ಕದಂಬರು (ಸಾಮಾನ್ಯ ಶಕ 345-580).
* ಕದಂಬರು ಕರ್ನಾಟಕವನ್ನಾಳಿದ ಮೊದಲ ಮನೆತನ.
* ಸ್ಥಾಪಕರು – ಮಯೂರ ವರ್ಮ ( ಕನ್ನಡ ನಾಡಿನ ಮೊದಲ ರಾಜ).
* ಈ ಮನೆತನವನ್ನು ಮಯೂರ ಶರ್ಮ ವರದಾ ನದಿಯ ಎಡ ದಂಡೆಯ ಮೇಲೆ ಸ್ಥಾಪಿಸಿದನು.
* ಇವರು ಉತ್ತರ ಕನ್ನಡ ಜಿಲ್ಲೆಯ ಬನವಾಸಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದರು.
ಮಯೂರವರ್ಮ (ಸಾಮಾನ್ಯ ಶಕ 345-360).
* ತಾಳಗುಂದ ಶಾಸನದ ಪ್ರಕಾರ ಮಯೂರ ವರ್ಮನು ಕದಂಬರ ಮೂಲಪುರುಷ ಮತ್ತು ಪ್ರಸಿದ್ಧ ಅರಸ.
* ಮಯೂರ ವರ್ಮ ಚಿತ್ರದುರ್ಗದ ಬಳಿ ಚಂದ್ರವಳ್ಳಿಯಲ್ಲಿ ಪ್ರಥಮ ಸಂಸ್ಕೃತ ಶಾಸನವನ್ನು ಕೆತ್ತಿಸಿ ಅಲ್ಲಿ ಒಂದು ಕೆರೆಯನ್ನು ನಿರ್ಮಿಸಿದನು.
-: ಚಂದ್ರವಳ್ಳಿ ಶಾಸನ ( ಸಾಮಾನ್ಯ 345).
* ಈ ಶಾಸನ ಚಿತ್ರದುರ್ಗ ಜಿಲ್ಲೆಯ ಸಮೀಪವಿರುವ ಚಂದ್ರವಳ್ಳಿ ಎಂಬಲ್ಲಿ ದೊರೆತಿದೆ.
* ಈ ಶಾಸನದಲ್ಲಿ ಮಯೂರವರ್ಮನ ಸಾಧನೆಗಳ ಮಾಹಿತಿ ಇದೆ.
ಕಾಕುತ್ಸವರ್ಮ ( ಸಾಮಾನ್ಯ ಶಕ 425-455).
* ಕದಂಬ ಮನೆತನದ ಪ್ರಸಿದ್ಧ ಅರಸ.
* ಇವನನ್ನು ಕದಂಬ ಕುಟುಂಬದ ಕುಲಭೂಷಣ ಅಥವಾ ಕೀರ್ತಿ ಸೂರ್ಯ ಎಂದು ಕರೆಯಲಾಗುತ್ತದೆ.
* ಧರ್ಮ ಮಹಾರಾಜ ಎಂಬ ಬಿರುದನ್ನು ಪಡೆದುಕೊಂಡಿದ್ದನು.
* ಅನೇಕ ವೈವಾಹಿಕ ಸಂಬಂಧಗಳ ಮೂಲಕ ಜನಮನ್ನಣೆ ಪಡೆದನು.
* ಕರ್ನಾಟಕದ ಮೊದಲ ದೇವಾಲಯವಾದ ತಾಳಗುಂದದ ಪ್ರಣವೇಶ್ವರ ದೇವಾಲಯ ನಿರ್ಮಿಸಿದ.
* ಸಾಮಾನ್ಯ ಶಕ 425 ಅಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿಕೊಂಡನು.
