ಭಾರತದ ಕ್ಷಯರೋಗದ ವರದಿ ಬಿಡುಗಡೆ.

ಭಾರತದಲ್ಲಿ  ಕ್ಷಯರೋಗಕ್ಕೆ ಸಂಬಂಧಿಸಿದಂತೆ ಈಚೆಗೆ ಬಿಡುಗಡೆ ಮಾಡಲಾದ ವರದಿಯು ಈ ರೋಗದ ವಿರುದ್ಧ ದೇಶ ನಡೆಸಿರುವ ಹೋರಾಟದ ವಿಚಾರವಾಗಿ ಒಂದಿಷ್ಟು ಆಶಾದಾಯಕ ಚಿತ್ರಣವನ್ನು ನೀಡಿದೆ.ಹೀಗಿದ್ದರೂ ಕಳವಳಕ್ಕೆ ಕಾರಣ ಆಗುವ ಕೆಲವಷ್ಟು ಅಂಶಗಳು ಉಳಿದಿವೆ. ಕ್ಷಯರೋಗ ಪತ್ತೆಯಾಗಿರುವ ರೋಗಿಗಳ ಪೈಕಿ ಶೇಕಡಾ 95 ರಷ್ಟು ಮಂದಿಗೆ 2023 ರ ವೇಳೆಗೆ ಚಿಕಿತ್ಸೆ ಒದಗಿಸಬೇಕು ಎಂಬ ಗುರಿಯನ್ನು ದೇಶ ತಲುಪಿದೆ ಎಂಬುದನ್ನು ವರದಿಯು ಹೇಳಿದೆ.ಆದರೆ, ಕ್ಷಯರೋಗ ಪ್ರಕರಣಗಳು ದೇಶದಲ್ಲಿ ವರದಿಯಾಗುವುದೇ ಕಡಿಮೆ ಎಂಬ ಸಂಗತಿಯು ಚಿಂತೆಗೆ ಈಡು ಮಾಡುವು ಒಂದು ವಿಚಾರ.ಇದು ಈ ರೋಗದ ವಿರುದ್ಧದ ಸಮರದಲ್ಲಿ ಒಂದು ಸಮಸ್ಯೆ . ಚಿಕಿತ್ಸೆಗೆ ಒಳಗಾಗದ ರೋಗಿಗಳು ತಮಗೂ ಸಮಸ್ಯೆ ತಂದುಕೊಳ್ಳುತ್ತಾರೆ.ಇತರರಿಗೂ ಈ ಸೋಂಕು ಹರಡಲು ಕಾರಣರಾಗುತ್ತಾರೆ.ಆದರೆ ದೇಶದಲ್ಲಿ  ಕ್ಷಯ ರೋಗದ ಅಂದಾಜು ಪ್ರಕರಣಗಳ ಸಂಖ್ಯೆ ಹಾಗೂ  ವಾಸ್ತವ ಪ್ರಕರಣಗಳ ಸಂಖ್ಯೆಯ ನಡುವಿನ ಅಂತರ ಕಡಿಮೆ ಆಗುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ.

*  ಖಾಸಗಿ ವಲಯದ ಪಾಲುದಾರಿಕೆ,ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಸುಧಾರಣೆ ಕಂಡು ಬಂದಿರುವುದು ಇದಕ್ಕೆ ಪ್ರಮುಖ ಕಾರಣಗಳು.ಈಗ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಸಾಮರ್ಥ್ಯವು ದೇಶಕ್ಕಿದೆ.ಇದರ ಪರಿಣಾಮವಾಗಿ ಸಾವಿನ ಸಂಖ್ಯೆ ಕಡಿಮೆ ಆಗುತ್ತದೆ.ರೋಗ ಹರಡುವುದನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಮತ್ತು ಇನ್ನಷ್ಟು ಬಲಿಷ್ಠವಾದ ರೋಗ ಕಾರವು ವಿಕಾಸ ಹೊಂದುವುದನ್ನು ತಡೆಯಲು ಸಾಧ್ಯವಾಗುತ್ತದೆ.

*  ಕ್ಷಯ ರೋಗದ ನಿರ್ಮೂಲನೆಯು 2025 ರ ವೇಳೆಗೆ ಆಗಬೇಕು ಎಂಬುದು ದೇಶ ಹೊಂದಿರುವ ಗುರಿ.ಈಚಿನ ವರ್ಷಗಳಲ್ಲಿ ಕ್ಷಯರೋಗದ ವಿರುದ್ಧ ರೂಪಿಸಿದ ಯೋಜನೆಗಳು ಒಳ್ಳೆಯ ಫಲಿತಾಂಶ ನೀಡುವೆಯಾದರೂ ದೇಶವು ಈ ಗುರಿಯನ್ನು ಸಾಧಿಸುವ ಸಾಧ್ಯತೆ ಕಡಿಮೆ ಇದೆ.ಏಕೆಂದರೆ,ಹಲವು ಔಷಧಿಗಳಿಗೆ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿರುವ(ಎಂಡಿ ಆರ್) ಕ್ಷಯ ರೋಗಕಾರವು ಗಂಭೀರವಾಗಿ ಸವಾಲಾಗಿ ಪರಿಣಮಿಸಿದೆ.ಈ ರೋಗಕಾರವನ್ನು  ಗುರುತಿಸುವಲ್ಲಿ ಒಂದಿಷ್ಟು ಪ್ರಗತಿ ಆಗಿದೆ ಎಂಬುದನ್ನು ವರದಿಯು ತೋರಿಸಿಕೊಟ್ಟಿದೆ.

