ಗ್ರಾಮೀಣ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೇಗಳಿಗೆ ಅರ್ಜಿ ಆಹ್ವಾನ-2025.
ಸರ್ಕಾರಿ ಆದೇಶ ಸಂಖ್ಯೆ: ಡಿಪಿಯುಇ-ಇಎಸ್ಟಿ30ಜಿಜಿ(ಎಲ್ ಪಿಎ)/6/2023-ಪಿಎಲ್ಸಿವೈ ದಿನಾಂಕ: 22.10.2024ರಂತೆ ನಮ್ಮ ಸಂಸ್ಥೆಯ ಅನುದಾನಿತ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಹಾಗೂ ಕನ್ನಡ ಉಪನ್ಯಾಸಕರ ಹುದ್ದೆಗಳಿಗೆ ಬ್ಯಾಕ್ಲಾಗ್ ನಿಯಮಗಳ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
- Click here…
ಉಪನ್ಯಾಸಕರ ಹುದ್ದೆಗಳ ವಿವರ.
Click Here To Download
ಅಭ್ಯರ್ಥಿಗಳ ವಯಸ್ಸು ವೇತನ ವಿದ್ಯಾರ್ಹತೆ ಮತ್ತು ಇತರೆ ಕರಾರುಗಳು ಕರ್ನಾಟಕ ಸರ್ಕಾರ ನಿಯಮಗಳ ಅನ್ವಯ ಇರುತ್ತವೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಮತ್ತು ಇತರೆ ದಾಖಲೆಗಳ ದೃಢೀಕೃತ ಪ್ರತಿಗಳೊಂದಿಗೆ ಅರ್ಜಿಯನ್ನು ಪ್ರಕಟಣೆಯ ದಿನಾಂಕದಿಂದ 21 ದಿನಗಳೊಳಗಾಗಿ ರೂ.1000 ಮೊತ್ತದ ಡಿಡಿಯನ್ನು ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆ (ರಿ), ಕೆನರಾ ಬ್ಯಾಂಕ್ ಶಾಖೆ, ನಾಯಕನಹಟ್ಟಿ ಇವರ ಹೆಸರಿನಲ್ಲಿ ತೆಗೆದು ಕಾರ್ಯದರ್ಶಿ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾಸಂಸ್ಥೆ (ರಿ) ನಾಯಕನಹಟ್ಟಿ ಚಳ್ಳಕೆರೆ ತಾಲ್ಲೂಕು ಚಿತ್ರದುರ್ಗ ಜಿಲ್ಲೆ-577536 ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿಯ ಒಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಚಿತ್ರದುರ್ಗ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣ ಚಿತ್ರದುರ್ಗ 577501 ಇವರ ವಿಳಾಸಕ್ಕೆ ಸಲ್ಲಿಸಬೇಕು.