* ಸಾಮಾನ್ಯ ಶಕ 450ರಲ್ಲಿ ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನವನ್ನು ಕೆತ್ತಿಸಿದನು ಇದು 16 ಸಾಲುಗಳಿಂದ ಕೂಡಿದೆ ಹಾಸನ ಜಿಲ್ಲೆಯ ಹಲ್ಮಿಡಿಯಲ್ಲಿ ದೊರೆತಿದೆ.
ಶಾಂತಿವರ್ಮ
* ಈತ ತನ್ನ ತಂದೆಯ ವೃದ್ಧಾಪ್ಯ ಕಾಲದಲ್ಲಿ ಆಳ್ವಿಕೆ ಪ್ರಾರಂಭಿಸಿ ತಂದೆಗಿಂತಲೂ ಮುಂಚಿತವಾಗಿಯೇ ಮರಣ ಹೊಂದಿದನು.
* ಈತ ತಾಳಗುಂದ ಶಾಸನದ ಕರ್ತೃ.
-: ತಾಳಗುಂದ ಶಾಸನ ( ಸಾಮಾನ್ಯ ಶಕ 450):-
* ಈ ಶಾಸನ ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಪ್ರಣವೇಶ್ವರ ದೇವಾಲಯದ ಮುಂಭಾಗದಲ್ಲಿ ಇದೆ.
ಆಡಳಿತ ವ್ಯವಸ್ಥೆ.
* ಶಾಸನಗಳಲ್ಲಿ ಕದಂಬ ದೊರೆಗಳನ್ನು ಮಹಾರಾಜ,ಧರ್ಮ ಮಹಾರಾಜ ಎಂದು ಕರೆಯಲಾಗಿದೆ.
* ಇವರು ಆಡಳಿತದಲ್ಲಿ ಹಿರಿಯರ ಸಲಹೆ ಪಡೆದುಕೊಳ್ಳುತ್ತಿದ್ದರು.ಇದನ್ನು ವೃದ್ಧೋಪದೇಶಗ್ರಾಹಿ ಎಂದು ಕರೆಯಲಾಗಿದೆ.
* ರಾಜನಿಗೆ ಅದರಲ್ಲಿ ಸಹಕಾರ ನೀಡಲು ಪಂಚ ಪ್ರಧಾನವೆಂಬ ಮಂತ್ರಿಮಂಡಲವಿತ್ತು.
ಪ್ರಾಂತ್ಯಗಳನ್ನು ಈ ಕೆಳಗಿನಂತೆ ವಿಂಗಡಿಸಿದ್ದನು.
* ಕಂಪನ
* ವಿಷಯ
* ದಶ ಗ್ರಾಮ
* ಗ್ರಾಮ
ಕಂದಾಯ.
* ಭೂ ಕಂದಾಯ ರಾಜ್ಯದ ಮುಖ್ಯ ಆದಾಯವಾಗಿತ್ತು.
* ಇವರ ಕಾಲದ ನಾಣ್ಯಗಳೆಂದರೆ – ಗದ್ಯಾಣ, ದ್ರುಮ್ಮ , ಪಣ, ಸುವರ್ಣ
ಸಾಮಾಜಿಕ ಜೀವನ.
* ಕದಂಬ ಸಮಾಜವು ವರ್ಣಾಶ್ರಮದ ಮೇಲೆ ರೂಪಗೊಂಡಿತು.
* ಗ್ರಾಮೀಣ ಜೀವನ ಪ್ರಧಾನವಾಗಿತ್ತು.
* ಅವಿಭಕ್ತ ಕುಟುಂಬ ಪದ್ಧತಿ ರೂಢಿಯಲ್ಲಿತ್ತು.
* ಸಹಗಮನ ಪದ್ಧತಿ ಮತ್ತು ಸಗೋತ್ರ ವಿವಾಹ ಆಚರಣೆಯಲ್ಲಿತ್ತು.
ಶಿಕ್ಷಣ.
* ಗುರುಕುಲ ಶಿಕ್ಷಣ ಪದ್ಧತಿ ರೂಢಿಯಲ್ಲಿತ್ತು.
