಧಾರಿಸುತ್ತವೆ.
• ಈ ಯೋಜನೆಯು ನಮ್ಮ ಅನ್ನದಾತರಿಗೆ ಘಟಕಗಳಿಂದ ಉತ್ಪಾದಿಸುವ ಹೆಚ್ಚುವರಿ ಶಕ್ತಿಯನ್ನು ನೇರವಾಗಿ ನಮ್ಮ ಸರ್ಕಾರಕ್ಕೆ ಮಾರಾಟ ಮಾಡುವ ಅವಕಾಶವನ್ನು ಸಹ ನೀಡುತ್ತದೆ. ಇದು ನಮ್ಮ ಅನ್ನದಾತರ ಆದಾಯದಲ್ಲಿ ಹೆಚ್ಚಳದ ವ್ಯಾಪ್ತಿಯನ್ನು ಖಚಿತಪಡಿಸುತ್ತದೆ.
• ಗ್ರಾಮೀಣ ಪ್ರದೇಶದ ಭೂಮಾಲೀಕರು 25 ವರ್ಷಗಳ ಕಾಲ ಸೌರ ಸ್ಥಾವರ ಅನುಷ್ಠಾನಕ್ಕಾಗಿ ಬಂಜರು ಹಾಗೂ ಕೃಷಿ ಮಾಡದ ಭೂಮಿಯನ್ನು ಬಳಸುವ ಮೂಲಕ ಸ್ಥಿರವಾದ ಆದಾಯದ ಮೂಲವನ್ನು ಪಡೆಯಬಹುದು.
• ಕೃಷಿ ಭೂಮಿಯಲ್ಲಿ ಕನಿಷ್ಠ ಎತ್ತರಕ್ಕಿಂತ ಹೆಚ್ಚಿನ ಎತ್ತರದಲ್ಲಿ ಸೌರ ಸ್ಥಾವರಗಳನ್ನು ಸ್ಥಾಪಿಸಲಾಗುತ್ತದೆ. ಈ ರೀತಿಯಾಗಿ, ನಮ್ಮ ಅನ್ನದಾತರು ಸೌರ ಘಟಕವನ್ನು ಸ್ಥಾಪಿಸಿದ ನಂತರ ಕೃಷಿಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ.
• ಕುಸುಮ್ ಯೋಜನೆಯು(PM Kusum Yojana) ನವೀಕರಿಸಬಹುದಾದ ಇಂಧನದ ಬಳಕೆಯನ್ನು ಹೆಚ್ಚಿಸುವುದರಿಂದ ಕೃಷಿ ಭೂಮಿಯಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೂ ಪರಿಸರ ಸ್ನೇಹಿ ಕೃಷಿಗೆ ಒಂದು ಹೆಬ್ಬಾಗಿಲು ತೆರೆಯುತ್ತದೆ ಎಂದು ಖಚಿತಪಡಿಸುತ್ತದೆ.

ಕರ್ನಾಟಕದಲ್ಲಿ ಕುಸುಮ್‌ ಸಿ ಯೋಜನೆ(PM Kusum Yojana) ಅನುಷ್ಠಾನ.

ಕೇಂದ್ರ ಸರ್ಕಾರದ ಕುಸುಮ್‌ ಯೋಜನೆಯಡಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ಸಮರ್ಪಕ ವಿದ್ಯುತ್‌ ಪೂರೈಸುವ ‘ಕುಸುಮ್‌ ಸಿ’ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಈ ಯೋಜನೆ ಮೂಲಕ 2 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಗುರಿಯನ್ನು ಹೊಂದಲಾಗಿದೆ. ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಹೋಬಳಿಯ ಹನುಮೇನಹಳ್ಳಿ ಮತ್ತು ಚರಕಮಟ್ಟೇನಹಳ್ಳಿಯ 60 ಎಕರೆ ಪ್ರದೇಶದಲ್ಲಿ 20 ಮೆಗಾ ವ್ಯಾಟ್‌ ಸಾಮರ್ಥ್ಯದ ಸೌರ ಘಟಕ ಸ್ಥಾಪಿಸಲಾಗಿದೆ. ಇಲ್ಲಿ ಖಾಸಗಿ ಜಮೀನನ್ನು 25 ವರ್ಷಕ್ಕೆ ಭೋಗ್ಯಕ್ಕೆ ಪಡೆಯಲಾಗಿದೆ. ರಾಜ್ಯದಲ್ಲಿ ಸದ್ಯ ‘ಕುಸುಮ್‌ – ಸಿ'( Kusum – CYojana) ಯೋಜನೆಯಡಿ ಸ್ಥಾಪಿಸಿರುವ ಅತಿ ದೊಡ್ಡ ಘಟಕ ಇದಾಗಿದೆ. ನೀರಾವರಿಗೆ ವಿದ್ಯುತ್‌ ಪೂರೈಸುವ ಫೀಡರ್‌ಗಳ ಬಳಿ ಸೌರ ವಿದ್ಯುತ್‌ ಘಟಕಗಳನ್ನು ಸ್ಥಾಪಿಸಿ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಬಳಿಕ ಫೀಡರ್‌ಗಳ ಮೂಲಕ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಸುವುದು ಯೋಜನೆಯ ಉದ್ದೇಶವಾಗಿದೆ. ಇದರಿಂದ ಉತ್ಪಾದನೆ ಆಗುವ ವಿದ್ಯುತ್‌ ಅನ್ನು ಪ್ರತಿ ಯುನಿಟ್‌ಗೆ 3.17 ರೂ. ದರದಲ್ಲಿ ಸರ್ಕಾರ ರೈತರಿಗೆ ನೀಡಲಿದೆ.

