Pouthi Khata Abhiyana:ಕುಟುಂಬದ ಮೃತರ ಹೆಸರಿನಿಂದ ಜಮೀನಿನ ಮಾಲೀಕತ್ವ ವರ್ಗಾವಣೆಗೆ ಸರ್ಕಾರದಿಂದ ನೂತನ ಕ್ರಮ.

Pouthi Khata Abhiyana:ಕುಟುಂಬದ ಮೃತರ ಹೆಸರಿನಿಂದ ಜಮೀನಿನ ಮಾಲೀಕತ್ವ ವರ್ಗಾವಣೆಗೆ ಸರ್ಕಾರದಿಂದ ನೂತನ ಕ್ರಮ.

Pouthi Khata

Pouthi Khata Abhiyana:ಕಂದಾಯ ಇಲಾಖೆ(Revenue Department)  ಹಾಗೂ ಪಂಚಾಯತ್ ರಾಜ್ ಇಲಾಖೆ(Grama Panchayat) ಸಹಯೋಗದಲ್ಲಿ ಗ್ರಾಮೀಣ  ಹಾಗೂ ನಗರ ಪ್ರದೇಶದಲ್ಲಿ ಕುಟುಂಬದ ಮೃತರ ಹೆಸರಿನಲ್ಲಿರುವ ಕೃಷಿ ಜಮೀನಿನ(Pothi Khate)ಮಾಲೀಕತ್ವವನ್ನು ಪ್ರಸ್ತುತ ವಾರಸುದಾರರಿಗೆ ವರ್ಗಾವಣೆ ಮಾಡಲು ರಾಜ್ಯ ಸರ್ಕಾರದಿಂದ ವಿನೂತನ ಯೋಜನೆ ಜಾರಿಗೆ ಮುಂದಾಗಿದೆ.

ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಇನ್ನೂ ಸಹ ಬಹು ದೊಡ್ಡ ಪ್ರಮಾಣದಲ್ಲಿ ಕೃಷಿ ಜಮೀನಿನ(Agriculture Land Records)ಮಾಲೀಕತ್ವವು ಕುಟುಂಬದ ಮೃತರ ಹೆಸರಿನಲ್ಲೇ ಇರುವುದರಿಂದ ರೈತರಿಗೆ ಸರ್ಕಾರದ ಯೋಜನೆಗಳನ್ನು  ಪಡೆಯಲು ಸಾಧ್ಯವಾಗಿರುವುದಿಲ್ಲ ಮತ್ತು ಇದರೊದ್ದಿಗೆ ನಿಖರ ಮಾಲೀಕರನ್ನು ಗುರುತಿಸಲು ಸಹ ತುಂಬಾ ಕಷ್ಟಕರವಾಗಿರುತ್ತದೆ ಈ ಎಲ್ಲಾ ಕಾರಣಗಳಿಂದ ಪ್ರಸ್ತುತ ವಾರಸುದಾರರಿಗೆ ಜಮೀನಿನ ಮಾಲೀಕತ್ವವನ್ನು ಸರಳ ವಿಧಾನವನ್ನು ಅನುಸರಿಸಿ ವರ್ಗಾವಣೆ ಮಾಡಲು ನೂತನ ಕ್ರಮ ಜಾರಿಗೆ ಸರ್ಕಾರ ಮುಂದಾಗಿದೆ.

ಕುಟುಂಬದ ಮೃತರ ಹೆಸರಿನಿಂದ ಜಮೀನಿನ ಖಾತೆಯನ್ನು(RTC) ವಾರಸುದಾರರ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವುದಕ್ಕೆ ಪೌತಿ ಖಾತೆ(Pouthi Khata) ಎಂದು ಕರೆಯುತ್ತಾರೆ, ಪೌತಿ ಖಾತೆ(Khata) ಕುರಿತು ಸರ್ಕಾರ ಯಾವೆಲ್ಲ ಕ್ರಮಗಳನ್ನು ಜಾರಿಗೆ ತರಲು  ಸಿದ್ಧವಾಗಿದೆ ಎಂದು ಮತ್ತು ಇದಕ್ಕಾಗಿ ರೈತರು(Farmers) ಅನುಸರಿಸಬೇಕಾದ ಪ್ರಮುಖ ಕ್ರಮಗಳು ಯಾವುವು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

Pouthi Khata Abhiyana-2025: ಇನ್ನು ಸಹ ಕುಟುಂಬದ ಮೃತರ ಹೆಸರಿನಲ್ಲೇ ಇವೆ ಸಾವಿರಾರು ಕೋಟಿ ಪಹಣಿ.