* ಘಟಕಗಳು, ಅಗ್ರಹಾರ, ಬ್ರಹ್ಮಪುರಿ, ಮಠ ಮತ್ತು ದೇವಾಲಯಗಳು ಶಿಕ್ಷಣ ಕೇಂದ್ರಗಳಾಗಿದ್ದವು.
* ಅಗ್ರಹಾರಗಳು ಉಚಿತ ಊಟ ವಸತಿ ಸೌಲಭ್ಯವಿದ್ದ ವಿದ್ಯಾ ಕೇಂದ್ರಗಳು.
* ಘಟಕ ಸ್ಥಾನಗಳು ಧಾರ್ಮಿಕ ಚರ್ಚಾ ಸ್ಪರ್ಧೆ ಏರ್ಪಡಿಸುತ್ತಿದ್ದವು.
* ಕಂಚಿ ಅಂದಿನ ಪ್ರಸಿದ್ಧ ವಿದ್ಯಾ ಕೇಂದ್ರವಾಗಿತ್ತು.
ಸಾಹಿತ್ಯ.
* ಶಾಂತಿನಾಥ – ಸುಕುಮಾರ ಚರಿತೆ
* ನಾಗವರ್ಮ – ಚಂದ್ರ ಚೂಡಾಮಣಿ
* ಚಂದ್ರರಾಜನ – ಮದನ ತಿಲಕ
* ಎರಡನೇ ಕಾಳಿದಾಸ ಕಾಂತಳೇಶ್ವರ – ದೌತ್ಯಂ
* ಟಾಲಮಿ – ಭೂಗೋಳಶಾಸ್ತ್ರ
ಶಾಸನಗಳ ಅಧ್ಯಯನವನ್ನು ” ಎಫಿಗ್ರಫಿ ” ಎಂದು ಕರೆಯುತ್ತಾರೆ.
ಕಲೆ ಮತ್ತು ವಾಸ್ತು ಶಿಲ್ಪ.
* ಇವರು ಕದಂಬ ಶೈಲಿ ಎಂಬ ಹೊಸ ವಾಸ್ತು ಶಿಲ್ಪ ಸೃಷ್ಟಿಸಿದರು.
ಇವರ ಕಾಲದ ಪ್ರಮುಖ ಕಟ್ಟಡಗಳು.
* ಹಲಸೀಯ ಕಲ್ಲೇಶ್ವರ ( ತ್ರಿಕೂಟ ದೇವಾಲಯ ), ಜೈನ ಬಸದಿ ಮುಂತಾದವು.
* ತಾಳಗುಂದದ ಪ್ರಣವೇಶ್ವರ ದೇವಾಲಯ ದೇವಾಲಯ.
ತಲಕಾಡಿನ ಗಂಗರು ( ಸಾಮಾನ್ಯ ಶಕ 350-1004).
* ಕನ್ನಡ ನಾಡನ್ನು 600 ವರ್ಷಗಳ ಕಾಲ ಸುದೀರ್ಘವಾಗಿ ಆಳಿದ ರಾಜವಂಶ.
* ಗುರು ಸಿಂಹನಂದಿಯ ಮಾರ್ಗದರ್ಶನದಂತೆ ದಡಿಗ ( ಕೊಂಗಣಿವರ್ಮ) ಮತ್ತು ಮಾಧವ ಮನೆತನವನ್ನು ಸ್ಥಾಪಿಸಿದರು.
* ಸಾಮಾನ್ಯ ಶಕ 1122 ಕಲ್ಲೂರು ಗುಡ್ಡ ಶಿಲಾಶಾಸನದ ಪ್ರಕಾರ ಗಂಗರು ಉತ್ತರ ಅಯೋಧ್ಯೆಯನ್ನು ಆಳುತ್ತಿದ್ದ ಇಕ್ಷ್ವಾಕು ವಂಶದವರು ಎಂದಿದ್ದಾರೆ.