ಯಾರೆಲ್ಲಾ ಪಿಎಂ ಕುಸುಮ್‌ ಯೋಜನೆ(PM Kusum Yojana)ಗೆ ಅರ್ಹರು?

ವೈಯಕ್ತಿಕ ರೈತರು
• ರೈತರ ಗುಂಪು
• ಎಫ್‌ಪಿಒ ಅಥವಾ ರೈತ ಉತ್ಪಾದಕ ಸಂಸ್ಥೆಗಳು
• ಪಂಚಾಯತ್‌ಗಳು
• ಸಹಕಾರ ಸಂಘಗಳು
• ನೀರು ಬಳಕೆದಾರರ ಸಂಘಗಳು

ಕುಸುಮ್‌ ಯೋಜನೆ(PM Kusum Yojana)ಗೆ ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ರೈತರು ಕೆಳಗೆ ತಿಳಿಸಲಾದ ಕಾರ್ಯವಿಧಾನಗಳನ್ನು ಅನುಸರಿಸುವ ಮೂಲಕ KUSUM ಯೋಜನೆಗೆ ಅರ್ಜಿ ಸಲ್ಲಿಸಬಹುದು.
•  1:- ಅಧಿಕೃತ ಪೋರ್ಟಲ್‌ https://pmkusum.mnre.gov.in/ ಗೆ ಭೇಟಿ ನೀಡಿ, ನೋಂದಣಿ ವಿಭಾಗದ ಮೇಲೆ ಕ್ಲಿಕ್ ಮಾಡಿ.
• 2:- ಅಗತ್ಯವಿರುವ ಎಲ್ಲಾ ವಿವರಗಳೊಂದಿಗೆ ನಿಮ್ಮ ಸ್ಕ್ರೀನ್‌ ಮೇಲೆ ಗೋಚರಿಸುವ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ.
• 3:- ಘೋಷಣೆಯ ಪೆಟ್ಟಿಗೆಯನ್ನು ಪರಿಶೀಲಿಸಿ ಮತ್ತು “ಸಲ್ಲಿಸು” ಮೇಲೆ ಕ್ಲಿಕ್ ಮಾಡಿ.
• 4:- ನೋಂದಾಯಿಸಿದ ನಂತರ, ಸೌರ ಕೃಷಿ ಪಂಪ್‌ಸೆಟ್ ಸಬ್ಸಿಡಿ ಯೋಜನೆ ಗಾಗಿ “ಲಾಗಿನ್” ಮೇಲೆ ಕ್ಲಿಕ್ ಮಾಡಿ.
• 5:- ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನಿಖರವಾಗಿ ಒದಗಿಸಿ, ಎಲ್ಲಾ ಪೋಷಕ ದಾಖಲೆಗಳನ್ನು ಲಗತ್ತಿಸಿ ಮತ್ತು ಸಲ್ಲಿಸಿ.

ವಿಶೇಷ ಸೂಚನೆ:- KUSUM ಯೋಜನೆಗೆ ಆನ್‌ಲೈನ್ ಅರ್ಜಿ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಅನ್ನದಾತರು ಸೌರ ಪಂಪ್ ಅನ್ನು ಸ್ಥಾಪಿಸಲು ಒಟ್ಟು ವೆಚ್ಚದ 10% ಅನ್ನು ಇಲಾಖೆಯಿಂದ ಕಳುಹಿಸಲಾದ ಪೂರೈಕೆದಾರರಿಗೆ ಠೇವಣಿ ಇಡಬೇಕು. ಸಬ್ಸಿಡಿ ಮೊತ್ತವು ಮಂಜೂರಾದ ನಂತರ ಸೌರ ಪಂಪ್ ಸೆಟ್ ಅನ್ನು ಸಬಲೀಕರಿಸಲಾಗುತ್ತದೆ, ಇದು ಸಾಮಾನ್ಯವಾಗಿ 90 ರಿಂದ 10 ದಿನಗಳನ್ನು ತೆಗೆದುಕೊಳ್ಳುತ್ತದೆ.