ರಾಜ್ಯ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕಂದಾಯ ಇಲಾಖೆಯ ಅಧಿಕೃತ ಅಂಕಿ-ಅಂಶ ಮಾಹಿತಿಯ ಪ್ರಕಾರ ಇನ್ನೂ ಸರಿ ಸುಮಾರು ಸಾವಿರಾರು ಕೋಟಿ  ಕೃಷಿ ಜಮೀನಿನ ಪಹಣಿಗಳು ಮರಣ ಹೊಂದಿದವರ ಹೆಸರಿನಲ್ಲಿ ಇವೆ ಎಂದು ತಿಳಿಸಲಾಗಿದೆ.

ಪೌತಿ ಖಾತೆ(Pouthi Khate) ಎಂದರೇನು ?

ಮರಣ ಹೊಂದಿದ ವ್ಯಕ್ತಿಯ ಹೆಸರಿನಿಂದ ಕೃಷಿ ಜಮೀನಿನ ಮಾಲೀಕತ್ವವನ್ನು ಪ್ರಸ್ತುತ ವಾರಸುದಾರರ ಹೆಸರಿಗೆ ಜಮೀನಿನ ಮಾಲೀಕತ್ವವನ್ನು ವರ್ಗಾವಣೆ ಮಾಡಿಕೊಳ್ಳುವುದಕ್ಕೆ ಪೌತಿ ಖಾತೆ ಎಂದು ಕರೆಯುತ್ತಾರೆ.

Pouthi Khate:ರಾಜ್ಯ ಸರ್ಕಾರದಿಂದ ಪೌತಿ ಖಾತೆಗಾಗಿ ವಿನೂತನ ಕ್ರಮ.

ಕರ್ನಾಟಕ ಸರ್ಕಾರದಿಂದ ಮರಣ ಹೊಂದಿವರ ವ್ಯಕ್ತಿಯ ಹೆಸರಿನಿಂದ ಜಮೀನಿನ ಮಾಲೀಕತ್ವವನ್ನು ವರ್ಗಾವಣೆ ಮಾಡಿಕೊಳ್ಳಲು ವಿನೂತನ ಕ್ರಮವನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿದ್ದು ಗ್ರಾಮ ಪಂಚಾಯತಿಯ ವ್ಯಾಪ್ತಿಯ ಅಧಿಕಾರಿಗಳ ಸಹಯೋಗದಲ್ಲಿ ಕಂದಾಯ ಇಲಾಖೆಯ ಮೂಲಕ ಪೌತಿ ಖಾತೆ ಆಂದೋಲವನ್ನು ಗ್ರಾಮೀಣ ಮಟ್ಟದಲ್ಲಿ ಜಾರಿಗೆ ತರಲು ಯೋಜನೆಯನ್ನು ರೂಪಿಸಲಾಗುತ್ತದೆ.

Pouthi Khata Date: ಮೇ ತಿಂಗಳ ಅಂತ್ಯದೊಳಗೆ ಪೌತಿ ಖಾತೆ ಆಂದೋಲನ.

ಕಂದಾಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪೌತಿ ಖಾತೆ ಆಂದೋಲನವನ್ನು ಆಯೋಜಿಸಿಲಾಗಿದೆ  ಸರ್ಕಾರ ಸಕಲ ಸಿದ್ಧತೆಯನ್ನು ನಡೆಸಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Pothi Khata Benefits:ರೈತರಿಗೆ ಈ ಯೋಜನೆಯಿಂದ ಆಗುವ ಪ್ರಯೋಜನಗಳೇನು?

ಪೌತಿ ಖಾತೆ ಆಂದೋಲನದಿಂದ ರೈತರಿಗೆ ಹಲವಾರು ಪ್ರಯೋಜನಗಳಿವೆ ರೈತರು ಸುಲಭ ಮತ್ತು ಸರಳ ವಿಧಾನವನ್ನು ಅನುಸರಿಸಿ ತಮ್ಮ ಹೆಸರಿಗೆ ಕೃಷಿ ಜಮೀನನ್ನು ವರ್ಗಾವಣೆ ಮಾಡಿಕೊಳ್ಳುವುದರ ಜೊತೆಗೆ ಕೃಷಿ ಜಮೀನಿನ ಮೇಲೆ ಬೆಳೆ ಸಾಲ, ಬೆಳೆ ವಿಮೆ, ಬೆಳೆ ಪರಿಹಾರ, ಬೆಂಬಲ ಬೆಲೆ ಯೋಜನೆಯಡಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು.