ರಾಜಧಾನಿಗಳು.
* ಇವರ ಪ್ರಥಮ ರಾಜಧಾನಿ- ಕೋಲಾರ ( ಕುವಲಾಲ)
* ಮುಖ್ಯ ರಾಜಧಾನಿ – ತಲಕಾಡು ( ತಲವನಪುರ) ಮೈಸೂರು ಜಿಲ್ಲೆ.
ದಡಿಗ ( ಸಾಮಾನ್ಯ ಶಕ 350- 380).
* ಈತನ ಮೂಲ ಹೆಸರು ಕೊಂಗಣಿವರ್ಮ.
* ಜೈನ ಮುನಿ ಸಿಂಹನಂದಿಯ ಬೆಂಬಲದೊಂದಿಗೆ ಗಂಗಾ ರಾಜ್ಯ ಸ್ಥಾಪಿಸಿದನು.
* ಹರಿ ವರ್ಮ ನಂತರ ಸಿಂಹವರ್ಮ ಮತ್ತು ವಿಷ್ಣು ಗೋಪ ಆಳ್ವಿಕೆ ಮಾಡಿದರು.
ದುರ್ವಿನಿತ ( ಸಾಮಾನ್ಯ ಶಕ 555-605).
* ಈತ ಗಂಗರಸರಲ್ಲಿಯೇ ಅಪ್ರತಿಮ ವೀರ , ಕಲಾಭಿಜ್ಞ ಮತ್ತು ಘನ ವಿದ್ವಾಂಸ.
* ತಾಯಿಯ ಪ್ರದೇಶವಾದ ಪೊನ್ನಾಟ ಅಂದರೆ ಹೆಗ್ಗಡದೇವನ ಕೋಟೆಯನ್ನು ಪಡೆದುಕೊಂಡು ತನ್ನ ಸಾಮ್ರಾಜ್ಯವನ್ನು ಬಲಪಡಿಸಿಕೊಂಡನು.
* ಇವನು ವೈಷ್ಣವ ಮತಾವಲಂಬಿಯಾಗಿದ್ದನು ಎಲ್ಲಾ ಧರ್ಮಗಳನ್ನು ಪೋಷಿಸಿದವನು.
* ಘನ ವಿದ್ವಾಂಸನಾದ ಈತ ಗುಣಾಡ್ಯನ ಬೃಹತ್ ಕಥಾವನ್ನು ಸಂಸ್ಕೃತಕ್ಕೆ ಭಾಷಾಂತರಿಸಿದ್ದಾನೆ.
* ಭಾರವಿಯ ಕಿರಾತಾರ್ಜುನೀಯ ಎಂಬ ಕೃತಿಯನ್ನು 15ನೇ ಮಂಡಲವನ್ನು ಕುರಿತು ಭಾಷ್ಯಯನ್ನು ಬರೆದಿದ್ದಾನೆ.
ಶ್ರೀ ಪುರುಷ ( ಸಾಮಾನ್ಯ ಶಕ 726-788).
* ಈತನ ರಾಜಧಾನಿಯನ್ನು ಮಾತೊಂದದಿಂದ ಮಾನ್ಯ ಪುರಕ್ಕೆ ವರ್ಗಾಯಿಸಿದ.
* ಇವನು ಸ್ವತಃ ಕವಿಯಾಗಿದ್ದು ಸಂಸ್ಕೃತದಲ್ಲಿ ಗಜ ಶಾಸ್ತ್ರ ಎಂಬ ಕೃತಿಯನ್ನು ರಚಿಸಿದನು. ಇದು ಆನೆಯನ್ನು ಪಳಗಿಸುವ ತಲೆಯ ಮಾಹಿತಿಯನ್ನು ಒಳಗೊಂಡಿದೆ.