PM Kusum Yojana ಗೆ ಅಗತ್ಯವಿರುವ ಪ್ರಮುಖ ದಾಖಲೆಗಳು ಏನೇನು?

• ಆಧಾರ್ ಕಾರ್ಡ್
• ಭೂ ದಾಖಲೆಗಳು
• ಬ್ಯಾಂಕ್ ಖಾತೆ ಪಾಸ್‌ಬುಕ್
• ಘೋಷಣಾ ನಮೂನೆ
• ಮೊಬೈಲ್ ಸಂಖ್ಯೆ
• ಪಾಸ್‌ಪೋರ್ಟ್ ಗಾತ್ರದ ಫೋಟೋ

ಕರ್ನಾಟಕದಲ್ಲಿ ಪಿಎಂ ಕುಸುಮ್‌ ಯೋಜನೆ(PM Kusum Yojana)ಯ ಪ್ರಗತಿ.

PM Kusum Yojana

ಪಿಎಂ ಕುಸುಮ್‌ ಯೋಜನೆ(PM Kusum Yojana)ಯ ಕುರಿತು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಲಿಖಿತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. 30-07-205ರಂದು ನೀಡಲಾದ ಮಾಹಿತಿಯಂತೆ ಪಿಎಂ ಕುಸುಮ್‌ ಯೋಜನೆಯಡಿಯಲ್ಲಿ ಕರ್ನಾಟದಲ್ಲಿ ಈವರೆಗೆ 23761 ರೈತರು ಪ್ರಯೋಜನ ಪಡೆದುಕೊಂಡಿದ್ದಾರೆ. ಬಿ ಘಟಕದ ಅಡಿಯಲ್ಲಿ 41,365 ಸೋಲಾರ್‌ ಪಂಪ್‌ಸೆಟ್‌ಗಳಿಗೆ ಮಂಜೂರಾತಿ ನೀಡಲಾಗಿದ್ದು, 2,388 ಪಂಪ್‌ಸೆಟ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಸಿ ಘಟಕದ ಅಡಿಯಲ್ಲಿ 6,28,588 ಪಂಪ್‌ಸೆಟ್‌ಗಳಿಗೆ ಅನುಮೋದನೆ ನೀಡಲಾಗಿದ್ದು, 23,133 ಪಂಪ್‌ಸೆಟ್‌ಗಳನ್ನು ಅನ್ನದಾತರ ಜಮೀನನಲ್ಲಿ ಅಳವಡಿಸಲಾಗಿದೆ ಎಂದು ಸಂಸತ್ತಿನಲ್ಲಿ ಮಾಹಿತಿ ನೀಡಲಾಗಿದೆ. ಆದರೆ, ಎ ಘಟಕದ ಅಡಿಯಲ್ಲಿ ಯಾವುರೇ ರೈತರು ಬೇಡಿಕೆಯನ್ನು ಸಲ್ಲಿಸಿಲ್ಲ.

PM Kusum Yojana ಯ ಜಿಲ್ಲಾವಾರು ಮಾಹಿತಿ ಈ ಕೆಳಗಿನಂತಿದೆ.

ಪಿಎಂ ಕುಸುಮ್‌ ಯೋಜನೆಯಡಿಯಲ್ಲಿ ಬಿ ಘಟಕದ ಅಡಿಯಲ್ಲಿ ಬೆಳಗಾವಿ (322), ಶಿವಮೊಗ್ಗ (257), ಕಲಬುರ್ಗಿ (215) ಮತ್ತು ಚಿತ್ರದುರ್ಗ (183) ಪಂಪ್‌ಗಳನ್ನು ಅಳವಡಿಸಲಾಗಿದೆ. ಸಿ ಘಟಕದ ಅಡಿಯಲ್ಲಿ ತುಮಕೂರು (6,160), ಚಿಕ್ಕಬಳ್ಳಾಪುರ (5,364), ರಾಮನಗರ (3,788), ಚಿತ್ರದುರ್ಗ (2,445), ದಾವಣಗೆರೆ (1,334) ಮತ್ತು ಕೋಲಾರ (1,163) ಪಂಪ್‌ಗಳನ್ನು ಅಳವಡಿಸಲಾಗಿದೆ. ಉಳಿದ ಜಿಲ್ಲೆಗಳು ಗಮನಾರ್ಹ ಸಾಧನೆಗಳನ್ನು ಮಾಡಿಲ್ಲ.