*  ಕ್ಷಯರೋಗ ಪತ್ತೆಯಾದ ಶೇಕಡ 60ರಷ್ಟು ರೋಗಿಗಳನ್ನು ಮತ್ತೆ ಪರೀಕ್ಷೆಗೆ ಒಳಪಡಿಸಿ,ಅವರಲ್ಲಿನ ರೋಗಕಾರವು ಆರಂಭಿಕ ಹಂತದಲ್ಲಿ ನೀಡುವ ಔಷಧಿಗಳಿಗೆ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿದೆಯೇ ಎಂಬುದನ್ನು ಪರಿಶೀಲಿಸಲಾಗಿದೆ.ಮುಂದೆ ಈ ಪರೀಕ್ಷೆಯನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯ ರೋಗಿಗಳಲ್ಲಿ ನಡೆಸಲಾಗುತ್ತದೆ.ಆಗ,ಎರಡನೆಯ ಹಂತದಲ್ಲಿ ನೀಡುವ ಔಷಧಗಳ ಅಗತ್ಯವಿರುವ ರೋಗಿಗಳ ಸಂಖ್ಯೆ ಎಷ್ಟು ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತದೆ.ಪರೀಕ್ಷೆಯನ್ನು ಇನ್ನಷ್ಟು ಉತ್ತಮ ಪಡಿಸಿ, ಎಲ್ಲಾ ಎಂಡಿಆರ್ ಕ್ಷಯ ಪ್ರಕರಣಗಳನ್ನು ಗುರುತಿಸುವ ಗುರಿ ಹೊಂದಲಾಗಿದೆ.

*  ಎಂಡಿ ಆರ್ ಕ್ಷಯ ರೋಗದ ಸಂಖ್ಯೆಯು ಕೋವಿಡ್ ಗೂ ಮೊದಲು ದೇಶದಲ್ಲಿ ಕಡಿಮೆ ಆಗುತ್ತಿತ್ತು.ಆದರೆ ಕೋವಿಡ್ ಸಾಂಕ್ರಾಮಿಕದ ನಂತರದಲ್ಲಿ ವರದಿಯಾಗುತ್ತಿರುವ ಈ ಬಗೆಯ ಕ್ಷಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

*  ಎಂಡಿ ಆರ್ ಕ್ಷಯಕ್ಕೆ ಚಿಕಿತ್ಸೆ ಬಹಳ ಕಷ್ಟದ ಕೆಲಸ. ಏಕೆಂದರೆ ಹಲವು ಔಷಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಅಲ್ಲದೆ, ಎರಡನೆಯ ಹಂತದ ಔಷಧಿಗಳನ್ನು ನೀಡಲಾದ ರೋಗಿಗಳ ಪೈಕಿ ಹಲವರು ಚಿಕಿತ್ಸೆಯನ್ನು ಪೂರ್ಣಗೊಳಿಸಲೇ ಇಲ್ಲ. ಈ ನಡುವೆ, ಅಲ್ಪಾವಧಿಗೆ ನೀಡುವ ಅಂತಿಮ ಹಂತದ ಒಂದು ಔಷಧಿಯು ಪರಿಣಾಮಕಾರಿಯಾಗಿ ಕಂಡು ಬಂದಿದೆ.ಈ ಔಷಧದ ಮೇಲಿನ ಹಕ್ಕು ಸ್ವಾಮ್ಯವನ್ನು ವಿಸ್ತರಿಸದೆ ಇರಲು ತೀರ್ಮಾನಿಸಿರುವುದರ ಪರಿಣಾಮವಾಗಿ, ಶ್ವಾಸಕೋಶಕ್ಕೆ ಸಂಬಂಧಿಸಿದ ಇರುವ ಕ್ಷಯ ರೋಗಕ್ಕೆ ಹೆಚ್ಚಿನ ಗಮನ ನೀಡುವುದು ಕೂಡ ಬಹಳ ಮಹತ್ವದ್ದು.

*  2015 ರ ನಂತರದಲ್ಲಿ ಭಾರತದಲ್ಲಿ ವರದಿಯಾಗುವ ಹೊಸ ಕ್ಷಯ ರೋಗ ಪ್ರಕರಣಗಳ ಪ್ರಮಾಣವು ಶೇಕಡ 16 ರಷ್ಟು ಕಡಿಮೆ ಆಗಿದೆ, ಮರಣ ಸಂಖ್ಯೆಯಲ್ಲಿ ಶೇಕಡ 18 ರಷ್ಟು ಕಡಿಮೆ ಆಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

WhatsApp Group Join Now
Telegram Group Join Now