ಎರಡನೇ ಶಿವಮಾರ ( ಸಾಮಾನ್ಯ ಶಕ 788-816).
* ಎರಡನೇ ಶಿವಮಾರ ರಚಿಸಿದ ಕೃತಿ ಗಜಾಷ್ಟಕ, ಸೇತುಬಂಧ, ಶಿವಮಾರು ತರ್ಕ
ನಾಲ್ಕನೇ ರಾಚಮಲ್ಲ ( ಸಾಮಾನ್ಯ ಶಕ 975-986).
* ಈತನ ಪ್ರಸಿದ್ಧ ಪ್ರಧಾನ ಮಂತ್ರಿ ಚಾಮುಂಡರಾಯ.
* ಚಾವುಂಡರಾಯನ ಧಾರ್ಮಿಕ ಕಾರ್ಯಗಳಿಗೆ ಪ್ರೋತ್ಸಾಹ ಕೊಟ್ಟಿದ್ದಕ್ಕಾಗಿ ಅವನ ಪ್ರಾಮಾಣಿಕ ಸೇವೆಯನ್ನು ಮೆಚ್ಚಿ ರಾಯ ಎಂಬ ಬಿರುದು ನೀಡಿ ಗೌರವಿಸಿದನು.
-: ಚಾವುಂಡರಾಯ :-
* ಇವನು ಎರಡನೆಯ ಮಾರಸಿಂಹ ಮತ್ತು 4ನೇ ರಾಚ ಮಲ್ಲನ ಮಂತ್ರಿ ಮತ್ತು ಮಹಾದಂಡ ನಾಯಕ.
* ಸ್ವತಃ ಕವಿಯಾದ ಈತ 24 ತೀರ್ಥಂಕರ ಚರಿತ್ರೆಯ ಚಾವುಂಡರಾಯ ಪುರಾಣವನ್ನು ಕನ್ನಡದಲ್ಲಿ ರಚಿಸಿ ಚರಿತ್ರ ಸಾರವನ್ನು ಸಂಸ್ಕೃತದಲ್ಲಿ ರಚಿಸಿದನು.
* ಚಾವುಂಡರಾಯ ಸಾಮಾನ್ಯ ಶಕ 982 ರಲ್ಲಿ ಶ್ರವಣಬೆಳಗೊಳದ ಗೊಮ್ಮಟೇಶ್ವರ ವಿಗ್ರಹವನ್ನು ಪ್ರತಿಷ್ಠಾಪಿಸಿದನು ಇದರ ಎತ್ತರ 58 ಅಡಿ, ಇದರ ಶಿಲ್ಪಿ ಅರಿಷ್ಟನೇಮಿ.
* 12 ವರ್ಷಗಳಿಗೊಮ್ಮೆ ಇದರ ಮಹಾಮಸ್ತಾಭಿಷೇಕ ನಡೆಯುತ್ತದೆ.
-: ಗಂಗರ ಆಡಳಿತ :-
* ಇವರ ಕಾಲದ ಯುದ್ಧ ಮಂತ್ರಿಯನ್ನು ಸಂಧಿ ವಿಗ್ರಹಿ ಎನ್ನುತ್ತಿದ್ದರು.
* ಅರಮನೆಯ ಮೇಲ್ವಿಚಾರಕರನ್ನು ಮನೆವೆರ್ಗಡೆ ಎನ್ನುತ್ತಿದ್ದರು.
* ಇವರು ಸಾಮ್ರಾಜ್ಯವನ್ನು ಪ್ರಾಂತ್ಯಗಳಾಗಿ, ಪ್ರಾಂತ್ಯಗಳನ್ನು ವಿಷಯಗಳಾಗಿ ಅಂದರೆ ಜಿಲ್ಲೆಗಳಾಗಿ, ವಿಷಯಗಳನ್ನು ಕಂಪನಗಳಾಗಿ ಅಂದರೆ ತಾಲೂಕುಗಳಾಗಿ, ಕಂಪನಗಳನ್ನು ಗ್ರಾಮಗಳಾಗಿ ವಿಂಗಡಿಸಲಾಗಿತ್ತು.