PM Kusum Yojana(ಪಿಎಂ ಕುಸುಮ್ ಯೋಜನೆ)ಯ ಪ್ರಮುಖ ಗುಣಲಕ್ಷಣಗಳು.

ಈ ಯೋಜನೆಯ ಹೆಸರು :- ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ್ (PM-KUSUM)
ಪ್ರಾರಂಭ :- ಮಾರ್ಚ್ 2019, ನವೀಕರಿಸಬಹುದಾದ ಇಂಧನ ಸಚಿವಾಲಯ
ಉದ್ದೇಶಗಳು: – ಅನ್ನದಾತರಿಗೆ ಸೌರಶಕ್ತಿ ಆಧಾರಿತ ನೀರಾವರಿ ಪಂಪ್‌ಗಳಿಗೆ ಸಹಾಯಧನ. ಡೀಸೆಲ್/ವಿದ್ಯುತ್ ಪಂಪ್‌ಗಳಿಂದ ಸೌರಶಕ್ತಿಗೆ ಪರಿವರ್ತನೆ. ಹೆಚ್ಚುವರಿ ಸೌರಶಕ್ತಿಯ ಮಾರಾಟದಿಂದ ರೈತರ ಆದಾಯ ಹೆಚ್ಚಳ. ಪರಿಸರ ಸ್ನೇಹಿ ಕೃಷಿ ಉತ್ತೇಜನ
ಸಹಾಯಧನ :- 60% ಸರ್ಕಾರಿ ಸಬ್ಸಿಡಿ. 30% ಸಾಲ (ಸರ್ಕಾರದಿಂದ) ರೈತರು 10% ವೆಚ್ಚ ಭರಿಸುವುದು
ಈ ಯೋಜನೆಯ ಘಟಕಗಳು :- ಘಟಕ A: 10,000 MW ವಿಕೇಂದ್ರೀಕೃತ ಸೌರ ವಿದ್ಯುತ್ ಸ್ಥಾವರಗಳ ಸ್ಥಾಪನೆ (500 kW – 2 MW) ಘಟಕ B: 17.5 ಲಕ್ಷ ಸ್ವತಂತ್ರ ಸೌರ ಕೃಷಿ ಪಂಪ್‌ಗಳ ಸ್ಥಾಪನೆ (7.5 HP ವರೆಗೆ) ಘಟಕ C: 10 ಲಕ್ಷ ಗ್ರಿಡ್-ಸಂಪರ್ಕಿತ ಪಂಪ್‌ಗಳ ಸೌರ ವಿದ್ಯುದೀಕರಣ
ಪ್ರಯೋಜನಗಳು :- ಕಡಿಮೆ ವೆಚ್ಚದಲ್ಲಿ ಸೌರ ಪಂಪ್‌ಗಳ ಸ್ಥಾಪನೆ ನೀರಾವರಿಗೆ ಸುಧಾರಿತ ವಿದ್ಯುತ್ ಸರಬರಾಜು ಹೆಚ್ಚುವರಿ ಶಕ್ತಿಯ ಮಾರಾಟದಿಂದ ಆದಾಯ. 25 ವರ್ಷಗಳ ಕಾಲ ಬಂಜರು ಭೂಮಿಯಿಂದ ಸ್ಥಿರ ಆದಾಯ. ಕೃಷಿಯೊಂದಿಗೆ ಸೌರ ಘಟಕಗಳ ಸ್ಥಾಪನೆ ಪರಿಸರ ಸ್ನೇಹಿ ಕೃಷಿ.
ಅರ್ಹತೆ :- ವೈಯಕ್ತಿಕ ರೈತರು ರೈತರ ಗುಂಪು ರೈತ ಉತ್ಪಾದಕ ಸಂಸ್ಥೆಗಳು (FPO) ಪಂಚಾಯತ್‌ಗಳು ಸಹಕಾರ ಸಂಘಗಳು ನೀರು ಬಳಕೆದಾರರ ಸಂಘಗಳು
ಅರ್ಜಿ ಸಲ್ಲಿಕೆ :- ಅಧಿಕೃತ ಪೋರ್ಟಲ್‌: https://pmkusum.mnre.gov.in/ ಮೂಲಕ

WhatsApp Group Join Now
Telegram Group Join Now