How to apply for pouthi khata:ಜಮೀನಿನ ವರ್ಗಾವಣೆಗೆ  ಹೇಗೆ ಅರ್ಜಿ ಸಲ್ಲಿಸಬೇಕು?

ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ತೆಗೆದುಕೊಂಡು ಇದರ ಜೊತೆಗೆ ಕುಟುಂಬದ ವಂಶವೃಕ್ಷ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ ಲಗತ್ತಿಸಿ ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ/VA ಕಚೇರಿಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Pouthi Khata Details-ಪೌತಿ ಖಾತೆ ಅಭಿಯಾನವನ್ನು ಹೇಗೆ ನಡೆಸಲಾಗುತ್ತದೆ?

ನಿಮ್ಮ ಗ್ರಾಮ ಪಂಚಾಯಿತಿಗೆ ತಹಸೀಲ್ದಾ‌ರ್ ರಿಂದ  ನಿಯೋಜಿಸಿದ ಹಿರಿಯ ಅಧಿಕಾರಿಯ ತಂಡ ಭೇಟಿಕೊಟ್ಟು ಸಾರ್ವಜನಿಕ/ರೈತರ ಸಮ್ಮುಖದಲ್ಲಿ ಪೌತಿ ಖಾತೆ ಆಂದೋಲನ ಕಾರ್ಯಕ್ರಮವನ್ನು ನಿಗದಿಪಡಿಸಿದ ದಿನಾಂಕದಂದು ನಡೆಸಲಾಗುತ್ತದೆ. ಈ ಪ್ರಕ್ರಿಯೆಯ ಭಾಗವಾಗಿ ಮುಂಚಿತವಾಗಿಯೇ ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌತಿ ಖಾತೆ ಆಗಬೇಕಾದವರ ಕುಟುಂಬಕ್ಕೆ ಮಾಹಿತಿಯನ್ನು ನೀಡಲಾಗುತ್ತದೆ ಇದಕ್ಕಾಗಿ ಗ್ರಾಮೀಣ ಮಟ್ಟದಲ್ಲಿ ಪ್ರಚಾರವನ್ನು  ಡಂಗುರದ ಸಾರಿಸುವ ಮೂಲಕ ಕೈಗೊಳ್ಳಲಾಗುತ್ತದೆ ಈ ಆಂದೋಲನ ನಡೆಸುವ ದಿನ ಅಧಿಕಾರಿಗಳ ತಂಡ ಸಾರ್ವಜನಿಕ ಸಮ್ಮುಖದಲ್ಲಿ ಜಿ-ಟೀ (ವಂಶವೃಕ್ಷ) ತಯಾರಿಸುತ್ತಾರೆ. 

ಹೀಗಾಗಿ ಯಾವುದೇ ವ್ಯತ್ಯಾಸಗಳಿದ್ದರೆ ಅಲ್ಲೇ ಬಹಿರಂಗವಾಗುತ್ತದೆ. ಅಲ್ಲೇ ಕುಟುಂಬ ಸದಸ್ಯರನ್ನು ದಾಖಲೆಯಲ್ಲಿ ನಮೂದಿಸುವ 2ನೇ ಹಂತದ ಪ್ರಕ್ರಿಯೆ ನಡೆಸುವರು. ಮುಂದೆ ಡಿಜಿಟಲೀಕರಣ ಆಗಲಿದೆ. ಈ ಆಂದೋಲನ ಪೌತಿ ಖಾತೆಗೆ ಸೀಮಿತವಾಗಿರದೆ ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ಸಮಸ್ಯೆ ಪರಿಹಾರ ನೀಡುವುದಕ್ಕೂ ಗಮನಕೊಡಬೇಕೆಂಬ ಇರಾದೆ ಇಲಾಖೆಯದ್ದಾಗಿದೆ ಎಂದು ಇಲಾಖೆಯಲ್ಲಿನ ಉನ್ನತ ಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now