* ಗ್ರಾಮ ಸಭೆಯನ್ನು ಮಹಾಜನ ಸಭೆ ಎನ್ನುತ್ತಿದ್ದರು.
-: ಆರ್ಥಿಕ ಸ್ಥಿತಿ:-
* 1/6 ಭೂ ಕಂದಾಯ,1/5 ಭಾಗ ಅರಣ್ಯ ಕಂದಾಯ ವಿಧಿಸುತ್ತಿದ್ದರು.
* ಪೊನ್, ಸುವರ್ಣ, ಗದ್ಯಾಣ, ನಿಷ್ಕ ಎಂಬ ಚಿನ್ನದ ನಾಣ್ಯಗಳು ಹಾಗೂ ಪಣ, ಹಗ, ಕಾಸು , ದ್ರಮ್ಮು ಎಂಬ ಬೆಳ್ಳಿ ನಾಣ್ಯಗಳು ಅಸ್ತಿತ್ವದಲ್ಲಿದ್ದವು.
-: ಧರ್ಮ :-
* ಜೈನ ಧರ್ಮವು ಪ್ರಸಿದ್ಧವಾಗಿತ್ತು.
* ಜೈನ ಕಾಶಿ ಎಂದೇ ಹೆಸರಾದ ಶ್ರವಣಬೆಳಗೊಳವು ಅಂದಿನ ಪ್ರಸಿದ್ಧ ಜೈನ ಯಾತ್ರಾಸ್ಥಳವಾಗಿತ್ತು.
-: ಕಲೆ ಮತ್ತು ವಾಸ್ತು ಶಿಲ್ಪ :-
* ಗಂಗರ ಕಟ್ಟಡಗಳು ಇಟ್ಟಿಗೆ, ಗಾರೆ ಮತ್ತು ಮರದಿಂದ ಕಟ್ಟಲಾಗಿದೆ.
* ಅಂದಿನ ಪ್ರಸಿದ್ದ ನೃತ್ಯಗಾರ್ತಿ ಬಾಚಲಾ ದೇವಿಯನ್ನು ನೃತ್ಯವಿಶಾರದೆ ಮತ್ತು ಪಾತ್ರ ಜಗದಳೆ ಎನ್ನುತ್ತಿದ್ದರು.
-: ಸಾಹಿತ್ಯ :-
* ಎರಡನೇ ಮಾಧವ – ದತ್ತಕ ಸೂತ್ರ ವೃತ್ತಿ
* ಗುಣ ವರ್ಮ- ಶೂದ್ರಕ ಮತ್ತು ಹರಿವಂಶ
* ಒಂದನೇ ನಾಗವರ್ಮ – ಛಂದೋಂಬುಧಿ
* ಎರಡನೇ ಶಿವಮಾರ – ಗಜಾಷ್ಟಕ ಸೇತುಬಂಧ ಮತ್ತು ಶಿವಮಾರ ತರ್ಕ
* ವೀರನಂದಿ – ಚಂದ್ರಪ್ರಭ ಪುರಾಣ
* ದುರ್ವಿನಿತ – ಗುಣಾಡ್ಯನ ಬೃಹತ್ ಕಥಾ
* ಭಾರವಿಯ – ಕಿರಾತಾರ್ಜುನೀಯ 15ನೇ ಮಂಡಲಕ್ಕೆ ವಿಮರ್ಶ ಬರೆದನು.
* ಶ್ರೀ ಪುರುಷ – ಗಜ ಶಾಸ್ತ್ರ.
* ಚಾವುಂಡರಾಯ – ಚಾವುಂಡರಾಯ ಪುರಾಣ ಮತ್ತು ಚರಿತ್ರ ಸಾರ.